ಚಾಮರಾಜನಗರದ ಬುದ್ಧನಗರದ ಎರಡನೇ ಕ್ರಾಸ್ ರಸ್ತೆಯಲ್ಲಿ ಕುಸಿದಿರುವ ಮ್ಯಾನ್ಹೋಲ್
ವಿಎಚ್ಪಿ ಶಾಲೆಗೆ ಸಂಪರ್ಕಿಸುವ ರಸ್ತೆಯಲ್ಲಿ ಹಾಳಾಗಿರುವ ಯುಜಿಡಿಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿರುವುದು
ರಾಘವೇಂದ್ರ ಚಿತ್ರಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಾಳಾಗಿರುವ ಯುಜಿಡಿ
ಕೊಳ್ಳೇಗಾಲ ನಗರದಲ್ಲಿ ಮ್ಯಾನ್ಹೋಲ್ ತುಂಬಿ ರಸ್ತೆಗೆ ಹೊಲಸು ಹರಿಯುತ್ತಿರುವುದು

ಕಳೆದ ತಿಂಗಳು ನಗರದಲ್ಲಿ ಮ್ಯಾನ್ಹೋಲ್ಗಳನ್ನು ದುರಸ್ತಿ ಮಾಡಲಾಗಿದೆ. ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ಪತ್ತೆ ಹಚ್ಚಿ ಮತ್ತೊಮ್ಮೆ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು.
–ರೇಖಾ ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ 
ನಗರದ ಹಲವು ಬಡಾವಣೆಗಳಲ್ಲಿ ಮ್ಯಾನ್ಹೋಲ್ ಮುಚ್ಳಳಗಳು ಹಾಳಾಗಿರುವ ದೂರುಗಳು ಬಂದಿದ್ದು ಈಗಾಗಲೇ 100 ಮುಚ್ಚಳಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ದುರಸ್ತಿಯಲ್ಲಿರುವ ಮ್ಯಾನ್ಹೋಲ್ಗಳನ್ನು ಗುರುತಿಸಿ ಮುಚ್ಚಳಗಳನ್ನು ಬದಲಾಯಿಸಲಾಗುವುದು.
–ಪ್ರಕಾಶ್, ಚಾಮರಾಜನಗರ ನಗರಸಭೆ ಪ್ರಭಾರ ಪೌರಾಯುಕ್ತ
ಬುದ್ಧ ನಗರದ ಎರಡನೇ ಕ್ರಾಸ್ ರಸ್ತೆಯಲ್ಲಿ ಮ್ಯಾನ್ಹೋಲ್ ಮುಚ್ಚಳ ಹಾಳಾಗಿದ್ದು ಬಡಾವಣೆಯ ಮಕ್ಕಳು ಸಹಿತ ನಾಗರಿಕರು ಓಡಾಡಲು ತೊಂದರೆಯಾಗಿದೆ. ದ್ವಿಚಕ್ರ ವಾಹನ ಕಾರುಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಅವಘಡಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿಗೊಳಿಸಬೇಕು.
–ಕೃಷ್ಣಮೂರ್ತಿ ಬುದ್ಧನಗರ ನಿವಾಸಿ