<p><strong>ಕೊಳ್ಳೇಗಾಲ:</strong> ಉದ್ಯೋಗದಲ್ಲಿದ್ದರೂ, ಕೃಷಿಯ ಸೆಳೆತ ಇವರನ್ನು ಬಿಟ್ಟಿಲ್ಲ. ಇಷ್ಟದ ಬೋಧನಾ ವೃತ್ತಿಯೊಂದಿಗೆ ವ್ಯವಸಾಯವನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ರಾಜೇಶ್.</p>.<p>ತಾಲ್ಲೂಕಿನ ಸಿಲ್ಕಲ್ಪುರ ಗ್ರಾಮದವರಾದ ರಾಜೇಶ್ ಅವರು ವಿವೇಕಾನಂದ ಕೈಗಾರಿಕಾ ತರಬೇತಿ ಕೇಂದ್ರದ (ಐಟಿಐ) ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಿದ್ದರೂ ಕೃಷಿ ಎಂದರೆ ಅವರಿಗೆ ಪ್ರಾಣ. ಕೆಲಸದ ನಂತರ ತಮ್ಮ ಜಮೀನಿನಲ್ಲಿ ಕೃಷಿ ಕಾಯಕವನ್ನು ಅವರು ಮುಂದುವರಿಸುತ್ತಿದ್ದಾರೆ.</p>.<p>ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಮಾಡಿರುವ ರಾಜೇಶ್ ಅವರದ್ದು ಮೂಲತಃ ಕೃಷಿ ಕುಟುಂಬ. ತಾತ, ಮುತ್ತಾತರ ಕಾಲದಿಂದಲೂ ಇವರ ಕುಟುಂಬ ಕೃಷಿಯನ್ನೇ ನಂಬಿ ಜೀವನವನ್ನು ಸಾಗಿಸುತ್ತಾ ಬಂದಿದೆ. ಅದೇ ಕಸುಬನ್ನು ಇವರು ಮುಂದುವರಿಸಿದ್ದಾರೆ.</p>.<p>ಬಾಲ್ಯದಿಂದಲೇ ಕೃಷಿಯ ಜೊತೆಗೆ ವಿದ್ಯಾಭ್ಯಾಸ ಮಾಡಿಕೊಂಡು ಬಂದಿರುವ ರಾಜೇಶ್ ಅವರು ತಮ್ಮ 15 ಎಕರೆ ಜಮೀನಿನಲ್ಲಿ ಮಿಶ್ರಬೆಳೆಗೆ ಒತ್ತು ನೀಡುತ್ತಿದ್ದಾರೆ.</p>.<p>ಇವರ ತಂದೆ ಒಂದೇ ಬೆಳೆಯನ್ನು ಬೆಳೆಯುತ್ತಿದ್ದರು. ತಾವು ಭಿನ್ನವಾಗಿರಬೇಕು ಎಂಬ ಉದ್ದೇಶದಿಂದ ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸಲು ಆರಂಭಿಸಿದರು.</p>.<p>ಕಬ್ಬು, ಬಾಳೆ, ಜೋಳ, ಟೊಮೆಟೊ, ಬದನೆಕಾಯಿ, ನುಗ್ಗೇಕಾಯಿ, ಮೆಣಸಿನ ಕಾಯಿ, ಸಪೋಟ, ತೆಂಗು, ಮಾವು, ಪಪ್ಪಾಯಿ, ಕಲ್ಲಂಗಡಿ, ಸೌತೆಕಾಯಿ ಸೇರಿದಂತೆ ತರಕಾರಿ ಹಾಗೂಸೊಪ್ಪುಗಳನ್ನು ಬೆಳೆಯುತ್ತಾರೆ. ಬಾಳೆ ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.</p>.<p class="Subhead"><strong>ಆರ್ಥಿಕ ನಷ್ಟವಿಲ್ಲ:</strong> ‘ಈವರೆಗೂ ಮಿಶ್ರ ಬೆಳೆಯಲ್ಲಿ ನನಗೆ ನಷ್ಟವಾಗಿಲ್ಲ. ಈ ಪದ್ದತಿಯಲ್ಲಿ ಒಂದು ಬೆಳೆಯಲ್ಲಿ ನಷ್ಟವಾದರೆ, ಇನ್ನೊಂದು ಬೆಳೆ ಅದನ್ನು ಸರಿದೂಗಿಸುತ್ತದೆ’ ಎಂದು ಹೇಳುತ್ತಾರೆ ರಾಜೇಶ್.</p>.<p>15 ಎಕರೆ ಜಮೀನಿನಲ್ಲಿ 6 ಕೊಳವೆ ಬಾವಿಗಳಿವೆ. ಎಲ್ಲಾ ಬೆಳೆಗಳಿಗೆ ಕೊಳವೆ ಬಾವಿಗಳ ನೀರನ್ನೇ ಅವಲಂಬಿಸಿದ್ದಾರೆ. ಅಗತ್ಯವಿರುವ ಕಡೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.</p>.<p>‘ಈ ಭಾಗದಲ್ಲಿ ಕಬಿನಿ ನಾಲೆ ನೀರು ಹರಿಯುತ್ತದೆ. ಹಾಗಾಗಿ ರೈತರಿಗೆ ಅನುಕೂಲವಾಗುತ್ತಿದೆ.ಕೃಷಿ ಜಮೀನುಗಳ ಕೊಳವೆ ಬಾವಿಗಳಲ್ಲಿ ನೀರು ಸದಾ ಇರುತ್ತದೆ. ಇದನ್ನು ಎಲ್ಲ ರೈತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ:</strong> ಉದ್ಯೋಗದಲ್ಲಿದ್ದರೂ, ಕೃಷಿಯ ಸೆಳೆತ ಇವರನ್ನು ಬಿಟ್ಟಿಲ್ಲ. ಇಷ್ಟದ ಬೋಧನಾ ವೃತ್ತಿಯೊಂದಿಗೆ ವ್ಯವಸಾಯವನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ರಾಜೇಶ್.</p>.<p>ತಾಲ್ಲೂಕಿನ ಸಿಲ್ಕಲ್ಪುರ ಗ್ರಾಮದವರಾದ ರಾಜೇಶ್ ಅವರು ವಿವೇಕಾನಂದ ಕೈಗಾರಿಕಾ ತರಬೇತಿ ಕೇಂದ್ರದ (ಐಟಿಐ) ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಿದ್ದರೂ ಕೃಷಿ ಎಂದರೆ ಅವರಿಗೆ ಪ್ರಾಣ. ಕೆಲಸದ ನಂತರ ತಮ್ಮ ಜಮೀನಿನಲ್ಲಿ ಕೃಷಿ ಕಾಯಕವನ್ನು ಅವರು ಮುಂದುವರಿಸುತ್ತಿದ್ದಾರೆ.</p>.<p>ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಮಾಡಿರುವ ರಾಜೇಶ್ ಅವರದ್ದು ಮೂಲತಃ ಕೃಷಿ ಕುಟುಂಬ. ತಾತ, ಮುತ್ತಾತರ ಕಾಲದಿಂದಲೂ ಇವರ ಕುಟುಂಬ ಕೃಷಿಯನ್ನೇ ನಂಬಿ ಜೀವನವನ್ನು ಸಾಗಿಸುತ್ತಾ ಬಂದಿದೆ. ಅದೇ ಕಸುಬನ್ನು ಇವರು ಮುಂದುವರಿಸಿದ್ದಾರೆ.</p>.<p>ಬಾಲ್ಯದಿಂದಲೇ ಕೃಷಿಯ ಜೊತೆಗೆ ವಿದ್ಯಾಭ್ಯಾಸ ಮಾಡಿಕೊಂಡು ಬಂದಿರುವ ರಾಜೇಶ್ ಅವರು ತಮ್ಮ 15 ಎಕರೆ ಜಮೀನಿನಲ್ಲಿ ಮಿಶ್ರಬೆಳೆಗೆ ಒತ್ತು ನೀಡುತ್ತಿದ್ದಾರೆ.</p>.<p>ಇವರ ತಂದೆ ಒಂದೇ ಬೆಳೆಯನ್ನು ಬೆಳೆಯುತ್ತಿದ್ದರು. ತಾವು ಭಿನ್ನವಾಗಿರಬೇಕು ಎಂಬ ಉದ್ದೇಶದಿಂದ ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸಲು ಆರಂಭಿಸಿದರು.</p>.<p>ಕಬ್ಬು, ಬಾಳೆ, ಜೋಳ, ಟೊಮೆಟೊ, ಬದನೆಕಾಯಿ, ನುಗ್ಗೇಕಾಯಿ, ಮೆಣಸಿನ ಕಾಯಿ, ಸಪೋಟ, ತೆಂಗು, ಮಾವು, ಪಪ್ಪಾಯಿ, ಕಲ್ಲಂಗಡಿ, ಸೌತೆಕಾಯಿ ಸೇರಿದಂತೆ ತರಕಾರಿ ಹಾಗೂಸೊಪ್ಪುಗಳನ್ನು ಬೆಳೆಯುತ್ತಾರೆ. ಬಾಳೆ ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.</p>.<p class="Subhead"><strong>ಆರ್ಥಿಕ ನಷ್ಟವಿಲ್ಲ:</strong> ‘ಈವರೆಗೂ ಮಿಶ್ರ ಬೆಳೆಯಲ್ಲಿ ನನಗೆ ನಷ್ಟವಾಗಿಲ್ಲ. ಈ ಪದ್ದತಿಯಲ್ಲಿ ಒಂದು ಬೆಳೆಯಲ್ಲಿ ನಷ್ಟವಾದರೆ, ಇನ್ನೊಂದು ಬೆಳೆ ಅದನ್ನು ಸರಿದೂಗಿಸುತ್ತದೆ’ ಎಂದು ಹೇಳುತ್ತಾರೆ ರಾಜೇಶ್.</p>.<p>15 ಎಕರೆ ಜಮೀನಿನಲ್ಲಿ 6 ಕೊಳವೆ ಬಾವಿಗಳಿವೆ. ಎಲ್ಲಾ ಬೆಳೆಗಳಿಗೆ ಕೊಳವೆ ಬಾವಿಗಳ ನೀರನ್ನೇ ಅವಲಂಬಿಸಿದ್ದಾರೆ. ಅಗತ್ಯವಿರುವ ಕಡೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.</p>.<p>‘ಈ ಭಾಗದಲ್ಲಿ ಕಬಿನಿ ನಾಲೆ ನೀರು ಹರಿಯುತ್ತದೆ. ಹಾಗಾಗಿ ರೈತರಿಗೆ ಅನುಕೂಲವಾಗುತ್ತಿದೆ.ಕೃಷಿ ಜಮೀನುಗಳ ಕೊಳವೆ ಬಾವಿಗಳಲ್ಲಿ ನೀರು ಸದಾ ಇರುತ್ತದೆ. ಇದನ್ನು ಎಲ್ಲ ರೈತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>