ಇನ್ನೂ ಕೆಲವರು ಜಾತ್ರೆಗೆ ಎರಡು ದಿನಗಳಿರುವಂತೆಯೇ ದೇವಸ್ಥಾನಕ್ಕೆ ಬಂದು ಠಿಕಾಣಿ ಹೂಡುತ್ತಾರೆ. ಜಾತ್ರೆಯ ಸಮಯದಲ್ಲಿ ನಡೆಯುವ ಎಣ್ಣೆಮಜ್ಜನ ಸೇವೆ, ಹಾಲರವಿ ಉತ್ಸವ, ಅಮಾವಾಸ್ಯೆ ಪೂಜೆ, ಹಾಗೂ ಮಹಾ ರಥೋತ್ಸವ, ಮತ್ತು ರಾತ್ರಿ ವೇಳೆ ನಡೆಯುವ ತೆಪ್ಪೋತ್ಸವವನ್ನು ಕಂಡು ಹರಕೆ ಮತ್ತು ಕಾಣಿಕೆ ಸಲ್ಲಿಸಿ ನೆಮ್ಮದಿಯಿಂದ ತೆರಳುತ್ತಿದ್ದರು.