ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಗುಂಡ್ಲುಪೇಟೆ | ಮಳೆ ಕೊರತೆ: ವರ್ಷದ ಹಿಂದೆ ತುಂಬಿದ್ದ ಕೆರೆಗಳೆಲ್ಲ ಭಣ ಭಣ

Published : 29 ಜನವರಿ 2024, 6:34 IST
Last Updated : 29 ಜನವರಿ 2024, 6:34 IST
ಫಾಲೋ ಮಾಡಿ
Comments
ವರ್ಷದ ವಾಡಿಕೆ ಮಳೆ 79.2 ಸೆಂ.ಮೀ ಕಳೆದ ವರ್ಷ ಬಿದ್ದ ಮಳೆ 57.49 ಕೃಷಿಗೆ ಕೊಳವೆಬಾವಿಗಳೇ ಆಧಾರ
‘ಶುಂಠಿ ಬೆಳೆ ನಿರ್ಬಂಧಿಸಿ’
ನೀರಿನ ಕೊರತೆ ಇರುವುದರಿಂದ ಶುಂಠಿ ಸೇರಿದಂತೆ ಹೆಚ್ಚು ನೀರು ಅಗತ್ಯವಿರುವ ಬೆಳೆಗಳನ್ನು ಬೆಳೆಯಲು ಜಿಲ್ಲಾಡಳಿತ ನಿರ್ಬಂಧ ವಿಧಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.  ‘ಬರದಿಂದಾಗಿ ಈ ವರ್ಷ ಎಲ್ಲ ಬೆಳೆಗಳ ಇಳುವರಿ ಕುಂಠಿತವಾಗಿದೆ. ಬೆಜ್ಜಲು ಭೂಮಿಯಲ್ಲಿ ಮಳೆ ನಂಬಿ ಬೇಸಾಯ ಮಾಡುವವರು ಹಾಕಿದ ಬಂಡವಾಳವೂ ಕೈ ಸೇರಿಲ್ಲ. ಆದರೆ ಹೊರ ರಾಜ್ಯದವರು ಶುಂಠಿ ಬೆಳೆಯುವುದಕ್ಕಾಗಿ ಜಮೀನುಗಳಲ್ಲಿ ಹೆಚ್ಚು ಕೊಳವೆಬಾವಿಗಳನ್ನು ಕೊರೆಸುತ್ತಿದ್ದಾರೆ’ ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಕೊಳವೆ ಬಾವಿಗಳನ್ನು ಹೆಚ್ಚು ಕೊರೆಯುವುದರಿಂದ ನೀರಿನ ಅಭಾವ ಹೆಚ್ಚಾಗಲಿದೆ. ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಇರುವುದರಿಂದ ಶುಂಠಿ ಸೇರಿದಂತೆ ಹೆಚ್ವು ನೀರು ಬಳಕೆಯಾಗುವ ಬೆಳೆಗಳನ್ನು ನಿರ್ಬಂಧಿಸಲು ಜಿಲ್ಲಾಧಿಕಾರಿಯವರು ಗಮನಹರಿಸಬೇಕು’ ಎಂದು ಅವರು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT