ಆನೆಗಳು ಗ್ರಾಮದೊಳಗೆ ಬಂದಿಲ್ಲ. ಅವು ಕಾಡಿನಲ್ಲೇ ಇದೆ. ಮಂಚಹಳ್ಳಿ, ಶ್ರೀಕಂಠಪುರ ಕಾಡಂಚಿನಲ್ಲಿದ್ದು, ಆನೆಗಳ ಹಿಂಡು ರಸ್ತೆಗೇ ಕಾಣಿಸುತ್ತಿದೆ. ಆದರೆ, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಅವುಗಳ ಫೋಟೊ ತೆಗೆಯುವ ಮೂಲಕ ತೊಂದರೆ ನೀಡುತ್ತಿದ್ದಾರೆ. ಆನೆಗಳನ್ನು ಅವುಗಳ ಪಾಡಿಗೆ ಬಿಟ್ಟರೆ ಕಾಡಿಗೆ ಹೋಗುತ್ತವೆ. ಯಾವುದೇ ರೀತಿಯ ತೊಂದರೆ ಮಾಡಿದರೆ ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ತಿಳಿಸಿದರು.