ಅಪರೂಪದ ದೊಡ್ಡ ರಾಗಿ ತಳಿಯನ್ನು ಉಳಿಸಬೇಕಾಗಿದೆ. ಭೌಗೋಳಿಕ ಮಾನ್ಯತೆ ಸಿಕ್ಕರೆ ಈ ಪ್ರಯತ್ನಕ್ಕೆ ಅನುಕೂಲವಾಗಲಿದೆ
ಹೊನ್ನೂರು ಪ್ರಕಾಶ್ ರೈತ ಮುಖಂಡ
ಗ್ರಾಹಕರಿಂದ ನೇರ ಖರೀದಿ
ರೈತರು ಬೆಳೆದಿರುವ ದೊಡ್ಡ ರಾಗಿಯಲ್ಲಿ 200 ಕ್ವಿಂಟಲ್ಗಳನ್ನು ತುಮಕೂರಿನ ಗಾಂಧೀಜಿ ಸಹಜ ಬೇಸಾಯ ಆಶ್ರಮದ ತಜ್ಞ ಎಚ್.ಮಂಜುನಾಥ ಅವರ ನೇತೃತ್ವದಲ್ಲಿ ಬೆಂಗಳೂರಿನ ಸಹಜ ಕೃಷಿ ಪ್ರೋತ್ಸಾಹಕರು ತಮ್ಮ ಬಳಕೆಗಾಗಿ ನೇರವಾಗಿ ಖರೀದಿ ಮಾಡಿದ್ದಾರೆ. ‘ಕೃಷಿಕರು ರಾಸಾಯನಿಕ ಸಿಂಪಡಣೆ ಮಾಡಿ ಬೆಳೆಸಿದ ರಾಗಿಯ ಬೆಲೆಯಲ್ಲೇ ಇಲ್ಲಿವರೆಗೆ ಮಾರಾಟ ಮಾಡುತ್ತಿದ್ದರು. ದೊಡ್ಡ ಆದಾಯವೂ ಸಿಗುತ್ತಿರಲಿಲ್ಲ. ಈ ವರ್ಷ ರಾಗಿಯನ್ನು ಬೆಂಗಳೂರಿಗೆ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದ್ದಾರೆ. ಅವರಿಗೆ ಉತ್ತಮ ಬೆಲೆಯೂ ಸಿಕ್ಕಿದೆ’ ಎಂದು ಹೊನ್ನೂರು ಪ್ರಕಾಶ್ ಮಾಹಿತಿ ನೀಡಿದರು.