<p><strong>ಸಂತೇಮರಹಳ್ಳಿ</strong>: ಈ ರೈತ ಮಹಿಳೆಗೆ ಕೃಷಿ ಎಂದರೆ ಆರ್ಥಿಕವಾಗಿ ಲಾಭಗಳಿಸುವ ದಾರಿ ಅಲ್ಲ. ಹಾಗಾಗಿ, ರಾಸಾಯನಿಕ ವಸ್ತುಗಳಿಗೆ ಇವರ ಜಮೀನಿನಲ್ಲಿ ಜಾಗ ಇಲ್ಲ. ಭೂಮಿಯ ಫಲವತ್ತತೆ ಹಾಳು ಮಾಡದೆ, ನೈಸರ್ಗಿಕವಾಗಿ ಆರೋಗ್ಯಕರ ಹಣ್ಣುಗಳನ್ನು ಬೆಳೆದು ತಕ್ಕಮಟ್ಟಿಗೆ ಆದಾಯ ಗಳಿಸುತ್ತಿದ್ದಾರೆ ಜಯಮ್ಮ.</p>.<p>ಸಂತೇಮರಹಳ್ಳಿಯ ಕುದೇರು ರಸ್ತೆಯ ತೋಟದಲ್ಲಿರುವ ಜಯಮ್ಮ ಐದು ವರ್ಷಗಳಿಂದ ನೈಸರ್ಗಿಕ ವಿಧಾನದಲ್ಲಿ ವಿವಿಧ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.ಒಂದು ಎಕರೆಯಲ್ಲಿ ಬೆಣ್ಣೆಹಣ್ಣು, ವಾಟರ್ ಆ್ಯಪಲ್, ಪಪ್ಪಾಯ, ನಿಂಬೆ, ದಾಳಿಂಬೆ, ಸೀಬೆ ಬೆಳೆಯುತ್ತಿದ್ದಾರೆ. ಸಾವಯವ ಬೇಸಾಯದಲ್ಲಿ ರಾಗಿ ಬೆಳೆಯುತ್ತಿದ್ದಾರೆ. ಬಟನ್ ಗುಲಾಬಿಯ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ.</p>.<p>ಜಯಮ್ಮ ಬೆಳೆಯುವ ಎಲ್ಲ ಬೆಳೆಗಳಿಗೂ ತುಂಬಾ ಬೇಡಿಕೆ ಇದೆ. ಹಣ್ಣುಗಳನ್ನು ಕಷ್ಟದಲ್ಲಿರುವವರಿಗೆ ಅರ್ಧ ಬೆಲೆಗೆ ಅಥವಾ ಉದಾರವಾಗಿ ನೀಡುತ್ತಾ ಬಂದಿದ್ದಾರೆ.</p>.<p>ಬೆಣ್ಣೆ ಹಣ್ಣನ್ನು ಪ್ರತಿ ಕೆಜಿಗೆ ₹ 150 ರಂತೆ ಮಾರಾಟ ಮಾಡುತ್ತಿದ್ದಾರೆ. ವಾರ್ಷಿಕವಾಗಿ ಫಲ ಬಿಡುವ ಈ ಹಣ್ಣಿನಿಂದ ಪ್ರತಿ ವರ್ಷ ₹ 50 ಸಾವಿರ ಆದಾಯ ಗಳಿಸುತ್ತಾರೆ. ವಾಟರ್ ಆ್ಯಪಲ್ಗೂ ಬೇಡಿಕೆ ಇದ್ದು, ಇದರಿಂದಲೂ ₹50 ಸಾವಿರಕ್ಕೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡುತ್ತಾರೆ.</p>.<p>ಪಪ್ಪಾಯ, ನಿಂಬೆ, ದಾಳಿಂಬೆ ಹಣ್ಣುಗಳನ್ನು ಜಯಮ್ಮ ಅವರು ಹೊರಗಡೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದಿಲ್ಲ. ತಮ್ಮ ತೋಟದಲ್ಲಿಯೇ ಮಾರಾಟ ಮಾಡುತ್ತಾರೆ.</p>.<p>ಅರ್ಧ ಎಕರೆಯಲ್ಲಿ ರಾಗಿ ಬೆಳೆಯುತ್ತಿದ್ದಾರೆ. ಹಣ್ಣುಗಳು ಮತ್ತು ರಾಗಿ ಬೆಳೆಗೆ ಯಾವುದೇ ರಾಸಯನಿಕ ಗೊಬ್ಬರ ಬಳಸುವುದಿಲ್ಲ. ಇದಕ್ಕಾಗಿಯೇ ಎರಡು ಹಸುಗಳನ್ನು ಸಾಕಿಕೊಂಡಿದ್ದಾರೆ. ಕೊಟ್ಟಿಗೆ ಗೊಬ್ಬರ ಬಳಸಿ ಸಾವಯವ ಕೃಷಿಕರಾಗಿದ್ದಾರೆ.</p>.<p>10 ಗುಂಟೆ ಪ್ರದೇಶದಲ್ಲಿ ಬಟನ್ ಗುಲಾಬಿ ಬೆಳೆಯುತ್ತಿದ್ದಾರೆ. ವಾರಕ್ಕೊಮ್ಮೆ ಕಟಾವಿಗೆ ಬರುವ ಈ ಗುಲಾಬಿ, ಕೆಜಿಗೆ ₹100ರಂತೆ ಮಾರಾಟ ಮಾಡುತ್ತಾರೆ. ಪ್ರತಿವಾರ 5ರಿಂದ 10 ಕೆಜಿವರೆಗೆ ಗುಲಾಬಿ ಸಿಗುತ್ತದೆ.</p>.<p>ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಕೃಷಿ ವಿಶ್ವ ವಿದ್ಯಾಲಯದ ತರಬೇತಿ ವಿದ್ಯಾರ್ಥಿಗಳು ಹಾಗೂ ವ್ಯವಸಾಯ ತಜ್ಞರು ಇವರ ಜಮೀನಿಗೆ ಭೇಟಿ ನೀಡಿ ಕೃಷಿ ವಿಧಾನಗಳನ್ನು ಅಧ್ಯಯನ ನಡೆಸುತ್ತಾರೆ. ವ್ಯವಸಾಯಕ್ಕೆ ಮೆಚ್ಚುಗೆ ಸೂಚಿಸಿ ಜತೆಗೆ ಅನುಭವ ಪಡೆದು ಹೋಗುತ್ತಾರೆ.</p>.<p>‘ವ್ಯವಸಾಯದಲ್ಲಿ ಹಣ ಗಳಿಸುವುದರ ಜೊತೆಗೆ ಆರೋಗ್ಯವು ಮುಖ್ಯ. ಹೀಗಾಗಿ ಮಕ್ಕಳಿಗಾಗಿ ಸಪೋಟ, ನೇರಳೆ, ಬೇಲ ಹಾಗೂ ನಿಂಬೆಗಳನ್ನು ಬೆಳೆಯುತ್ತಿದ್ದೇವೆ. ಹೆಚ್ಚು ವ್ಯಾಪಾರವನ್ನು ನಾವು ಇಷ್ಟ ಪಡುವುದಿಲ್ಲ’ ಎಂದು ಹೇಳುತ್ತಾರೆ ಜಯಮ್ಮ.</p>.<p>ಜಯಮ್ಮ ಅವರ ಕೃಷಿ ಕಾಯಕಕ್ಕೆ ಅವರ ಪತಿ ನಿವೃತ್ತ ಸರ್ಕಾರಿ ನೌಕರ ಪಪ್ಪಣ್ಣಶೆಟ್ಟಿ ಅವರು ಕೈಜೋಡಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಮರಹಳ್ಳಿ</strong>: ಈ ರೈತ ಮಹಿಳೆಗೆ ಕೃಷಿ ಎಂದರೆ ಆರ್ಥಿಕವಾಗಿ ಲಾಭಗಳಿಸುವ ದಾರಿ ಅಲ್ಲ. ಹಾಗಾಗಿ, ರಾಸಾಯನಿಕ ವಸ್ತುಗಳಿಗೆ ಇವರ ಜಮೀನಿನಲ್ಲಿ ಜಾಗ ಇಲ್ಲ. ಭೂಮಿಯ ಫಲವತ್ತತೆ ಹಾಳು ಮಾಡದೆ, ನೈಸರ್ಗಿಕವಾಗಿ ಆರೋಗ್ಯಕರ ಹಣ್ಣುಗಳನ್ನು ಬೆಳೆದು ತಕ್ಕಮಟ್ಟಿಗೆ ಆದಾಯ ಗಳಿಸುತ್ತಿದ್ದಾರೆ ಜಯಮ್ಮ.</p>.<p>ಸಂತೇಮರಹಳ್ಳಿಯ ಕುದೇರು ರಸ್ತೆಯ ತೋಟದಲ್ಲಿರುವ ಜಯಮ್ಮ ಐದು ವರ್ಷಗಳಿಂದ ನೈಸರ್ಗಿಕ ವಿಧಾನದಲ್ಲಿ ವಿವಿಧ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.ಒಂದು ಎಕರೆಯಲ್ಲಿ ಬೆಣ್ಣೆಹಣ್ಣು, ವಾಟರ್ ಆ್ಯಪಲ್, ಪಪ್ಪಾಯ, ನಿಂಬೆ, ದಾಳಿಂಬೆ, ಸೀಬೆ ಬೆಳೆಯುತ್ತಿದ್ದಾರೆ. ಸಾವಯವ ಬೇಸಾಯದಲ್ಲಿ ರಾಗಿ ಬೆಳೆಯುತ್ತಿದ್ದಾರೆ. ಬಟನ್ ಗುಲಾಬಿಯ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ.</p>.<p>ಜಯಮ್ಮ ಬೆಳೆಯುವ ಎಲ್ಲ ಬೆಳೆಗಳಿಗೂ ತುಂಬಾ ಬೇಡಿಕೆ ಇದೆ. ಹಣ್ಣುಗಳನ್ನು ಕಷ್ಟದಲ್ಲಿರುವವರಿಗೆ ಅರ್ಧ ಬೆಲೆಗೆ ಅಥವಾ ಉದಾರವಾಗಿ ನೀಡುತ್ತಾ ಬಂದಿದ್ದಾರೆ.</p>.<p>ಬೆಣ್ಣೆ ಹಣ್ಣನ್ನು ಪ್ರತಿ ಕೆಜಿಗೆ ₹ 150 ರಂತೆ ಮಾರಾಟ ಮಾಡುತ್ತಿದ್ದಾರೆ. ವಾರ್ಷಿಕವಾಗಿ ಫಲ ಬಿಡುವ ಈ ಹಣ್ಣಿನಿಂದ ಪ್ರತಿ ವರ್ಷ ₹ 50 ಸಾವಿರ ಆದಾಯ ಗಳಿಸುತ್ತಾರೆ. ವಾಟರ್ ಆ್ಯಪಲ್ಗೂ ಬೇಡಿಕೆ ಇದ್ದು, ಇದರಿಂದಲೂ ₹50 ಸಾವಿರಕ್ಕೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡುತ್ತಾರೆ.</p>.<p>ಪಪ್ಪಾಯ, ನಿಂಬೆ, ದಾಳಿಂಬೆ ಹಣ್ಣುಗಳನ್ನು ಜಯಮ್ಮ ಅವರು ಹೊರಗಡೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದಿಲ್ಲ. ತಮ್ಮ ತೋಟದಲ್ಲಿಯೇ ಮಾರಾಟ ಮಾಡುತ್ತಾರೆ.</p>.<p>ಅರ್ಧ ಎಕರೆಯಲ್ಲಿ ರಾಗಿ ಬೆಳೆಯುತ್ತಿದ್ದಾರೆ. ಹಣ್ಣುಗಳು ಮತ್ತು ರಾಗಿ ಬೆಳೆಗೆ ಯಾವುದೇ ರಾಸಯನಿಕ ಗೊಬ್ಬರ ಬಳಸುವುದಿಲ್ಲ. ಇದಕ್ಕಾಗಿಯೇ ಎರಡು ಹಸುಗಳನ್ನು ಸಾಕಿಕೊಂಡಿದ್ದಾರೆ. ಕೊಟ್ಟಿಗೆ ಗೊಬ್ಬರ ಬಳಸಿ ಸಾವಯವ ಕೃಷಿಕರಾಗಿದ್ದಾರೆ.</p>.<p>10 ಗುಂಟೆ ಪ್ರದೇಶದಲ್ಲಿ ಬಟನ್ ಗುಲಾಬಿ ಬೆಳೆಯುತ್ತಿದ್ದಾರೆ. ವಾರಕ್ಕೊಮ್ಮೆ ಕಟಾವಿಗೆ ಬರುವ ಈ ಗುಲಾಬಿ, ಕೆಜಿಗೆ ₹100ರಂತೆ ಮಾರಾಟ ಮಾಡುತ್ತಾರೆ. ಪ್ರತಿವಾರ 5ರಿಂದ 10 ಕೆಜಿವರೆಗೆ ಗುಲಾಬಿ ಸಿಗುತ್ತದೆ.</p>.<p>ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಕೃಷಿ ವಿಶ್ವ ವಿದ್ಯಾಲಯದ ತರಬೇತಿ ವಿದ್ಯಾರ್ಥಿಗಳು ಹಾಗೂ ವ್ಯವಸಾಯ ತಜ್ಞರು ಇವರ ಜಮೀನಿಗೆ ಭೇಟಿ ನೀಡಿ ಕೃಷಿ ವಿಧಾನಗಳನ್ನು ಅಧ್ಯಯನ ನಡೆಸುತ್ತಾರೆ. ವ್ಯವಸಾಯಕ್ಕೆ ಮೆಚ್ಚುಗೆ ಸೂಚಿಸಿ ಜತೆಗೆ ಅನುಭವ ಪಡೆದು ಹೋಗುತ್ತಾರೆ.</p>.<p>‘ವ್ಯವಸಾಯದಲ್ಲಿ ಹಣ ಗಳಿಸುವುದರ ಜೊತೆಗೆ ಆರೋಗ್ಯವು ಮುಖ್ಯ. ಹೀಗಾಗಿ ಮಕ್ಕಳಿಗಾಗಿ ಸಪೋಟ, ನೇರಳೆ, ಬೇಲ ಹಾಗೂ ನಿಂಬೆಗಳನ್ನು ಬೆಳೆಯುತ್ತಿದ್ದೇವೆ. ಹೆಚ್ಚು ವ್ಯಾಪಾರವನ್ನು ನಾವು ಇಷ್ಟ ಪಡುವುದಿಲ್ಲ’ ಎಂದು ಹೇಳುತ್ತಾರೆ ಜಯಮ್ಮ.</p>.<p>ಜಯಮ್ಮ ಅವರ ಕೃಷಿ ಕಾಯಕಕ್ಕೆ ಅವರ ಪತಿ ನಿವೃತ್ತ ಸರ್ಕಾರಿ ನೌಕರ ಪಪ್ಪಣ್ಣಶೆಟ್ಟಿ ಅವರು ಕೈಜೋಡಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>