<p><strong>ಕೊಳ್ಳೇಗಾಲ (ಚಾಮರಾಜನಗರ):</strong> ನಗರದ ಬಸ್ ನಿಲ್ದಾಣದಲ್ಲಿ ಶನಿವಾರ ಮಹದೇಶ್ವರ ಬೆಟ್ಟಕ್ಕೆ ತೆರಳುವ ಬಸ್ಗೆ ಹತ್ತಲು ಮಹಿಳೆಯರ ನಡುವೆ ಉಂಟಾದ ಪೈಪೋಟಿಯಲ್ಲಿ ಬಸ್ನ ಬಾಗಿಲು ಕಿತ್ತು ಬಂದಿದೆ. </p><p>ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ನಡೆಯುವ ಸೇವೆಯಲ್ಲಿ ಭಾಗವಹಿಸಲು ಬೆಟ್ಗಕ್ಕೆ ತೆರಳುವುದಕ್ಕಾಗಿ ಸಾವಿರಾರು ಮಂದಿ ಭಕ್ತರು ಕೊಳ್ಳೇಗಾಲದ ನಿಲ್ದಾಣದಲ್ಲಿ ಸೇರಿದ್ದರು. </p><p>ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಬಸ್ ಕೊರತೆ ಉಂಟಾಗಿತ್ತು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹೀಗಾಗಿ ಬಸ್ಗಳಿಗೆ ಹತ್ತಲು ಪೈಪೋಟಿ ಕಂಡು ಬಂತು. </p><p>ಶನಿವಾರ ಮಧ್ಯಾಹ್ನ 3.45ರ ಹೊತ್ತಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದ ಬಸ್ಗೆ ಹತ್ತಲು ಮಹಿಳೆಯರು ಮುಗಿ ಬಿದ್ದರು. ತೆರೆದಿದ್ದ ಬಾಗಿಲ ಮೇಲೆ ಬಲಹಾಕಿ ಬಸ್ ಹತ್ತುವ ಭರದಲ್ಲಿ ಬಾಗಿಲು ಕಿತ್ತು ಬಂದಿದೆ. ನಂತರ ಮಹಿಳೆಯರನ್ನೆಲ್ಲ ಬಸ್ನಿಂದ ಕೆಳಗಿಳಿಸಿ ಬೇರೆ ಬಸ್ನಲ್ಲಿ ಕಳುಹಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ (ಚಾಮರಾಜನಗರ):</strong> ನಗರದ ಬಸ್ ನಿಲ್ದಾಣದಲ್ಲಿ ಶನಿವಾರ ಮಹದೇಶ್ವರ ಬೆಟ್ಟಕ್ಕೆ ತೆರಳುವ ಬಸ್ಗೆ ಹತ್ತಲು ಮಹಿಳೆಯರ ನಡುವೆ ಉಂಟಾದ ಪೈಪೋಟಿಯಲ್ಲಿ ಬಸ್ನ ಬಾಗಿಲು ಕಿತ್ತು ಬಂದಿದೆ. </p><p>ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ನಡೆಯುವ ಸೇವೆಯಲ್ಲಿ ಭಾಗವಹಿಸಲು ಬೆಟ್ಗಕ್ಕೆ ತೆರಳುವುದಕ್ಕಾಗಿ ಸಾವಿರಾರು ಮಂದಿ ಭಕ್ತರು ಕೊಳ್ಳೇಗಾಲದ ನಿಲ್ದಾಣದಲ್ಲಿ ಸೇರಿದ್ದರು. </p><p>ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಬಸ್ ಕೊರತೆ ಉಂಟಾಗಿತ್ತು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹೀಗಾಗಿ ಬಸ್ಗಳಿಗೆ ಹತ್ತಲು ಪೈಪೋಟಿ ಕಂಡು ಬಂತು. </p><p>ಶನಿವಾರ ಮಧ್ಯಾಹ್ನ 3.45ರ ಹೊತ್ತಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದ ಬಸ್ಗೆ ಹತ್ತಲು ಮಹಿಳೆಯರು ಮುಗಿ ಬಿದ್ದರು. ತೆರೆದಿದ್ದ ಬಾಗಿಲ ಮೇಲೆ ಬಲಹಾಕಿ ಬಸ್ ಹತ್ತುವ ಭರದಲ್ಲಿ ಬಾಗಿಲು ಕಿತ್ತು ಬಂದಿದೆ. ನಂತರ ಮಹಿಳೆಯರನ್ನೆಲ್ಲ ಬಸ್ನಿಂದ ಕೆಳಗಿಳಿಸಿ ಬೇರೆ ಬಸ್ನಲ್ಲಿ ಕಳುಹಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>