ರಾಜ್ಯ ನಾಯಕರು ಅಭಿಪ್ರಾಯ ಸಂಗ್ರಹಿಸಿದ್ದು ಸಂಭಾವ್ಯರ ಹೆಸರು ಶಿಫಾರಸು ಮಾಡಲಿದ್ದಾರೆ. ಸಂಸದೀಯ ಮಂಡಳಿ ಹೆಸರನ್ನು ಅಂತಿಮಗೊಳಿಸಲಿದೆ.
-ಸಿ.ಎಸ್.ನಿರಂಜನ್ ಕುಮಾರ್ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಾಮರಾಜನಗರ
ಮೂವರ ಹೆಸರು ಅಂತಿಮ
ಕೆಲವು ದಿನಗಳ ಹಿಂದೆ ಬಿಜೆಪಿ ಮುಖಂಡ ಸಿ.ಟಿ.ರವಿ ಶಾಸಕ ಉಮಾಕಾಂತ್ ಕೋಟ್ಯಾನ್ ನೇತೃತ್ವದ ತಂಡ ಮೈಸೂರಿನಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಪದಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದೆ. ಆಕಾಂಕ್ಷಿಗಳ ಪೈಕಿ ಹಲವರ ಹೆಸರು ಅಲ್ಲಿ ಪ್ರಸ್ತಾಪವಾಗಿದೆ. ಮೂವರ ಹೆಸರು ಅಂತಿಮವಾಗಿದೆ. ಅವರಲ್ಲಿ ಇಬ್ಬರ ನಡುವೆ ಹೆಚ್ಚಿನ ಪೈಪೋಟಿ ಇದೆ ಎಂದು ತಿಳಿದು ಬಂದಿದೆ. ‘ಕೊನೆ ಕ್ಷಣದಲ್ಲಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಇಲ್ಲದವರೂ ಅಭ್ಯರ್ಥಿಯಾದರೂ ಅಚ್ಚರಿ ಇಲ್ಲ. ಯಾರೇ ಆದರೂ ಈ ಬಾರಿ ಕ್ಷೇತ್ರದಿಂದ ಹೊಸ ಮುಖ ಸ್ಪರ್ಧಿಸುವುದಂತು ಖಚಿತ’ ಎಂದು ಹೇಳುತ್ತಾರೆ ಮುಖಂಡರು.