<p><strong>ಚಾಮರಾಜನಗರ</strong>: ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್) 450 ಹಾಸಿಗೆ ಸಾಮರ್ಥ್ಯದ ಹೊಸ ಬೋಧನಾ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಮೈಸೂರು ರಾಜವಂಶಸ್ಥರ ಆಡಳಿತವನ್ನು, ಅದರಲ್ಲೂ ವಿಶೇಷವಾಗಿ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆಗಳನ್ನು ಶ್ಲಾಘಿಸಿದರು.</p>.<p>‘ಯೋಚನೆ ಹಾಗೂ ಕ್ರಿಯೆಯಲ್ಲಿ ಸಾಕಷ್ಟು ಮುಂದೆ ಇದ್ದ ರಾಜರನ್ನು ಹೊಂದಿದ್ದ ಅದೃಷ್ಟ ಈ ಪ್ರಾಂತ್ಯದ್ದು. ಮಹಾರಾಜ ಚಾಮರಾಜ ಒಡೆಯರ್ ಸಮಾಜ ಸುಧಾರಕರಾಗಿದ್ದರು. 1881ರಲ್ಲೇ ಮೈಸೂರಿನಲ್ಲಿ ಬಾಲಕಿಯರಿಗಾಗಿ ಕನ್ನಡ ಮಾಧ್ಯಮ ಶಾಲೆ ತೆರೆದಿದ್ದರು. ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಕೋವಿಂದ್ ಸ್ಮರಿಸಿದರು.</p>.<p>‘ರಾಜ ವಂಶಸ್ಥರ ಪ್ರಗತಿಪರ ಪರಂಪರೆಯನ್ನು ಜಯಚಾಮರಾಜೇಂದ್ರ ಒಡೆಯರ್ ಮುಂದುವರೆಸಿದ್ದರು. ದೇಶದ ಸ್ವಾತಂತ್ರ್ಯ ನಂತರ ತಮ್ಮ ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಒಡೆಯರ್ ಮೊದಲಿಗರು. ನಾನು ಅವರನ್ನು ಒಬ್ಬ ರಾಜ ಮತ್ತು ಪ್ರಭುತ್ವವಾದಿ ಎಂದು ಕರೆಯಲು ಇಚ್ಛಿಸುತ್ತೇನೆ’ ಎಂದರು.</p>.<p>‘ಮೈಸೂರಿನ ಸಿರಿವಂತ ಸಂಸ್ಕೃತಿಯನ್ನು ಪಾಶ್ಚಿಮಾತ್ಯದಲ್ಲಿದ್ದ ಅತ್ಯುತ್ತಮ ನಾಗರಿಕತೆಯೊಂದಿಗೆ ಬೆರೆಸಿದ್ದರು. ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಸಿರಿವಂತಗೊಳಿಸಿದ್ದರು. ಉದ್ಯಮಶೀಲತೆ ಮತ್ತು ಕೈಗಾರಿಕೆಗೆ ಉತ್ತಮ ಬೆಂಬಲವನ್ನೂ ನೀಡಿದ್ದರು. ಜನರ ಬೇಡಿಕೆ ಮೇರೆಗೆ ಕರ್ನಾಟಕದ ಮೊದಲ ರಾಜ್ಯಪಾಲರಾಗಿ ಅವರನ್ನು ನೇಮಿಸಲಾಗಿತ್ತು’ ಎಂದು ರಾಷ್ಟ್ರಪತಿ ಕೊಂಡಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್) 450 ಹಾಸಿಗೆ ಸಾಮರ್ಥ್ಯದ ಹೊಸ ಬೋಧನಾ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಮೈಸೂರು ರಾಜವಂಶಸ್ಥರ ಆಡಳಿತವನ್ನು, ಅದರಲ್ಲೂ ವಿಶೇಷವಾಗಿ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆಗಳನ್ನು ಶ್ಲಾಘಿಸಿದರು.</p>.<p>‘ಯೋಚನೆ ಹಾಗೂ ಕ್ರಿಯೆಯಲ್ಲಿ ಸಾಕಷ್ಟು ಮುಂದೆ ಇದ್ದ ರಾಜರನ್ನು ಹೊಂದಿದ್ದ ಅದೃಷ್ಟ ಈ ಪ್ರಾಂತ್ಯದ್ದು. ಮಹಾರಾಜ ಚಾಮರಾಜ ಒಡೆಯರ್ ಸಮಾಜ ಸುಧಾರಕರಾಗಿದ್ದರು. 1881ರಲ್ಲೇ ಮೈಸೂರಿನಲ್ಲಿ ಬಾಲಕಿಯರಿಗಾಗಿ ಕನ್ನಡ ಮಾಧ್ಯಮ ಶಾಲೆ ತೆರೆದಿದ್ದರು. ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಕೋವಿಂದ್ ಸ್ಮರಿಸಿದರು.</p>.<p>‘ರಾಜ ವಂಶಸ್ಥರ ಪ್ರಗತಿಪರ ಪರಂಪರೆಯನ್ನು ಜಯಚಾಮರಾಜೇಂದ್ರ ಒಡೆಯರ್ ಮುಂದುವರೆಸಿದ್ದರು. ದೇಶದ ಸ್ವಾತಂತ್ರ್ಯ ನಂತರ ತಮ್ಮ ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಒಡೆಯರ್ ಮೊದಲಿಗರು. ನಾನು ಅವರನ್ನು ಒಬ್ಬ ರಾಜ ಮತ್ತು ಪ್ರಭುತ್ವವಾದಿ ಎಂದು ಕರೆಯಲು ಇಚ್ಛಿಸುತ್ತೇನೆ’ ಎಂದರು.</p>.<p>‘ಮೈಸೂರಿನ ಸಿರಿವಂತ ಸಂಸ್ಕೃತಿಯನ್ನು ಪಾಶ್ಚಿಮಾತ್ಯದಲ್ಲಿದ್ದ ಅತ್ಯುತ್ತಮ ನಾಗರಿಕತೆಯೊಂದಿಗೆ ಬೆರೆಸಿದ್ದರು. ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಸಿರಿವಂತಗೊಳಿಸಿದ್ದರು. ಉದ್ಯಮಶೀಲತೆ ಮತ್ತು ಕೈಗಾರಿಕೆಗೆ ಉತ್ತಮ ಬೆಂಬಲವನ್ನೂ ನೀಡಿದ್ದರು. ಜನರ ಬೇಡಿಕೆ ಮೇರೆಗೆ ಕರ್ನಾಟಕದ ಮೊದಲ ರಾಜ್ಯಪಾಲರಾಗಿ ಅವರನ್ನು ನೇಮಿಸಲಾಗಿತ್ತು’ ಎಂದು ರಾಷ್ಟ್ರಪತಿ ಕೊಂಡಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>