<p><strong>ಹನೂರು: </strong>ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ರಾಮಾಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ಸಾರ್ವಜನಿಕರು ಸಂಚರಿಸಲು ಪ್ರಯಾಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.</p>.<p>ಕೇಂದ್ರದಲ್ಲಿ ಸುತ್ತಾಡಿದರೆ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ರಸ್ತೆ ಬದಿಯಲ್ಲಿ ನಿಂತಿರುವ ಕೊಳಚೆ ನೀರು, ರಸ್ತೆ ಮಧ್ಯದಲ್ಲೇ ಮಲಗಿರುವ ಬಿಡಾಡಿ ದನಗಳು, ಚರಂಡಿಯಲ್ಲಿ ಮಲಗಿರುವ ಹಂದಿಗಳು ಕಾಣಸಿಗುತ್ತವೆ. ಜನರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾಗಿದೆ. ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿಯೂ ಅವರನ್ನು ಕಾಡುತ್ತಿದೆ.</p>.<p>ತಾಲ್ಲೂಕಿನ ಮೂರು ಹೋಬಳಿಗಳಲ್ಲಿ ರಾಮಾಪುರ ಅತ್ಯಂತ ದೊಡ್ಡ ಹೋಬಳಿ. ಗ್ರಾಮದಲ್ಲಿ 4,000 ಕುಟುಂಬಗಳಿದ್ದು, ಅಂದಾಜು 12 ಸಾವಿರ ಜನಸಂಖ್ಯೆ ಇದೆ. ಈ ಬಾರಿ ಬಿದ್ದ ಉತ್ತಮ ಮಳೆಗೆ ರಸ್ತೆಯಲ್ಲೆಲ್ಲಾ ಗುಂಡಿಗಳು ಉಂಟಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.</p>.<p class="Subhead"><strong>ಕಸವೋ ಕಸ:</strong> ಸ್ವಚ್ಛತೆ ಎಂಬುದು ಇಲ್ಲಿ ಮಾಯವಾಗಿದೆ. ಹೆಜ್ಜೆ ಹೆಜ್ಜೆಗೂ ಕಸದ ರಾಶಿ ಕಾಣುತ್ತದೆ. ನಾಲ್ರೋಡ್ ರಸ್ತೆ, ಕೌದಳ್ಳಿ ರಸ್ತೆ, ದಿನ್ನಳ್ಳಿ ಮತ್ತು ಹನೂರಿಗೆ ತೆರಳುವರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಕಸದ ರಾಶಿಗಳೇ ಇವೆ.ಜನರು ಕೂಡ ಎಲ್ಲೆಂದರೆ ಕಸವನ್ನು ಎಸೆಯುತ್ತಿರುವುದರಿಂದ ಬಡಾವಣೆಗಳು ಗಬ್ಬೆದ್ದು ನಾರುತ್ತಿವೆ.</p>.<p>ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಗಳಿಂದಾಗಿ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಪೊಲೀಸ್ ವಸತಿ ಗೃಹದ ಹಿಂಭಾಗದ ಚರಂಡಿಯಲ್ಲಿ ಕಸಕಡ್ಡಿಯೆಲ್ಲಾ ಕೊಳೆತು ದುರ್ನಾತ ಬೀರುತ್ತಿದೆ.</p>.<p>‘ಹದಗೆಟ್ಟ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳು ಮಾತ್ರ ಇತ್ತ ತಿರುಗಿಯೂ ನೋಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಇಲ್ಲಿನ ನಿವಾಸಿಗಳು.</p>.<p class="Subhead">ಹಂದಿ, ಬಿಡಾಡಿ ದನಗಳ ಉಪಟಳ: ಹಂದಿ, ಹಸುಗಳು ಸೇರಿದಂತೆ ಜಾನುವಾರ ಉಪಟಳವೂ ಇಲ್ಲಿನ ಜನರನ್ನು ಕಾಡುತ್ತಿದೆ. ಹಂದಿಗಳನ್ನು ಸಾಕುತ್ತಿರುವವರು ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೊರಗಡೆ ಬಿಡುತ್ತಿರುವುದರಿಂದ ಅವು ಚರಂಡಿಗಳನ್ನೇ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ. ಕಸದ ರಾಶಿಗಳಲ್ಲೂ ಆಹಾರ ಹುಡುಕುತ್ತಾ ಬಿದ್ದಿರುತ್ತವೆ.</p>.<p>ಬಿಡಾಡಿ ದನ ಕರುಗಳು ರಸ್ತೆ ಮಧ್ಯೆಯೇ ಮಲಗಿರುತ್ತವೆ. ಇದರಿಂದಾಗಿ ವಾಹನಗಳ ಹಾಗೂ ಜನರ ಓಡಾಟಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.</p>.<p class="Briefhead"><strong>‘₹20 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕ’</strong></p>.<p>ಕೇಂದ್ರದಲ್ಲಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಧಿಕಾರಿ ಮಹದೇವಸ್ವಾಮಿ ಅವರು, ‘ತ್ಯಾಜ್ಯ ವಿಲೇವಾರಿ ನಿರ್ಮಾಣಕ್ಕಾಗಿ 1 ಎಕರೆ 6 ಗುಂಟೆ ಜಮೀನನ್ನು ಕಂದಾಯ ಇಲಾಖೆ ಗುರುತಿಸಿದೆ. ₹20 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.</p>.<p><strong>ನಾನು ಓಡಿಸಲೇ?</strong>: ಹಂದಿಗಳು ಹಾಗೂ ಬಿಡಾಡಿ ದನಗಳ ಬಗ್ಗೆ ಕೇಳಿದ್ದಕ್ಕೆ, ‘ಅವುಗಳು ರಸ್ತೆಯಲ್ಲಿ ಅಡ್ಡಾಡಿದರೆ ನಾನೇನು ಮಾಡುವುದಕ್ಕೆ ಆಗುತ್ತದೆ? ನಾನೊಬ್ಬ ಅಧಿಕಾರಿಯಾಗಿ ಹೋಗಿ ಹಸುಗಳನ್ನು ಓಡಿಸಲೇ’ ಎಂದು ಪ್ರಶ್ನಿಸಿದರು.</p>.<p>ಜನರಲ್ಲಿ ಮೂಡದ ಅರಿವು: ಗ್ರಾಮದ ಕೇಂದ್ರದಲ್ಲಿ ವಾಸಿಸುತ್ತಿರುವವರು ಕಸ ವಿಲೇವಾರಿ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಾಣುತ್ತಿಲ್ಲ. ನಿವಾಸಿಗಳು, ಅಂಗಡಿ ಮಾಲೀಕರು ಕಸವನ್ನು ಎಲ್ಲೆಂದಿರಲ್ಲಿ ಕಸವನ್ನು ಎಸೆಯುತ್ತಿರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಿದೆ.</p>.<p>‘ತ್ಯಾಜ್ಯ ನಿರ್ವಹಣೆಯಲ್ಲಿ ಜನರ ಸಹಕಾರ ಬಹುಮುಖ್ಯ. ಅವರು ಎಲ್ಲೆಂದರಲ್ಲಿ ಎಸೆಯುವುದನ್ನು ಮೊದಲು ಬಿಡಬೇಕು. ಇದರಿಂದ ಅರ್ಧದಷ್ಟು ಸಮಸ್ಯೆ ಬಗೆ ಹರಿಯುತ್ತದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನೂರು: </strong>ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ರಾಮಾಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ಸಾರ್ವಜನಿಕರು ಸಂಚರಿಸಲು ಪ್ರಯಾಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.</p>.<p>ಕೇಂದ್ರದಲ್ಲಿ ಸುತ್ತಾಡಿದರೆ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ರಸ್ತೆ ಬದಿಯಲ್ಲಿ ನಿಂತಿರುವ ಕೊಳಚೆ ನೀರು, ರಸ್ತೆ ಮಧ್ಯದಲ್ಲೇ ಮಲಗಿರುವ ಬಿಡಾಡಿ ದನಗಳು, ಚರಂಡಿಯಲ್ಲಿ ಮಲಗಿರುವ ಹಂದಿಗಳು ಕಾಣಸಿಗುತ್ತವೆ. ಜನರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾಗಿದೆ. ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿಯೂ ಅವರನ್ನು ಕಾಡುತ್ತಿದೆ.</p>.<p>ತಾಲ್ಲೂಕಿನ ಮೂರು ಹೋಬಳಿಗಳಲ್ಲಿ ರಾಮಾಪುರ ಅತ್ಯಂತ ದೊಡ್ಡ ಹೋಬಳಿ. ಗ್ರಾಮದಲ್ಲಿ 4,000 ಕುಟುಂಬಗಳಿದ್ದು, ಅಂದಾಜು 12 ಸಾವಿರ ಜನಸಂಖ್ಯೆ ಇದೆ. ಈ ಬಾರಿ ಬಿದ್ದ ಉತ್ತಮ ಮಳೆಗೆ ರಸ್ತೆಯಲ್ಲೆಲ್ಲಾ ಗುಂಡಿಗಳು ಉಂಟಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.</p>.<p class="Subhead"><strong>ಕಸವೋ ಕಸ:</strong> ಸ್ವಚ್ಛತೆ ಎಂಬುದು ಇಲ್ಲಿ ಮಾಯವಾಗಿದೆ. ಹೆಜ್ಜೆ ಹೆಜ್ಜೆಗೂ ಕಸದ ರಾಶಿ ಕಾಣುತ್ತದೆ. ನಾಲ್ರೋಡ್ ರಸ್ತೆ, ಕೌದಳ್ಳಿ ರಸ್ತೆ, ದಿನ್ನಳ್ಳಿ ಮತ್ತು ಹನೂರಿಗೆ ತೆರಳುವರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಕಸದ ರಾಶಿಗಳೇ ಇವೆ.ಜನರು ಕೂಡ ಎಲ್ಲೆಂದರೆ ಕಸವನ್ನು ಎಸೆಯುತ್ತಿರುವುದರಿಂದ ಬಡಾವಣೆಗಳು ಗಬ್ಬೆದ್ದು ನಾರುತ್ತಿವೆ.</p>.<p>ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಗಳಿಂದಾಗಿ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಪೊಲೀಸ್ ವಸತಿ ಗೃಹದ ಹಿಂಭಾಗದ ಚರಂಡಿಯಲ್ಲಿ ಕಸಕಡ್ಡಿಯೆಲ್ಲಾ ಕೊಳೆತು ದುರ್ನಾತ ಬೀರುತ್ತಿದೆ.</p>.<p>‘ಹದಗೆಟ್ಟ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳು ಮಾತ್ರ ಇತ್ತ ತಿರುಗಿಯೂ ನೋಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಇಲ್ಲಿನ ನಿವಾಸಿಗಳು.</p>.<p class="Subhead">ಹಂದಿ, ಬಿಡಾಡಿ ದನಗಳ ಉಪಟಳ: ಹಂದಿ, ಹಸುಗಳು ಸೇರಿದಂತೆ ಜಾನುವಾರ ಉಪಟಳವೂ ಇಲ್ಲಿನ ಜನರನ್ನು ಕಾಡುತ್ತಿದೆ. ಹಂದಿಗಳನ್ನು ಸಾಕುತ್ತಿರುವವರು ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೊರಗಡೆ ಬಿಡುತ್ತಿರುವುದರಿಂದ ಅವು ಚರಂಡಿಗಳನ್ನೇ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ. ಕಸದ ರಾಶಿಗಳಲ್ಲೂ ಆಹಾರ ಹುಡುಕುತ್ತಾ ಬಿದ್ದಿರುತ್ತವೆ.</p>.<p>ಬಿಡಾಡಿ ದನ ಕರುಗಳು ರಸ್ತೆ ಮಧ್ಯೆಯೇ ಮಲಗಿರುತ್ತವೆ. ಇದರಿಂದಾಗಿ ವಾಹನಗಳ ಹಾಗೂ ಜನರ ಓಡಾಟಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.</p>.<p class="Briefhead"><strong>‘₹20 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕ’</strong></p>.<p>ಕೇಂದ್ರದಲ್ಲಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಧಿಕಾರಿ ಮಹದೇವಸ್ವಾಮಿ ಅವರು, ‘ತ್ಯಾಜ್ಯ ವಿಲೇವಾರಿ ನಿರ್ಮಾಣಕ್ಕಾಗಿ 1 ಎಕರೆ 6 ಗುಂಟೆ ಜಮೀನನ್ನು ಕಂದಾಯ ಇಲಾಖೆ ಗುರುತಿಸಿದೆ. ₹20 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.</p>.<p><strong>ನಾನು ಓಡಿಸಲೇ?</strong>: ಹಂದಿಗಳು ಹಾಗೂ ಬಿಡಾಡಿ ದನಗಳ ಬಗ್ಗೆ ಕೇಳಿದ್ದಕ್ಕೆ, ‘ಅವುಗಳು ರಸ್ತೆಯಲ್ಲಿ ಅಡ್ಡಾಡಿದರೆ ನಾನೇನು ಮಾಡುವುದಕ್ಕೆ ಆಗುತ್ತದೆ? ನಾನೊಬ್ಬ ಅಧಿಕಾರಿಯಾಗಿ ಹೋಗಿ ಹಸುಗಳನ್ನು ಓಡಿಸಲೇ’ ಎಂದು ಪ್ರಶ್ನಿಸಿದರು.</p>.<p>ಜನರಲ್ಲಿ ಮೂಡದ ಅರಿವು: ಗ್ರಾಮದ ಕೇಂದ್ರದಲ್ಲಿ ವಾಸಿಸುತ್ತಿರುವವರು ಕಸ ವಿಲೇವಾರಿ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಾಣುತ್ತಿಲ್ಲ. ನಿವಾಸಿಗಳು, ಅಂಗಡಿ ಮಾಲೀಕರು ಕಸವನ್ನು ಎಲ್ಲೆಂದಿರಲ್ಲಿ ಕಸವನ್ನು ಎಸೆಯುತ್ತಿರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಿದೆ.</p>.<p>‘ತ್ಯಾಜ್ಯ ನಿರ್ವಹಣೆಯಲ್ಲಿ ಜನರ ಸಹಕಾರ ಬಹುಮುಖ್ಯ. ಅವರು ಎಲ್ಲೆಂದರಲ್ಲಿ ಎಸೆಯುವುದನ್ನು ಮೊದಲು ಬಿಡಬೇಕು. ಇದರಿಂದ ಅರ್ಧದಷ್ಟು ಸಮಸ್ಯೆ ಬಗೆ ಹರಿಯುತ್ತದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>