ಕಾವೇರಿ ವನ್ಯಧಾಮದಲ್ಲಿ ಇಂಥ ಪ್ರಕರಣಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಪ್ರಕರಣಗಳು ನಡೆದಿವೆ. ಗೋಪಿನಾಥಂ ವನ್ಯಜೀವಿ ವಲಯದಲ್ಲಿ ಆರು ತಿಂಗಳ ಹಿಂದೆ ಇದೇ ರೀತಿ ಜಿಂಕೆಯನ್ನು ಬೇಟೆಯಾಡಿ ಅದನ್ನು ತೆಪ್ಪದ ಮೇಲೆ ಹಾಕಿಕೊಂಡು ಹೋಗಿದ್ದರು. ಮತ್ತೊಂದು ಪ್ರಕರಣದಲ್ಲಿ ಬೇಟೆನಾಯಿಗಳ ಮೂಲಕ ಉಡವನ್ನು ಬೇಟೆಯಾಡಿದ್ದರ ಬಗ್ಗೆಯೂ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.