<p><strong>ಗುಂಡ್ಲುಪೇಟೆ:</strong>ತಾಲ್ಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 67 ಮತ್ತು 766ರ ಇಕ್ಕೆಲಗಳಲ್ಲಿರುವ ಜಮೀನುಗಳಲ್ಲಿಪೂರ್ವ ಮುಂಗಾರಿನ ಸಮಯದಲ್ಲಿ ಬಿತ್ತನೆ ಮಾಡಿದ್ದ ಸೂರ್ಯಕಾಂತಿ ಈಗ ಅರಳಿ ನಿಂತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.</p>.<p>ರಸ್ತೆಯ ಬದಿಯಲ್ಲಿ ಸೊಂಪಾಗಿ ಬೆಳೆದ ಹೂವನ್ನು ನೋಡಿ ಆಕರ್ಷಿತರಾಗುವ ಪ್ರವಾಸಿಗರು, ವಾಹನ ಸವಾರರು ಫೋಟೊ ತೆಗೆದುಕೊಳ್ಳಲು ಸೂರ್ಯಕಾಂತಿ ಇರುವ ಜಮೀನುಗಳಿಗೆ ನುಗ್ಗುತ್ತಿದ್ದರು. ಫೋಟೊ ತೆಗೆಯುವ ಪ್ರವಾಸಿಗರ ಕ್ರೇಜ್ ಅನ್ನು ವರಮಾನದ ದಾರಿಯನ್ನಾಗಿ ಮಾಡಿಕೊಂಡಿರುವ ರೈತರು, ಪ್ರವಾಸಿಗರಿಂದ ದುಡ್ಡನ್ನೂ ಪಡೆಯುತ್ತಿದ್ದಾರೆ.</p>.<p><a href="https://www.prajavani.net/district/haveri/otter-neeru-naayi-in-kambalageri-854768.html" itemprop="url">ಕಂಬಳಗೇರಿ ಕೆರೆಯಲ್ಲಿ ನೀರುನಾಯಿಗಳ ಕಲರವ </a></p>.<p>ರಾಷ್ಟ್ರೀಯ ಹೆದ್ದಾರಿಗಳು ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತವೆ. ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಹೆಚ್ಚಿನವರು ಅಂತರರಾಜ್ಯ ಪ್ರವಾಸಿಗರು. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ವಿರುತ್ತದೆ.</p>.<p>ರಾಷ್ಟ್ರೀಯ ಹೆದ್ದಾರಿ 67ರಲ್ಲಿ ತಾಲ್ಲೂಕಿನ ಹಿರಿಕಾಟಿಯಿಂದ ಮೇಲುಕಾಮಹಳ್ಳಿವರೆಗೆ ಮತ್ತು ರಾಷ್ಟ್ರೀಯ ಹೆದ್ದಾರಿ 766ನಲ್ಲಿ ಮದ್ದೂರು ಗಡಿಭಾಗದವರೆಗೆ ರೈತರು ಸೂರ್ಯಕಾಂತಿ ಮತ್ತು ಚೆಂಡು ಹೂ ಬೆಳೆದಿದ್ದಾರೆ. ರಸ್ತೆಯಲ್ಲಿ ಸಾಗುವಾಗ ಅರಳಿ ನಿಂತ ಹೂಗಳು ಮನಮೋಹಕವಾಗಿ ಕಾಣಿಸಿಕೊಳ್ಳುತ್ತಿವೆ.</p>.<p>ಕೋವಿಡ್ನಿಂದಾಗಿ ಹೊರ ರಾಜ್ಯದ ಪ್ರವಾಸಿ ತಾಣಗಳು ಬಂದ್ ಆಗಿರುವುದರಿಂದ ಇಲ್ಲಿನ ಬಂಡೀಪುರ ಸಫಾರಿ ಮತ್ತು ಗೋಪಾಲ ಸ್ವಾಮಿ ಬೆಟ್ಟಕ್ಕೆ ಬರುವ ಸ್ಥಳೀಯ ಪ್ರವಾಸಿಗರು, ಕೇರಳ ಮತ್ತು ತಮಿಳುನಾಡಿನ ಭಾಗದಿಂದ ಬರುವವರು ಸೂರ್ಯಕಾಂತಿ ತೋಟಗಳ ಸುಂದರ ದೃಶ್ಯಾವಳಿಗೆ ಮನಸೋತು ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ.</p>.<p><a href="https://www.prajavani.net/food/snacks/new-recipe-paan-betel-leaf-holige-made-by-shrikrishna-shastry-854712.html" itemprop="url">ಪಾಕ ಪ್ರಯೋಗ: ಅಡಿಕೆ, ಕೋಕೊ ಬೀಜದಿಂದ ಆಯ್ತು, ಇದೀಗ ವೀಳ್ಯದೆಲೆಯ ಹೋಳಿಗೆ! </a></p>.<p>ಕೆಲ ರೈತರು ಯಾವುದೇ ಹಣ ಪಡೆಯದೆ ಪೋಟೋ ತೆಗೆದುಕೊಂಡು ಹೋಗಲು ಅನುಮತಿ ನೀಡಿ, ಬೆಳೆ ಹಾಳಾಗದಂತೆ ಎಚ್ಚರ ವಹಿಸಿ ಎಂದು ಸಲಹೆ ನೀಡಿದರೆ, ಇನ್ನೂ ಕೆಲವರು ಪೋಟೋ ತೆಗೆದುಕೊಳ್ಳಲು ಒಬ್ಬರಿಗೆ ₹20ರಿಂದ ₹50ವರೆಗೂ ತೆಗೆದುಕೊಳ್ಳುತ್ತಿದ್ದಾರೆ. ಕೆಲವರು ಜಮೀನಿನಲ್ಲಿ ದರದ ಫಲಕವನ್ನೂ ತೂಗು ಹಾಕಿದ್ದಾರೆ.</p>.<p>‘ಕೆಲ ಪ್ರವಾಸಿಗರಿಗೆ ಬೆಳೆಯ ಬಗ್ಗೆ ಅರಿವಿರುವುದಿಲ್ಲ. ಪೋಟೊ ತೆಗೆದುಕೊಳ್ಳುವ ಖುಷಿಯಲ್ಲಿ ಗಿಡಗಳನ್ನು ತುಳಿಯುವುದು, ಹೂ ಕಿಳುವುದು ಮಾಡುತ್ತಾರೆ. ಇದರಿಂದಾಗಿ ನಮಗೆ ನಷ್ಟವಾಗುತ್ತದೆ’ ಎಂದು ಕಲ್ಲಿಗೌಡನಹಳ್ಳಿ ಗ್ರಾಮದ ಕುಮಾರ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ:</strong>ತಾಲ್ಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 67 ಮತ್ತು 766ರ ಇಕ್ಕೆಲಗಳಲ್ಲಿರುವ ಜಮೀನುಗಳಲ್ಲಿಪೂರ್ವ ಮುಂಗಾರಿನ ಸಮಯದಲ್ಲಿ ಬಿತ್ತನೆ ಮಾಡಿದ್ದ ಸೂರ್ಯಕಾಂತಿ ಈಗ ಅರಳಿ ನಿಂತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.</p>.<p>ರಸ್ತೆಯ ಬದಿಯಲ್ಲಿ ಸೊಂಪಾಗಿ ಬೆಳೆದ ಹೂವನ್ನು ನೋಡಿ ಆಕರ್ಷಿತರಾಗುವ ಪ್ರವಾಸಿಗರು, ವಾಹನ ಸವಾರರು ಫೋಟೊ ತೆಗೆದುಕೊಳ್ಳಲು ಸೂರ್ಯಕಾಂತಿ ಇರುವ ಜಮೀನುಗಳಿಗೆ ನುಗ್ಗುತ್ತಿದ್ದರು. ಫೋಟೊ ತೆಗೆಯುವ ಪ್ರವಾಸಿಗರ ಕ್ರೇಜ್ ಅನ್ನು ವರಮಾನದ ದಾರಿಯನ್ನಾಗಿ ಮಾಡಿಕೊಂಡಿರುವ ರೈತರು, ಪ್ರವಾಸಿಗರಿಂದ ದುಡ್ಡನ್ನೂ ಪಡೆಯುತ್ತಿದ್ದಾರೆ.</p>.<p><a href="https://www.prajavani.net/district/haveri/otter-neeru-naayi-in-kambalageri-854768.html" itemprop="url">ಕಂಬಳಗೇರಿ ಕೆರೆಯಲ್ಲಿ ನೀರುನಾಯಿಗಳ ಕಲರವ </a></p>.<p>ರಾಷ್ಟ್ರೀಯ ಹೆದ್ದಾರಿಗಳು ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತವೆ. ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಹೆಚ್ಚಿನವರು ಅಂತರರಾಜ್ಯ ಪ್ರವಾಸಿಗರು. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ವಿರುತ್ತದೆ.</p>.<p>ರಾಷ್ಟ್ರೀಯ ಹೆದ್ದಾರಿ 67ರಲ್ಲಿ ತಾಲ್ಲೂಕಿನ ಹಿರಿಕಾಟಿಯಿಂದ ಮೇಲುಕಾಮಹಳ್ಳಿವರೆಗೆ ಮತ್ತು ರಾಷ್ಟ್ರೀಯ ಹೆದ್ದಾರಿ 766ನಲ್ಲಿ ಮದ್ದೂರು ಗಡಿಭಾಗದವರೆಗೆ ರೈತರು ಸೂರ್ಯಕಾಂತಿ ಮತ್ತು ಚೆಂಡು ಹೂ ಬೆಳೆದಿದ್ದಾರೆ. ರಸ್ತೆಯಲ್ಲಿ ಸಾಗುವಾಗ ಅರಳಿ ನಿಂತ ಹೂಗಳು ಮನಮೋಹಕವಾಗಿ ಕಾಣಿಸಿಕೊಳ್ಳುತ್ತಿವೆ.</p>.<p>ಕೋವಿಡ್ನಿಂದಾಗಿ ಹೊರ ರಾಜ್ಯದ ಪ್ರವಾಸಿ ತಾಣಗಳು ಬಂದ್ ಆಗಿರುವುದರಿಂದ ಇಲ್ಲಿನ ಬಂಡೀಪುರ ಸಫಾರಿ ಮತ್ತು ಗೋಪಾಲ ಸ್ವಾಮಿ ಬೆಟ್ಟಕ್ಕೆ ಬರುವ ಸ್ಥಳೀಯ ಪ್ರವಾಸಿಗರು, ಕೇರಳ ಮತ್ತು ತಮಿಳುನಾಡಿನ ಭಾಗದಿಂದ ಬರುವವರು ಸೂರ್ಯಕಾಂತಿ ತೋಟಗಳ ಸುಂದರ ದೃಶ್ಯಾವಳಿಗೆ ಮನಸೋತು ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ.</p>.<p><a href="https://www.prajavani.net/food/snacks/new-recipe-paan-betel-leaf-holige-made-by-shrikrishna-shastry-854712.html" itemprop="url">ಪಾಕ ಪ್ರಯೋಗ: ಅಡಿಕೆ, ಕೋಕೊ ಬೀಜದಿಂದ ಆಯ್ತು, ಇದೀಗ ವೀಳ್ಯದೆಲೆಯ ಹೋಳಿಗೆ! </a></p>.<p>ಕೆಲ ರೈತರು ಯಾವುದೇ ಹಣ ಪಡೆಯದೆ ಪೋಟೋ ತೆಗೆದುಕೊಂಡು ಹೋಗಲು ಅನುಮತಿ ನೀಡಿ, ಬೆಳೆ ಹಾಳಾಗದಂತೆ ಎಚ್ಚರ ವಹಿಸಿ ಎಂದು ಸಲಹೆ ನೀಡಿದರೆ, ಇನ್ನೂ ಕೆಲವರು ಪೋಟೋ ತೆಗೆದುಕೊಳ್ಳಲು ಒಬ್ಬರಿಗೆ ₹20ರಿಂದ ₹50ವರೆಗೂ ತೆಗೆದುಕೊಳ್ಳುತ್ತಿದ್ದಾರೆ. ಕೆಲವರು ಜಮೀನಿನಲ್ಲಿ ದರದ ಫಲಕವನ್ನೂ ತೂಗು ಹಾಕಿದ್ದಾರೆ.</p>.<p>‘ಕೆಲ ಪ್ರವಾಸಿಗರಿಗೆ ಬೆಳೆಯ ಬಗ್ಗೆ ಅರಿವಿರುವುದಿಲ್ಲ. ಪೋಟೊ ತೆಗೆದುಕೊಳ್ಳುವ ಖುಷಿಯಲ್ಲಿ ಗಿಡಗಳನ್ನು ತುಳಿಯುವುದು, ಹೂ ಕಿಳುವುದು ಮಾಡುತ್ತಾರೆ. ಇದರಿಂದಾಗಿ ನಮಗೆ ನಷ್ಟವಾಗುತ್ತದೆ’ ಎಂದು ಕಲ್ಲಿಗೌಡನಹಳ್ಳಿ ಗ್ರಾಮದ ಕುಮಾರ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>