<p><strong>ಚಾಮರಾಜನಗರ:</strong> ಸುವರ್ಣಾವತಿ ಜಲಾಶಯದಿಂದ ಬೇಸಿಗೆ ಬೆಳೆಗಳಿಗೆ (ಅರೆ ನೀರಾವರಿ) ಕಟ್ಟು ನೀರಿನ ವ್ಯವಸ್ಥೆಯಡಿ ಶನಿವಾರದಿಂದಲೇ ನೀರು ಹರಿಸಲು ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.</p>.<p>ಶನಿವಾರ ಸುವರ್ಣಾವತಿ ಜಲಾಶಯದಲ್ಲಿರುವ ಪ್ರವಾಸಿ ಮಂದಿರದ ಆವರಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮತ್ತು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಮಾಡಲಾಯಿತು.</p>.<p>ಬಲದಂಡೆ ಮತ್ತು ಎಡದಂಡೆ ನಾಲೆಗಳ 4,500 ಎಕರೆ ಪ್ರದೇಶಕ್ಕೆ ಜಲಾಶಯದಿಂದ ನೀರುಣಿಸಲಾಗುವುದು. ಸುವರ್ಣಾವತಿ- ಚಿಕ್ಕಹೊಳೆ ಅವಳಿ ಜಲಾಶಯಗಳಾಗಿದ್ದು ಈ ಬಾರಿ ಚಿಕ್ಕಹೊಳೆ ಸಂಪೂರ್ಣ ಭರ್ತಿಯಾಗದ ಕಾರಣ ಜಲಾಶಯದಿಂದ ಸಣ್ಣ ಕೆರೆಗಳಿಗಳಿಗಷ್ಟೆ ನೀರು ಹರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.</p>.<p>ಜಲಾಶಯದಿಂದ ಮೂರು ದಿನ ನೀರು ಬಿಡುವುದು, ಬಳಿಕ ಮೂರು ದಿನ ನಿಲ್ಲಿಸಲಾಗುವುದು. ಬೇಸಿಗೆ ಬೆಳೆಗಳಿಗೆ 3 ತಿಂಗಳು ನೀರು ಸಿಗಲಿದೆ. ರಾಗಿ, ಜೋಳ ಸಹಿತ ಇತರೆ ಬೆಳೆಗಳನ್ನು ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೆಳೆಯಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.</p>.<p>ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಜಲಾಶಯ ವ್ಯಾಪ್ತಿಯ ಕಾಲುವೆಗಳನ್ನು ಅಭಿವೃದ್ಧಿಗೊಳಿಸಲು ಹಾಗೂ ಸರಾಗವಾಗಿ ನೀರು ಹರಿಯುವಂತೆ ವ್ಯವಸ್ಥೆ ಮಾಡಲು ₹30 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕರೆಯಲಾಗಿದೆ. ನದಿಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೋಡಿಮೋಳೆ ಕೆರೆಯಿಂದ ವಡ್ಗಲ್ಪುರ ಕೆರೆಗೆ ನೀರು ತುಂಬಿಸಲಾಗುವುದು. ಸುವರ್ಣಾವತಿ ಜಲಾಶಯದ ನೀರನ್ನು ಬೇಸಿಗೆ ಬೆಳೆಗೆ ಬಳಸಬಹುದು ಎಂದರು.</p>.<p>ನೀರು ಬಳಕೆದಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಮಾತನಾಡಿ, ಜಲಾಶಯದ ವ್ಯಾಪ್ತಿಯಲ್ಲಿಯೇ ಕಾಡಾ ಅನುದಾನ ಬಳಕೆಯಾಗಬೇಕು. ಬೇಸಿಗೆ ಬೆಳೆಯ ನೀರು ಎಲ್ಲ ರೈತರ ಜಮೀನಿಗೂ ತಲುಪುವಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.</p>.<p>ಕಾಡಾ ಕಾರ್ಯನಿರ್ವಾಹಕ ಎಂಜಿನಿಯರ್ ಗುರುಪ್ರಸಾದ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮಹೇಶ್, ಸಹಾಯಕ ಎಂಜಿನಿಯರ್ ವಿಕಾಸ್, ರೈತಮುಖಂಡರಾದ ಎಂ.ಎಂ.ಮಹೇಶ್ ಪ್ರಭು, ಆರ್.ಮಹದೇವ್, ರಮೇಶ್, ಗೋವಿಂದರಾಜು, ನಾಗರಾಜು, ವಿಜೇಂದ್ರ ಸ್ವಾಮಿ ಇದ್ದರು.</p>.<div><blockquote>ಅರೆ ನೀರಾವರಿ ಬೆಳೆಗಳಿಗೆ ಸುವರ್ಣಾವತಿ ಜಲಾಶಯದಿಂದ ಶನಿವಾರ ಸಂಜೆಯಿಂದಲೇ ನೀರು ಬಿಡಲಾಗಿದೆ. ಇದೇ ವೇಳೆ ಚಿಕ್ಕಹೊಳೆಯಿಂದಲೂ ಕೆರೆಕಟ್ಟೆಗಳಿಗೆ ನೀರು ಹರಿಸಲಾಗಿದೆ</blockquote><span class="attribution"> ಪಿ.ಮರಿಸ್ವಾಮಿ ಕಾಡಾ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ಸುವರ್ಣಾವತಿ ಜಲಾಶಯದಿಂದ ಬೇಸಿಗೆ ಬೆಳೆಗಳಿಗೆ (ಅರೆ ನೀರಾವರಿ) ಕಟ್ಟು ನೀರಿನ ವ್ಯವಸ್ಥೆಯಡಿ ಶನಿವಾರದಿಂದಲೇ ನೀರು ಹರಿಸಲು ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.</p>.<p>ಶನಿವಾರ ಸುವರ್ಣಾವತಿ ಜಲಾಶಯದಲ್ಲಿರುವ ಪ್ರವಾಸಿ ಮಂದಿರದ ಆವರಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮತ್ತು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಮಾಡಲಾಯಿತು.</p>.<p>ಬಲದಂಡೆ ಮತ್ತು ಎಡದಂಡೆ ನಾಲೆಗಳ 4,500 ಎಕರೆ ಪ್ರದೇಶಕ್ಕೆ ಜಲಾಶಯದಿಂದ ನೀರುಣಿಸಲಾಗುವುದು. ಸುವರ್ಣಾವತಿ- ಚಿಕ್ಕಹೊಳೆ ಅವಳಿ ಜಲಾಶಯಗಳಾಗಿದ್ದು ಈ ಬಾರಿ ಚಿಕ್ಕಹೊಳೆ ಸಂಪೂರ್ಣ ಭರ್ತಿಯಾಗದ ಕಾರಣ ಜಲಾಶಯದಿಂದ ಸಣ್ಣ ಕೆರೆಗಳಿಗಳಿಗಷ್ಟೆ ನೀರು ಹರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.</p>.<p>ಜಲಾಶಯದಿಂದ ಮೂರು ದಿನ ನೀರು ಬಿಡುವುದು, ಬಳಿಕ ಮೂರು ದಿನ ನಿಲ್ಲಿಸಲಾಗುವುದು. ಬೇಸಿಗೆ ಬೆಳೆಗಳಿಗೆ 3 ತಿಂಗಳು ನೀರು ಸಿಗಲಿದೆ. ರಾಗಿ, ಜೋಳ ಸಹಿತ ಇತರೆ ಬೆಳೆಗಳನ್ನು ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೆಳೆಯಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.</p>.<p>ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಜಲಾಶಯ ವ್ಯಾಪ್ತಿಯ ಕಾಲುವೆಗಳನ್ನು ಅಭಿವೃದ್ಧಿಗೊಳಿಸಲು ಹಾಗೂ ಸರಾಗವಾಗಿ ನೀರು ಹರಿಯುವಂತೆ ವ್ಯವಸ್ಥೆ ಮಾಡಲು ₹30 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕರೆಯಲಾಗಿದೆ. ನದಿಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೋಡಿಮೋಳೆ ಕೆರೆಯಿಂದ ವಡ್ಗಲ್ಪುರ ಕೆರೆಗೆ ನೀರು ತುಂಬಿಸಲಾಗುವುದು. ಸುವರ್ಣಾವತಿ ಜಲಾಶಯದ ನೀರನ್ನು ಬೇಸಿಗೆ ಬೆಳೆಗೆ ಬಳಸಬಹುದು ಎಂದರು.</p>.<p>ನೀರು ಬಳಕೆದಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಮಾತನಾಡಿ, ಜಲಾಶಯದ ವ್ಯಾಪ್ತಿಯಲ್ಲಿಯೇ ಕಾಡಾ ಅನುದಾನ ಬಳಕೆಯಾಗಬೇಕು. ಬೇಸಿಗೆ ಬೆಳೆಯ ನೀರು ಎಲ್ಲ ರೈತರ ಜಮೀನಿಗೂ ತಲುಪುವಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.</p>.<p>ಕಾಡಾ ಕಾರ್ಯನಿರ್ವಾಹಕ ಎಂಜಿನಿಯರ್ ಗುರುಪ್ರಸಾದ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮಹೇಶ್, ಸಹಾಯಕ ಎಂಜಿನಿಯರ್ ವಿಕಾಸ್, ರೈತಮುಖಂಡರಾದ ಎಂ.ಎಂ.ಮಹೇಶ್ ಪ್ರಭು, ಆರ್.ಮಹದೇವ್, ರಮೇಶ್, ಗೋವಿಂದರಾಜು, ನಾಗರಾಜು, ವಿಜೇಂದ್ರ ಸ್ವಾಮಿ ಇದ್ದರು.</p>.<div><blockquote>ಅರೆ ನೀರಾವರಿ ಬೆಳೆಗಳಿಗೆ ಸುವರ್ಣಾವತಿ ಜಲಾಶಯದಿಂದ ಶನಿವಾರ ಸಂಜೆಯಿಂದಲೇ ನೀರು ಬಿಡಲಾಗಿದೆ. ಇದೇ ವೇಳೆ ಚಿಕ್ಕಹೊಳೆಯಿಂದಲೂ ಕೆರೆಕಟ್ಟೆಗಳಿಗೆ ನೀರು ಹರಿಸಲಾಗಿದೆ</blockquote><span class="attribution"> ಪಿ.ಮರಿಸ್ವಾಮಿ ಕಾಡಾ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>