'ಬಾಲ್ಯ ವಿವಾಹ ಮಾಡಿದರೆ ಕಾನೂನಾತ್ಮಕ ಸಮಸ್ಯೆ ಎದುರಾಗುತ್ತವೆ. ವಿವಾಹಆಯೋಜಿಸುವ ಛತ್ರ, ತಂದೆ-ತಾಯಿ, ವಯಸ್ಸಿನ ತಪ್ಪು ದೃಢೀಕರಣ ನೀಡಿದ ಅಧಿಕಾರಿ, ವಧು-ವರಎಲ್ಲರೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿಯಲ್ಲಿ ತಪ್ಪಿತಸ್ಥರಿಗೆ ಜೈಲುವಾಸ ಮತ್ತು ದಂಡ ವಿಧಿಸಲು ಇಲ್ಲವೇ ಎರಡೂ ಶಿಕ್ಷೆಯನ್ನುಏಕಕಾಲದಲ್ಲಿ ವಿಧಿಸಲು ಅವಕಾಶ ಇರುವುದರಿಂದ ಉಪ್ಪಾರ ಸಮುದಾಯ ಎಚ್ಚರ ವಹಿಸಬೇಕು' ಎಂದು ಮುಖಂಡ ರಾಚಶೆಟ್ಟಿಹೇಳಿದರು.