<p><strong>ಯಳಂದೂರು:</strong> ತಾಲ್ಲೂಕಿನ ಮಲಾರಪಾಳ್ಯದಿಂದ ಆಮೆಕೆರೆಗೆ ತೆರಳುವ ಮಾರ್ಗದಲ್ಲಿ ಸ್ಥಗಿತಗೊಂಡಿರುವ ಕೆಲವು ಬಿಳಿಕಲ್ಲು ಕ್ವಾರೆಗಳಲ್ಲಿ ಸಂಗ್ರಹಗೊಂಡಿರುವ ನೀರನ್ನು ಕೆಲವು ಅನಾಮಧೇಯ ವ್ಯಕ್ತಿಗಳು ಪಂಪ್ ಮೂಲಕ ಹೊರಕ್ಕೆ ಹಾಕುತ್ತಿದ್ದಾರೆ. ಹಲವು ದಿನಗಳಿಂದ ಈ ಕೆಲಸ ನಡೆಯುತ್ತಿದೆ.</p>.<p>ಬಿಳಿಕಲ್ಲು ಜಲ್ಲಿ ಮತ್ತು ಕಲ್ಲು ದಿಂಡು ತೆಗೆಯುವುದಕ್ಕಾಗಿ ನೀರನ್ನು ಖಾಲಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಬಿದ್ದಿರುವ ಉತ್ತಮ ಮಳೆಯಿಂದಾಗಿ ಈ ಭಾಗದ ಕೆರೆಕಟ್ಟೆಗಳು ಭರ್ತಿಯಾಗಿವೆ. ಅದೇ ರೀತಿ ಕ್ವಾರಿಗಳ ಹಳ್ಳದಲ್ಲೂ ನೀರು ತುಂಬಿವೆ.</p>.<p>ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಾರಪಾಳ್ಯ ಗ್ರಾಮ ತನಕಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಕ್ಕೆ (ಬಿಆರ್ಟಿ) ಬರುತ್ತದೆ. ಕೃಷಿ ಜಮೀನಿಗೆ ಹೊಂದಿಕೊಂಡಿರುವ ಜಾಗಗಳಲ್ಲಿ ಕಲ್ಲಿನ ಕ್ವಾರೆಗಳು ಇವೆ. ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಈ ಕ್ವಾರೆಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದ ಮೇಲೆ ಗಣಿಗಾರಿಕೆ ಸ್ಥಗಿತಗೊಂಡಿತ್ತು.</p>.<p>‘ಪಾಳು ಕ್ವಾರೆಗಳಲ್ಲಿ ತುಂಬಿರುವ ನೀರು ಬೇಸಿಗೆ ಕಾಲದಲ್ಲಿ ವನ್ಯಜೀವಿಗಳಿಗೆ ಜೀವ ಜಲವಾಗುತ್ತದೆ. ಇವುಗಳಲ್ಲಿ ನೀರು ಖಾಲಿಯಾದರೆ ಪ್ರಾಣಿಗಳು ನೀರನ್ನು ಹುಡುಕಿಕೊಂಡು ನಾಡಿಗೆ ಬರುತ್ತವೆ. ಇದರಿಂದ ಮಾನವ–ವನ್ಯಜೀವಿ ಸಂಘರ್ಷ ಇನ್ನಷ್ಟು ಹೆಚ್ಚಬಹುದು’ ಎಂಬ ಆತಂಕವನ್ನು ಪರಿಸರ ಮತ್ತು ಪ್ರಾಣಿಪ್ರಿಯರು ವ್ಯಕ್ತಪಡಿಸಿದ್ದಾರೆ.</p>.<p>ಗಣಿ ಚಟುವಟಿಕೆಗಳು ನಡೆಸುವುದಕ್ಕಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಮೀಪದಲ್ಲಿ ಎಲ್ಲಿಯೂದೊಡ್ಡ ಕೆರೆಗಳಿಲ್ಲ. ಕಲ್ಲಿನ ಆಸರೆಯಲ್ಲಿ ನೆಲೆ ನಿಂತ ನೀರಿನಿಂದ ಸುತ್ತಮುತ್ತಲಪ್ರದೇಶದಲ್ಲಿ ಅಂತರ್ಜಲ ಹೆಚ್ಚಿದೆ. ನೀರು ಖಾಲಿ ಮಾಡಿದರೆ ಅಂತರ್ಜಲ ಕಡಿಮೆಯಾಗಬಹುದು ಎಂಬ ಭಯ ಕೃಷಿಕರನ್ನು ಕಾಡುತ್ತಿದೆ.</p>.<p>ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ನೀರು ಖಾಲಿ ಮಾಡುವುದನ್ನು ತಡೆಯಬೇಕು ಎಂದು ಸ್ಥಳೀಯರು ಹಾಗೂ ಪರಿಸರಪ್ರಿಯರು ಒತ್ತಾಯಿಸಿದ್ದಾರೆ.</p>.<p><strong>ರಾತ್ರೋರಾತ್ರಿ ಪಂಪ್ಅಳವಡಿಕೆ</strong></p>.<p>ಸ್ಥಗಿತಗೊಂಡ ಕ್ವಾರಿ ಪ್ರದೇಶಗಳಲ್ಲಿ ಅಪರಿಚಿತರ ಓಡಾಟ ಕೆಲವು ದಿನಗಳಿಂದ ಹೆಚ್ಚಿದೆ. ರಾತ್ರೋರಾತ್ರಿ ಕ್ವಾರೆಯ ಹಳ್ಳಗಳಿಗೆ ಮೋಟಾರ್ ಅಳವಡಿಸಲಾಗುತ್ತಿದೆ. ದಿನದ 24 ಗಂಟೆಯ ಕಾಲವೂ ನೀರು ಹೊರಹಾಕಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಶೀಘ್ರವಾಗಿ ನೀರು ಖಾಲಿಯಾಗಲಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ತಾಲ್ಲೂಕಿನ ಮಲಾರಪಾಳ್ಯದಿಂದ ಆಮೆಕೆರೆಗೆ ತೆರಳುವ ಮಾರ್ಗದಲ್ಲಿ ಸ್ಥಗಿತಗೊಂಡಿರುವ ಕೆಲವು ಬಿಳಿಕಲ್ಲು ಕ್ವಾರೆಗಳಲ್ಲಿ ಸಂಗ್ರಹಗೊಂಡಿರುವ ನೀರನ್ನು ಕೆಲವು ಅನಾಮಧೇಯ ವ್ಯಕ್ತಿಗಳು ಪಂಪ್ ಮೂಲಕ ಹೊರಕ್ಕೆ ಹಾಕುತ್ತಿದ್ದಾರೆ. ಹಲವು ದಿನಗಳಿಂದ ಈ ಕೆಲಸ ನಡೆಯುತ್ತಿದೆ.</p>.<p>ಬಿಳಿಕಲ್ಲು ಜಲ್ಲಿ ಮತ್ತು ಕಲ್ಲು ದಿಂಡು ತೆಗೆಯುವುದಕ್ಕಾಗಿ ನೀರನ್ನು ಖಾಲಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಬಿದ್ದಿರುವ ಉತ್ತಮ ಮಳೆಯಿಂದಾಗಿ ಈ ಭಾಗದ ಕೆರೆಕಟ್ಟೆಗಳು ಭರ್ತಿಯಾಗಿವೆ. ಅದೇ ರೀತಿ ಕ್ವಾರಿಗಳ ಹಳ್ಳದಲ್ಲೂ ನೀರು ತುಂಬಿವೆ.</p>.<p>ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಾರಪಾಳ್ಯ ಗ್ರಾಮ ತನಕಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಕ್ಕೆ (ಬಿಆರ್ಟಿ) ಬರುತ್ತದೆ. ಕೃಷಿ ಜಮೀನಿಗೆ ಹೊಂದಿಕೊಂಡಿರುವ ಜಾಗಗಳಲ್ಲಿ ಕಲ್ಲಿನ ಕ್ವಾರೆಗಳು ಇವೆ. ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಈ ಕ್ವಾರೆಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದ ಮೇಲೆ ಗಣಿಗಾರಿಕೆ ಸ್ಥಗಿತಗೊಂಡಿತ್ತು.</p>.<p>‘ಪಾಳು ಕ್ವಾರೆಗಳಲ್ಲಿ ತುಂಬಿರುವ ನೀರು ಬೇಸಿಗೆ ಕಾಲದಲ್ಲಿ ವನ್ಯಜೀವಿಗಳಿಗೆ ಜೀವ ಜಲವಾಗುತ್ತದೆ. ಇವುಗಳಲ್ಲಿ ನೀರು ಖಾಲಿಯಾದರೆ ಪ್ರಾಣಿಗಳು ನೀರನ್ನು ಹುಡುಕಿಕೊಂಡು ನಾಡಿಗೆ ಬರುತ್ತವೆ. ಇದರಿಂದ ಮಾನವ–ವನ್ಯಜೀವಿ ಸಂಘರ್ಷ ಇನ್ನಷ್ಟು ಹೆಚ್ಚಬಹುದು’ ಎಂಬ ಆತಂಕವನ್ನು ಪರಿಸರ ಮತ್ತು ಪ್ರಾಣಿಪ್ರಿಯರು ವ್ಯಕ್ತಪಡಿಸಿದ್ದಾರೆ.</p>.<p>ಗಣಿ ಚಟುವಟಿಕೆಗಳು ನಡೆಸುವುದಕ್ಕಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಮೀಪದಲ್ಲಿ ಎಲ್ಲಿಯೂದೊಡ್ಡ ಕೆರೆಗಳಿಲ್ಲ. ಕಲ್ಲಿನ ಆಸರೆಯಲ್ಲಿ ನೆಲೆ ನಿಂತ ನೀರಿನಿಂದ ಸುತ್ತಮುತ್ತಲಪ್ರದೇಶದಲ್ಲಿ ಅಂತರ್ಜಲ ಹೆಚ್ಚಿದೆ. ನೀರು ಖಾಲಿ ಮಾಡಿದರೆ ಅಂತರ್ಜಲ ಕಡಿಮೆಯಾಗಬಹುದು ಎಂಬ ಭಯ ಕೃಷಿಕರನ್ನು ಕಾಡುತ್ತಿದೆ.</p>.<p>ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ನೀರು ಖಾಲಿ ಮಾಡುವುದನ್ನು ತಡೆಯಬೇಕು ಎಂದು ಸ್ಥಳೀಯರು ಹಾಗೂ ಪರಿಸರಪ್ರಿಯರು ಒತ್ತಾಯಿಸಿದ್ದಾರೆ.</p>.<p><strong>ರಾತ್ರೋರಾತ್ರಿ ಪಂಪ್ಅಳವಡಿಕೆ</strong></p>.<p>ಸ್ಥಗಿತಗೊಂಡ ಕ್ವಾರಿ ಪ್ರದೇಶಗಳಲ್ಲಿ ಅಪರಿಚಿತರ ಓಡಾಟ ಕೆಲವು ದಿನಗಳಿಂದ ಹೆಚ್ಚಿದೆ. ರಾತ್ರೋರಾತ್ರಿ ಕ್ವಾರೆಯ ಹಳ್ಳಗಳಿಗೆ ಮೋಟಾರ್ ಅಳವಡಿಸಲಾಗುತ್ತಿದೆ. ದಿನದ 24 ಗಂಟೆಯ ಕಾಲವೂ ನೀರು ಹೊರಹಾಕಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಶೀಘ್ರವಾಗಿ ನೀರು ಖಾಲಿಯಾಗಲಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>