<p><strong>ಯಳಂದೂರು</strong>: ‘ಕೆಲವು ವಂಶಾವಳಿ ಕಾಯಿಲೆಗಳನ್ನು ರಕ್ತ ಪರೀಕ್ಷೆಯಿಂದ ಕಂಡುಹಿಡಿಯಬಹುದು. ಹಾಡಿ ನಿವಾಸಿಗರು ತಪಾಸಣೆ ಮಾಡಿಸಿಕೊಂಡರೆ ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು’ ಎಂದು ಆರ್ಎಫ್ಒ ನಾಗೇಂದ್ರನಾಯಕ್ ಹೇಳಿದರು.</p>.<p>ವನ್ಯಜೀವಿ ಸಪ್ತಾಹದ ಅಂಗವಾಗಿ ತಾಲ್ಲೂಕಿನ ಬಿಳಿಗಿರಿಬೆಟ್ಟದ ವಿವಿಧ ಹಾಡಿಗಳಲ್ಲಿ ಶುಕ್ರವಾರ ಸೋಲಿಗ ಸಮುದಾಯದ ಜನರಿಗೆ ಅರಣ್ಯ ಇಲಾಖೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>‘ಹಾಡಿ ಜನರು ಸಿಕೆಲ್ಸೆಲ್ ನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರು ಸಣ್ಣಪುಟ್ಟ ಸಮಸ್ಯೆಗಳಿಗೂ ದೊಡ್ಡ ಆಸ್ಪತ್ರೆಗಳತ್ತ ತೆರಳುತ್ತಾರೆ. ಈ ದೆಸೆಯಲ್ಲಿ ಮಕ್ಕಳ , ವೃದ್ಧರು, ಮತ್ತು ಮಹಿಳೆಯರ ಬಗ್ಗೆ ಇಲಾಖೆ ಹೆಚ್ಚಿನ ಕಾಳಜಿ ವಹಿಸಿ ತಪಾಸಣೆ ನಡೆಸುತ್ತದೆ’ ಎಂದರು.</p>.<p>25ಕ್ಕೂ ಹೆಚ್ಚಿನ ಪೋಡುಗಳ ನೂರಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡರು. ವೈದ್ಯರು ರಕ್ತದೊತ್ತಡ, ಹೃದಯ ಮತ್ತಿತರ ಪರೀಕ್ಷೆಗಳನ್ನು ಮಾಡಿದರು.</p>.<p>ಡಿಆರ್ಎಫ್ಒ ಕೃಷ್ಣಮೂರ್ತಿ ನಂಜೇಗೌಡ, ಮಾದಯ್ಯ, ಬಂಗಿ ಸಿದ್ದಮ್ಮ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ‘ಕೆಲವು ವಂಶಾವಳಿ ಕಾಯಿಲೆಗಳನ್ನು ರಕ್ತ ಪರೀಕ್ಷೆಯಿಂದ ಕಂಡುಹಿಡಿಯಬಹುದು. ಹಾಡಿ ನಿವಾಸಿಗರು ತಪಾಸಣೆ ಮಾಡಿಸಿಕೊಂಡರೆ ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು’ ಎಂದು ಆರ್ಎಫ್ಒ ನಾಗೇಂದ್ರನಾಯಕ್ ಹೇಳಿದರು.</p>.<p>ವನ್ಯಜೀವಿ ಸಪ್ತಾಹದ ಅಂಗವಾಗಿ ತಾಲ್ಲೂಕಿನ ಬಿಳಿಗಿರಿಬೆಟ್ಟದ ವಿವಿಧ ಹಾಡಿಗಳಲ್ಲಿ ಶುಕ್ರವಾರ ಸೋಲಿಗ ಸಮುದಾಯದ ಜನರಿಗೆ ಅರಣ್ಯ ಇಲಾಖೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>‘ಹಾಡಿ ಜನರು ಸಿಕೆಲ್ಸೆಲ್ ನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರು ಸಣ್ಣಪುಟ್ಟ ಸಮಸ್ಯೆಗಳಿಗೂ ದೊಡ್ಡ ಆಸ್ಪತ್ರೆಗಳತ್ತ ತೆರಳುತ್ತಾರೆ. ಈ ದೆಸೆಯಲ್ಲಿ ಮಕ್ಕಳ , ವೃದ್ಧರು, ಮತ್ತು ಮಹಿಳೆಯರ ಬಗ್ಗೆ ಇಲಾಖೆ ಹೆಚ್ಚಿನ ಕಾಳಜಿ ವಹಿಸಿ ತಪಾಸಣೆ ನಡೆಸುತ್ತದೆ’ ಎಂದರು.</p>.<p>25ಕ್ಕೂ ಹೆಚ್ಚಿನ ಪೋಡುಗಳ ನೂರಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡರು. ವೈದ್ಯರು ರಕ್ತದೊತ್ತಡ, ಹೃದಯ ಮತ್ತಿತರ ಪರೀಕ್ಷೆಗಳನ್ನು ಮಾಡಿದರು.</p>.<p>ಡಿಆರ್ಎಫ್ಒ ಕೃಷ್ಣಮೂರ್ತಿ ನಂಜೇಗೌಡ, ಮಾದಯ್ಯ, ಬಂಗಿ ಸಿದ್ದಮ್ಮ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>