<p><strong>ಗುಡಿಬಂಡೆ:</strong> ತಾಲ್ಲೂಕಿನ ಲಗುಮೇನಹಳ್ಳಿ ಗ್ರಾಮದ ರಸ್ತೆ ಬದಿ ಖಾಲಿ ನಿವೇಶನದ ನೀರಿನ ಗುಂಡಿಗೆ ಕಾಲು ಜಾರಿ ಬಿದ್ದ ನಾಲ್ಕು ವರ್ಷದ ಮಗು ಮೃತಪಟ್ಟಿದೆ. </p>.<p>ಹಳೇಗುಡಿಬಂಡೆ ಗ್ರಾಮದ ನರಸಿಂಹಮೂರ್ತಿ ಎಂಬುವರ ಮಗ ಅರ್ಷಿತ್ ರೆಡ್ಡಿ (4) ಮೃತಪಟ್ಟ ಮಗು. </p>.<p>ಸಂಬಂಧಿಕರ ಜಮೀನಿನಲ್ಲಿ ಜೋಳ ಬಿತ್ತನೆಗೆ ನರಸಿಂಹಮೂರ್ತಿ ಅವರು ತಮ್ಮ ಜೊತೆ ಮಗುವನ್ನು ಕರೆದೊಯ್ದಿದ್ದರು. ಮಗು ಆಟವಾಡುತ್ತಾ, ಹೋಗಿ ನೀರಿನ ಗುಂಡಿಗೆ ಬಿದ್ದಿದೆ. ಜೋಳ ಬಿತ್ತನೆಯಲ್ಲಿ ತೊಡಗಿದ್ದ ಮಗುವಿನ ತಂದೆಗೆ ಈ ವಿಚಾರ ಗೊತ್ತಾಗಿಲ್ಲ. ಕೆಲಸ ಮುಗಿದ ಬಳಿಕ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಸಿಗದಿದ್ದಾಗ, ನೀರಿನ ಗುಣಿಯಲ್ಲಿ ಹುಡುಕಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಗುಡಿಬಂಡೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮಗುವಿನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. </p>.<p>ಮಗುವಿನ ತಾಯಿ ಭಾಗ್ಯಮ್ಮ ನೀಡಿದ ದೂರಿನ ಮೇರೆಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಿಬಂಡೆ:</strong> ತಾಲ್ಲೂಕಿನ ಲಗುಮೇನಹಳ್ಳಿ ಗ್ರಾಮದ ರಸ್ತೆ ಬದಿ ಖಾಲಿ ನಿವೇಶನದ ನೀರಿನ ಗುಂಡಿಗೆ ಕಾಲು ಜಾರಿ ಬಿದ್ದ ನಾಲ್ಕು ವರ್ಷದ ಮಗು ಮೃತಪಟ್ಟಿದೆ. </p>.<p>ಹಳೇಗುಡಿಬಂಡೆ ಗ್ರಾಮದ ನರಸಿಂಹಮೂರ್ತಿ ಎಂಬುವರ ಮಗ ಅರ್ಷಿತ್ ರೆಡ್ಡಿ (4) ಮೃತಪಟ್ಟ ಮಗು. </p>.<p>ಸಂಬಂಧಿಕರ ಜಮೀನಿನಲ್ಲಿ ಜೋಳ ಬಿತ್ತನೆಗೆ ನರಸಿಂಹಮೂರ್ತಿ ಅವರು ತಮ್ಮ ಜೊತೆ ಮಗುವನ್ನು ಕರೆದೊಯ್ದಿದ್ದರು. ಮಗು ಆಟವಾಡುತ್ತಾ, ಹೋಗಿ ನೀರಿನ ಗುಂಡಿಗೆ ಬಿದ್ದಿದೆ. ಜೋಳ ಬಿತ್ತನೆಯಲ್ಲಿ ತೊಡಗಿದ್ದ ಮಗುವಿನ ತಂದೆಗೆ ಈ ವಿಚಾರ ಗೊತ್ತಾಗಿಲ್ಲ. ಕೆಲಸ ಮುಗಿದ ಬಳಿಕ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಸಿಗದಿದ್ದಾಗ, ನೀರಿನ ಗುಣಿಯಲ್ಲಿ ಹುಡುಕಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಗುಡಿಬಂಡೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮಗುವಿನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. </p>.<p>ಮಗುವಿನ ತಾಯಿ ಭಾಗ್ಯಮ್ಮ ನೀಡಿದ ದೂರಿನ ಮೇರೆಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>