<p><strong>ಚಿಂತಾಮಣಿ:</strong> ಪುರಾಣ ಪ್ರಸಿದ್ಧ ಆಲಂಬಗಿರಿಯ ಕಲ್ಕಿ ವೆಂಕಟರಮಣ ದೇವಾಲಯದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಆಲಂಬಗಿರಿ ಬೆಟ್ಟದ ಪ್ರಕೃತಿಯ ತಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀರ್ತನಾ ಗಿರಿಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು.</p>.<p>ವೆಂಕಟರಮಣ ದೇವಾಲಯದಲ್ಲಿ ಪೂಜೆ ಸಿಲ್ಲಿಸಿದ ನಂತರ ನೂರಾರು ಭಕ್ತರು ದೇವಾಲಯದಿಂದ ಸಾಮೂಹಿಕ ಸಂಕೀರ್ತನೆಯೊಂದಿಗೆ ಬೆಟ್ಟದ ತಪ್ಪಲಿನಲ್ಲಿ ಸ್ಥಾಪಿಸಿರುವ ಶಂಕು-ಚಕ್ರದ ವಿಶೇಷ ವೇದಿಕೆಯಲ್ಲಿ ನಿಂತು ಲೋಕ ಕಲ್ಯಾಣಕ್ಕಾಗಿ ಗಣೇಶನ ಪ್ರಾರ್ಥನೆ ಸಲ್ಲಿಸಿದರು.</p>.<p>ವಿಶೇಷ ವೇದಿಕೆಯಿಂದ ಹೊರಟ ಭಕ್ತರು ಬೆಟ್ಟದ ಸುತ್ತಲೂ 3 ಕೀರ್ತನೆಗಳನ್ನು ಹಾಡುತ್ತಾ ಪ್ರದಕ್ಷಿಣೆ ಮಾಡಿದರು. ಸುಮಾರು ಒಂದು ಕಿ.ಮೀ ದೂರ ತೆರಳಿ, ಮತ್ತೆ ವೇದಿಕೆಗೆ ಆಗಮಿಸಿದರು. ಬೆಟ್ಟದ ಪ್ರಕೃತಿ ಮಡಿಲಲ್ಲಿ ಸುಂದರ ವಾತಾವರಣದಲ್ಲಿ ಮುತ್ಸಂಜೆ ಗಿರಿಪ್ರದಕ್ಷಿಣೆಯು ಅಹ್ಲಾದಕರವಾಗಿತ್ತು.</p>.<p>ಭಕ್ತರು ವೇದಿಕೆ ಸ್ಥಳದಲ್ಲಿ ಕುಳಿತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p>.<p>ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್. ಜಯರಾಂ ಪಾಹಿಮಾಂ ಪ್ರಭೋ ಕೀರ್ತನೆಯನ್ನು ಸಮರ್ಪಿಸಿದರು. ಎತ್ತರದಲ್ಲಿ ಸ್ಥಾಪಿಸಿರುವ ದೀಪಸ್ತಂಭದಲ್ಲಿ ಮೊದಲಿಗೆ ಧರ್ಮಾಧಿಕಾರಿ ತುಪ್ಪದ ದೀಪ ಬೆಳಗಿದರು. ನಂತರ ಎಲ್ಲ ಭಕ್ತರು ತುಪ್ಪ, ಎಣ್ಣೆ ದೀಪಕ್ಕೆ ಸಮರ್ಪಿಸಿದರು.</p>.<p>ಸುತ್ತಮುತ್ತಲ ಗ್ರಾಮಗಳ ಭಕ್ತರು, ಚಿಂತಾಮಣಿ, ಬೆಂಗಳೂರು, ದೇವನಹಳ್ಳಿ, ಹೋಸಕೋಟೆ ಮತ್ತಿತರ ಬೇರೆ ಬೇರೆ ಕಡೆಯಿಂದ ಆಗಮಿಸಿದ್ದ ಭಕ್ತರು ಹುಣ್ಣಿಮೆ ಗಿರಿಪ್ರದಕ್ಷಿಣೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ:</strong> ಪುರಾಣ ಪ್ರಸಿದ್ಧ ಆಲಂಬಗಿರಿಯ ಕಲ್ಕಿ ವೆಂಕಟರಮಣ ದೇವಾಲಯದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಆಲಂಬಗಿರಿ ಬೆಟ್ಟದ ಪ್ರಕೃತಿಯ ತಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀರ್ತನಾ ಗಿರಿಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು.</p>.<p>ವೆಂಕಟರಮಣ ದೇವಾಲಯದಲ್ಲಿ ಪೂಜೆ ಸಿಲ್ಲಿಸಿದ ನಂತರ ನೂರಾರು ಭಕ್ತರು ದೇವಾಲಯದಿಂದ ಸಾಮೂಹಿಕ ಸಂಕೀರ್ತನೆಯೊಂದಿಗೆ ಬೆಟ್ಟದ ತಪ್ಪಲಿನಲ್ಲಿ ಸ್ಥಾಪಿಸಿರುವ ಶಂಕು-ಚಕ್ರದ ವಿಶೇಷ ವೇದಿಕೆಯಲ್ಲಿ ನಿಂತು ಲೋಕ ಕಲ್ಯಾಣಕ್ಕಾಗಿ ಗಣೇಶನ ಪ್ರಾರ್ಥನೆ ಸಲ್ಲಿಸಿದರು.</p>.<p>ವಿಶೇಷ ವೇದಿಕೆಯಿಂದ ಹೊರಟ ಭಕ್ತರು ಬೆಟ್ಟದ ಸುತ್ತಲೂ 3 ಕೀರ್ತನೆಗಳನ್ನು ಹಾಡುತ್ತಾ ಪ್ರದಕ್ಷಿಣೆ ಮಾಡಿದರು. ಸುಮಾರು ಒಂದು ಕಿ.ಮೀ ದೂರ ತೆರಳಿ, ಮತ್ತೆ ವೇದಿಕೆಗೆ ಆಗಮಿಸಿದರು. ಬೆಟ್ಟದ ಪ್ರಕೃತಿ ಮಡಿಲಲ್ಲಿ ಸುಂದರ ವಾತಾವರಣದಲ್ಲಿ ಮುತ್ಸಂಜೆ ಗಿರಿಪ್ರದಕ್ಷಿಣೆಯು ಅಹ್ಲಾದಕರವಾಗಿತ್ತು.</p>.<p>ಭಕ್ತರು ವೇದಿಕೆ ಸ್ಥಳದಲ್ಲಿ ಕುಳಿತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p>.<p>ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್. ಜಯರಾಂ ಪಾಹಿಮಾಂ ಪ್ರಭೋ ಕೀರ್ತನೆಯನ್ನು ಸಮರ್ಪಿಸಿದರು. ಎತ್ತರದಲ್ಲಿ ಸ್ಥಾಪಿಸಿರುವ ದೀಪಸ್ತಂಭದಲ್ಲಿ ಮೊದಲಿಗೆ ಧರ್ಮಾಧಿಕಾರಿ ತುಪ್ಪದ ದೀಪ ಬೆಳಗಿದರು. ನಂತರ ಎಲ್ಲ ಭಕ್ತರು ತುಪ್ಪ, ಎಣ್ಣೆ ದೀಪಕ್ಕೆ ಸಮರ್ಪಿಸಿದರು.</p>.<p>ಸುತ್ತಮುತ್ತಲ ಗ್ರಾಮಗಳ ಭಕ್ತರು, ಚಿಂತಾಮಣಿ, ಬೆಂಗಳೂರು, ದೇವನಹಳ್ಳಿ, ಹೋಸಕೋಟೆ ಮತ್ತಿತರ ಬೇರೆ ಬೇರೆ ಕಡೆಯಿಂದ ಆಗಮಿಸಿದ್ದ ಭಕ್ತರು ಹುಣ್ಣಿಮೆ ಗಿರಿಪ್ರದಕ್ಷಿಣೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>