<p><strong>ಚಿಕ್ಕಬಳ್ಳಾಪುರ:</strong> ಹಿಂದುಳಿದ ವರ್ಗಗಳ ವಕೀಲರು ಸಂಘಟಿತರಾಗಬೇಕು. ಆ ಮೂಲಕ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ವಕೀಲರ ಸಂಘದ ಅಧ್ಯಕ್ಷ ಸುರೇಶ್ ಎಂ. ಲಾತೂರ ಸಲಹೆ ನೀಡಿದರು.</p>.<p>ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ 52ರಷ್ಟು ಮಂದಿ ಹಿಂದುಳಿದ ವರ್ಗಗಳ ಜನರು ಇದ್ದೇವೆ. ಆದರೆ, ಸಮರ್ಪಕವಾಗಿ ಸೌಲಭ್ಯಗಳು ದೊರೆಯುತ್ತಿಲ್ಲ. ರಾಜಕೀಯ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿದಿದ್ದೇವೆ ಎಂದು ಹೇಳಿದರು.</p>.<p>ಹಿಂದುಳಿದ ವರ್ಗಗಳ ಸಾಮಾಜಿಕ ಪಾಲನ್ನು ಮೇಲ್ವರ್ಗಗಳು ಪಡೆಯುತ್ತಿವೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮೀಸಲಾತಿ ಸಿಗದ ರೀತಿಯಲ್ಲಿ ಮಾಡುತ್ತಿದ್ದಾರೆ. ವಕೀಲರ ನೇತೃತ್ವದಲ್ಲಿ ಈ ವರ್ಗಗಳ ಜನರನ್ನು ಮುನ್ನಡೆಸಿದರೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ಹೇಳಿದರು.</p>.<p>ಹಿಂದುಳಿದ ವರ್ಗಗಳ ವಕೀಲರ ಸಂಘ ಈಗ ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 10ರಂದು ಸಂಜೆ 4ಕ್ಕೆ ಸಂಘವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸುವರು. ಸಚಿವರಾದ ಕೋಟ ಶ್ರೀನಿವಾಸಪೂಜಾರಿ, ಆನಂದ್ ಸಿಂಗ್ ಇತರರು ಪಾಲ್ಗೊಳ್ಳುವರು ಎಂದರು.</p>.<p>ರಾಜ್ಯದಲ್ಲಿ ಒಬಿಸಿ ವಕೀಲರನ್ನು ಒಗ್ಗೂಡಿಸುತ್ತೇವೆ. ಸಂಘವು ಯಾವುದೇ ಜಾತಿ ವಿರುದ್ಧವಲ್ಲ. ರಾಜಕೀಯ ಸಂಘಟನೆಯೂ ಅಲ್ಲ. ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದಷ್ಟೇ ಉದ್ದೇಶ. ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ಸಹ ರಚಿಸಲಾಗುವುದು ಎಂದರು.</p>.<p>ಸಂಘದ ಉಪಾಧ್ಯಕ್ಷ ಎ.ಎಚ್. ಪ್ರಶಾಂತ್ ಮಾತನಾಡಿ, ಪ್ರವರ್ಗ 1 ಮತ್ತು ಪ್ರವರ್ಗ ‘2ಎ’ ಅಡಿಯ 197 ಜಾತಿಗಳ ವಕೀಲರು ಮಾತ್ರ ನಮ್ಮ ಸಂಘವನ್ನು ಸೇರಬಹುದು. ಈ ಜಾತಿಗಳು ಅತ್ಯಂತ ಹಿಂದುಳಿದಿವೆ ಎಂದು ಹೇಳಿದರು.</p>.<p>ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎಂ. ಮುನೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಗದ 222 ವಕೀಲರು ಇದ್ದಾರೆ. ಜೂನ್ 10ರಂದು ನಡೆಯುವ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.</p>.<p>ರಾಜ್ಯಸಂಘದ ಪದಾಧಿಕಾರಿಗಳಾದ ಕೆ. ಗಂಗಪ್ಪ, ಚಂದ್ರಶೇಖರ್ ರೊಡ್ನವರ್, ಕೆ.ಜಿ. ಶಿವಣ್ಣ, ಡಿ.ಎ. ಲಕ್ಷ್ಮಿನಾರಾಯಣ, ಎಂ. ವೆಂಕಟೇಶ್ ಗೌಡ, ಚನ್ನಯ್ಯ ವಿಶ್ವಕರ್ಮ, ಮಾಲತಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಹಿಂದುಳಿದ ವರ್ಗಗಳ ವಕೀಲರು ಸಂಘಟಿತರಾಗಬೇಕು. ಆ ಮೂಲಕ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ವಕೀಲರ ಸಂಘದ ಅಧ್ಯಕ್ಷ ಸುರೇಶ್ ಎಂ. ಲಾತೂರ ಸಲಹೆ ನೀಡಿದರು.</p>.<p>ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ 52ರಷ್ಟು ಮಂದಿ ಹಿಂದುಳಿದ ವರ್ಗಗಳ ಜನರು ಇದ್ದೇವೆ. ಆದರೆ, ಸಮರ್ಪಕವಾಗಿ ಸೌಲಭ್ಯಗಳು ದೊರೆಯುತ್ತಿಲ್ಲ. ರಾಜಕೀಯ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿದಿದ್ದೇವೆ ಎಂದು ಹೇಳಿದರು.</p>.<p>ಹಿಂದುಳಿದ ವರ್ಗಗಳ ಸಾಮಾಜಿಕ ಪಾಲನ್ನು ಮೇಲ್ವರ್ಗಗಳು ಪಡೆಯುತ್ತಿವೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮೀಸಲಾತಿ ಸಿಗದ ರೀತಿಯಲ್ಲಿ ಮಾಡುತ್ತಿದ್ದಾರೆ. ವಕೀಲರ ನೇತೃತ್ವದಲ್ಲಿ ಈ ವರ್ಗಗಳ ಜನರನ್ನು ಮುನ್ನಡೆಸಿದರೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ಹೇಳಿದರು.</p>.<p>ಹಿಂದುಳಿದ ವರ್ಗಗಳ ವಕೀಲರ ಸಂಘ ಈಗ ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 10ರಂದು ಸಂಜೆ 4ಕ್ಕೆ ಸಂಘವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸುವರು. ಸಚಿವರಾದ ಕೋಟ ಶ್ರೀನಿವಾಸಪೂಜಾರಿ, ಆನಂದ್ ಸಿಂಗ್ ಇತರರು ಪಾಲ್ಗೊಳ್ಳುವರು ಎಂದರು.</p>.<p>ರಾಜ್ಯದಲ್ಲಿ ಒಬಿಸಿ ವಕೀಲರನ್ನು ಒಗ್ಗೂಡಿಸುತ್ತೇವೆ. ಸಂಘವು ಯಾವುದೇ ಜಾತಿ ವಿರುದ್ಧವಲ್ಲ. ರಾಜಕೀಯ ಸಂಘಟನೆಯೂ ಅಲ್ಲ. ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದಷ್ಟೇ ಉದ್ದೇಶ. ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ಸಹ ರಚಿಸಲಾಗುವುದು ಎಂದರು.</p>.<p>ಸಂಘದ ಉಪಾಧ್ಯಕ್ಷ ಎ.ಎಚ್. ಪ್ರಶಾಂತ್ ಮಾತನಾಡಿ, ಪ್ರವರ್ಗ 1 ಮತ್ತು ಪ್ರವರ್ಗ ‘2ಎ’ ಅಡಿಯ 197 ಜಾತಿಗಳ ವಕೀಲರು ಮಾತ್ರ ನಮ್ಮ ಸಂಘವನ್ನು ಸೇರಬಹುದು. ಈ ಜಾತಿಗಳು ಅತ್ಯಂತ ಹಿಂದುಳಿದಿವೆ ಎಂದು ಹೇಳಿದರು.</p>.<p>ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎಂ. ಮುನೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಗದ 222 ವಕೀಲರು ಇದ್ದಾರೆ. ಜೂನ್ 10ರಂದು ನಡೆಯುವ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.</p>.<p>ರಾಜ್ಯಸಂಘದ ಪದಾಧಿಕಾರಿಗಳಾದ ಕೆ. ಗಂಗಪ್ಪ, ಚಂದ್ರಶೇಖರ್ ರೊಡ್ನವರ್, ಕೆ.ಜಿ. ಶಿವಣ್ಣ, ಡಿ.ಎ. ಲಕ್ಷ್ಮಿನಾರಾಯಣ, ಎಂ. ವೆಂಕಟೇಶ್ ಗೌಡ, ಚನ್ನಯ್ಯ ವಿಶ್ವಕರ್ಮ, ಮಾಲತಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>