‘ಆರು, ಏಳು ಮತ್ತು ಎಂಟನೇ ತರಗತಿಯ ವಿಜ್ಞಾನದಲ್ಲಿ ‘ಎಳೆಯಿಂದ ಬಟ್ಟೆ’ ಎಂಬ ಪಾಠವಿದೆ. ಗಾಂಧೀಜಿ ಕರ್ಮಭೂಮಿಯಾಗಿದ್ದ ಸಬರಮತಿ ಆಶ್ರಮಕ್ಕೆ ಹೋಗಿದ್ದಾಗ ಪುಟ್ಟ ಚರಕವನ್ನು ತಂದಿದ್ದೆ. ಚರಕದಲ್ಲಿ ಯಾವರೀತಿ ಹತ್ತಿಯಿಂದ ನೂಲನ್ನು ತೆಗೆಯುತ್ತಿದ್ದರು ಎಂದು ಈ ದಿನ ವಿದ್ಯಾರ್ಥಿಗಳಿಗೆ ತೋರಿಸಿದೆ. ನೈಸರ್ಗಿಕ ಎಳೆಗಳು, ಎಳೆಯಿಂದ ಬಟ್ಟೆ, ಸಂಶ್ಲೇಷಿತ ಎಳೆಗಳು ಮುಂತಾದ ಸಂಗತಿಗಳು ವಿದ್ಯಾರ್ಥಿಗಳಿಗೆ ಪಠ್ಯದಲ್ಲಿವೆ. ಪ್ರಾಯೋಗಿಕವಾಗಿ ತೋರಿಸಿದಾಗ ಮಕ್ಕಳು ಮರೆಯುವುದಿಲ್ಲ. ಪಾಠವನ್ನು ಚೆನ್ನಾಗಿ ಅರ್ಥೈಸಿಕೊಳ್ಳುವರು’ಎಂದು ಶಿಕ್ಷಕ ಎಂ.ಎ.ರಾಮಕೃಷ್ಣ ತಿಳಿಸಿದರು.