<p><strong>ಚಿಂತಾಮಣಿ:</strong> ತಾಲ್ಲೂಕಿನ ಕೈವಾರ ಅಂಬೇಡ್ಕರ್ ಅನುದಾನಿತ ಶಾಲೆಯಲ್ಲಿ ಬುಧವಾರ ಸಂವಿಧಾನ ದಿನವನ್ನು ಆಚರಿಸಲಾಯಿತು.</p>.<p>ಶಿಕ್ಷಕ ಶ್ರೀಧರ್ ಹಿರೇಮಠ್ ಮಾತನಾಡಿ, ವಿಶ್ವದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನ ದೊಡ್ಡ ಲಿಖಿತ ಸಂವಿಧಾನ. ಸಂವಿಧಾನ ರಚನಾ ಸಮಿತಿಯು 60 ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ 2 ವರ್ಷ 11 ತಿಂಗಳು ಸಮಯ ತೆಗೆದುಕೊಂಡು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೈಬರಹದಲ್ಲಿ ರಚನೆ ಮಾಡಿದ್ದಾರೆ ಎಂದು ತಿಳಿಸಿದರು.</p>.<p>ದೆಹಲಿಯ ಸಂಸತ್ ಭವನದಲ್ಲಿ ಸಂವಿಧಾನ ಹಸ್ತಪ್ರತಿಯನ್ನು ಈಗಲೂ ನೋಡಬಹುದು. ಸಂವಿಧಾನ ಹಬ್ಬವನ್ನು ನಾವು ವರ್ಷದಲ್ಲಿ ಜನವರಿ 26 ರಂದು ಮತ್ತು ನವೆಂಬರ್ 26 ರಂದು ಆಚರಣೆ ಮಾಡುತ್ತೇವೆ. 2015ರಿಂದ ಸಂವಿಧಾನ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.</p>.<p>ಸಮಾಜ ಶಿಕ್ಷಕ ಉಮೇಶ ಮಾತನಾಡಿ, ಅಂಬೇಡ್ಕರ್ ಅಪಾರ ಜ್ಞಾನ ಹೊಂದಿದ್ದರು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಅವರ ಮೂಲಮಂತ್ರಗಳಾಗಿದ್ದವು. ನಾವು ಸುರಕ್ಷಿತ, ಸ್ವತಂತ್ರವಾಗಿರಲು ರಚಿಸಿದ ಸಂವಿಧಾನವೇ ಶ್ರೀರಕ್ಷೆಯಾಗಿದೆ ಎಂದು ಹೇಳಿದರು.</p>.<p>ಮುಖ್ಯ ಶಿಕ್ಷಕ ಸುರೇಶ ಮಾತನಾಡಿ, ಸಂವಿಧಾನ ಕೊಡಮಾಡಿದ ಹಕ್ಕುಗಳಿಂದಾಗಿ ನಾವೆಲ್ಲರೂ ಶಿಕ್ಷಣ ಪಡೆಯುವಂತಾಗಿದೆ. ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ನಾವು ಮರೆಯಬಾರದು. ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತರ ರಾಷ್ಟ್ರೀಯ ಭಾವೈಕ್ಯ ಮೂಡಿಸುವ ಸಂವಿಧಾನ ನಮ್ಮದು ಎಂದು ಹೇಳಿದರು.</p>.<p>ವಿದ್ಯಾರ್ಥಿಗಳಿಗೆ ಸಂವಿಧಾನ ಮೌಲ್ಯಗಳ ಕುರಿತು ಭಾಷಣ, ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಿಕ್ಷಕ ಲೋಕೇಶಪ್ಪ, ರತ್ನಾ, ಶ್ರೀಧರ್ ಹಿರೇಮಠ, ವಿವೇಕ್, ಮಂಜುಳ, ಭಾಗ್ಯಮ್ಮ, ವೆಂಕಟರತ್ನಮ್ಮ, ಧನುಷ್, ದಿವ್ಯ, ನೇತ್ರಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ:</strong> ತಾಲ್ಲೂಕಿನ ಕೈವಾರ ಅಂಬೇಡ್ಕರ್ ಅನುದಾನಿತ ಶಾಲೆಯಲ್ಲಿ ಬುಧವಾರ ಸಂವಿಧಾನ ದಿನವನ್ನು ಆಚರಿಸಲಾಯಿತು.</p>.<p>ಶಿಕ್ಷಕ ಶ್ರೀಧರ್ ಹಿರೇಮಠ್ ಮಾತನಾಡಿ, ವಿಶ್ವದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನ ದೊಡ್ಡ ಲಿಖಿತ ಸಂವಿಧಾನ. ಸಂವಿಧಾನ ರಚನಾ ಸಮಿತಿಯು 60 ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ 2 ವರ್ಷ 11 ತಿಂಗಳು ಸಮಯ ತೆಗೆದುಕೊಂಡು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೈಬರಹದಲ್ಲಿ ರಚನೆ ಮಾಡಿದ್ದಾರೆ ಎಂದು ತಿಳಿಸಿದರು.</p>.<p>ದೆಹಲಿಯ ಸಂಸತ್ ಭವನದಲ್ಲಿ ಸಂವಿಧಾನ ಹಸ್ತಪ್ರತಿಯನ್ನು ಈಗಲೂ ನೋಡಬಹುದು. ಸಂವಿಧಾನ ಹಬ್ಬವನ್ನು ನಾವು ವರ್ಷದಲ್ಲಿ ಜನವರಿ 26 ರಂದು ಮತ್ತು ನವೆಂಬರ್ 26 ರಂದು ಆಚರಣೆ ಮಾಡುತ್ತೇವೆ. 2015ರಿಂದ ಸಂವಿಧಾನ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.</p>.<p>ಸಮಾಜ ಶಿಕ್ಷಕ ಉಮೇಶ ಮಾತನಾಡಿ, ಅಂಬೇಡ್ಕರ್ ಅಪಾರ ಜ್ಞಾನ ಹೊಂದಿದ್ದರು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಅವರ ಮೂಲಮಂತ್ರಗಳಾಗಿದ್ದವು. ನಾವು ಸುರಕ್ಷಿತ, ಸ್ವತಂತ್ರವಾಗಿರಲು ರಚಿಸಿದ ಸಂವಿಧಾನವೇ ಶ್ರೀರಕ್ಷೆಯಾಗಿದೆ ಎಂದು ಹೇಳಿದರು.</p>.<p>ಮುಖ್ಯ ಶಿಕ್ಷಕ ಸುರೇಶ ಮಾತನಾಡಿ, ಸಂವಿಧಾನ ಕೊಡಮಾಡಿದ ಹಕ್ಕುಗಳಿಂದಾಗಿ ನಾವೆಲ್ಲರೂ ಶಿಕ್ಷಣ ಪಡೆಯುವಂತಾಗಿದೆ. ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ನಾವು ಮರೆಯಬಾರದು. ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತರ ರಾಷ್ಟ್ರೀಯ ಭಾವೈಕ್ಯ ಮೂಡಿಸುವ ಸಂವಿಧಾನ ನಮ್ಮದು ಎಂದು ಹೇಳಿದರು.</p>.<p>ವಿದ್ಯಾರ್ಥಿಗಳಿಗೆ ಸಂವಿಧಾನ ಮೌಲ್ಯಗಳ ಕುರಿತು ಭಾಷಣ, ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಿಕ್ಷಕ ಲೋಕೇಶಪ್ಪ, ರತ್ನಾ, ಶ್ರೀಧರ್ ಹಿರೇಮಠ, ವಿವೇಕ್, ಮಂಜುಳ, ಭಾಗ್ಯಮ್ಮ, ವೆಂಕಟರತ್ನಮ್ಮ, ಧನುಷ್, ದಿವ್ಯ, ನೇತ್ರಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>