ಪ್ರಸ್ತುತ ಕೋವಿಡ್ 19 ರೂಪಾಂತರಿ 'ಓಮಿಕ್ರಾನ್ ' ಸಾಂಕ್ರಾಮಿಕವು ತೀವ್ರವಾಗಿ ಹರಡುತ್ತಿರುವುದರಿಂದ ದೇವಸ್ಥಾನದಲ್ಲಿ ಪ್ರತಿ ಸೋಮವಾರದವಿಶೇಷ ಪೂಜೆ ರದ್ದುಪಡಿಸಲಾಗಿದೆ. ಭಕ್ತಾದಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೂ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಿಂದೂಪುರ ಸೇರಿದಂತೆ ರಾಜ್ಯದ ವಿವಿಧಜಿಲ್ಲೆಗಳಿಂದ ಬಂದಂತಹಭಕ್ತಾದಿಗಳು ದೇವಸ್ಥಾನದ ಹೊರಗಡೆ ಇರುವ ಅರಳಿ ಮರಕ್ಕೆ ಪೊಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ.