<p><strong>ಗೌರಿಬಿದನೂರು:</strong> ಕಳ್ಳತನಕ್ಕೆ ಬಂದ ಕಳ್ಳ ಮದ್ಯದ ಅಮಲಿನಲ್ಲಿ ಮನೆಯೊಳಗೆ ಮಲಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪ್ರಸಂಗ ಇಲ್ಲಿ ನಡೆದಿದೆ.</p><p>ನಗರ ಹೊರವಲಯದ ಹಳೇ ಆರ್ಟಿಒ ಕಚೇರಿ ಬಳಿಯ ಪ್ರೇಮನಾಥ್ ಅವರ ಮನೆಗೆ ಬಣ್ಣ ಬಳಿಯುವ ಕೆಲಸಕ್ಕೆ ದೇವರಾಜು (40) ಆಗಾಗ್ಗೆ ಬರುತ್ತಿದ್ದ.</p><p>ಪ್ರೇಮನಾಥ್ ಕೆಲಸದ ನಿಮಿತ್ತ ಹೈದರಾಬಾದ್ಗೆ ಹೋಗಿದ್ದರು. ಈ ವಿಚಾರ ದೇವರಾಜ್ಗೆ ತಿಳಿದಿತ್ತು. ಭಾನುವಾರ ಮಧ್ಯರಾತ್ರಿ ದೇವರಾಜ್ ಮತ್ತು ಆತನ ಸ್ನೇಹಿತ ಪ್ರೇಮನಾಥ್ ಮನೆಯಲ್ಲಿ ಕಳ್ಳತನಕ್ಕೆ ಬಂದಿದ್ದಾರೆ. ಬೈಕ್ನ ನಂಬರ್ ಪ್ಲೇಟ್ಗೆ ಕಪ್ಪು ಕವರ್ ಸುತ್ತಿ ಸಮೀಪದ ಲೇಔಟ್ನಲ್ಲಿ ನಿಲ್ಲಿಸಿದ್ದಾರೆ.</p><p>ಪ್ರೇಮನಾಥ್ ಮನೆ ಚಾವಣಿ ತಗಡು ಕತ್ತರಿಸಿ ಒಳ ನುಗ್ಗಿದ್ದಾರೆ. ಬೀರುವಿನಲ್ಲಿದ್ದ ₹ 45 ಸಾವಿರ ಮತ್ತು ಚಿನ್ನದ ಆಭರಣ ದೋಚಿದ್ದಾರೆ.</p><p>ದೇವರಾಜ್ ಜೊತೆ ಬಂದಿದ್ದ ಆತನ ಸ್ನೇಹಿತ ಹಣ ಮತ್ತು ಆಭರಣದೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಹೆಚ್ಚು ಮದ್ಯ ಸೇವಿಸಿದ್ದ ದೇವರಾಜು ಮನೆಯಿಂದ ಹೊರಗೆ ಹೋಗಲಾಗದೆ ಸೋಫಾ ಮೇಲೆಯೇ ಮಲಗಿದ್ದಾನೆ.</p><p>ರಾತ್ರಿಯೇ ಇದನ್ನು ಗಮನಿಸಿದ ನೆರೆ ಮನೆಯವರು ಕಳ್ಳತನಕ್ಕೆ ಕತ್ತರಿಸಿದ್ದ ತಗಡಿಗೆ ಸಿಮೆಂಟ್ ಇಟ್ಟಿಗೆಗಳನ್ನು ಅಡ್ಡವಾಗಿ ಇಟ್ಟು ಕಾವಲು ಕಾದಿದ್ದಾರೆ. ಬೆಳಿಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p><p>ದೇವರಾಜು ಜೇಬಿನಲ್ಲಿ ₹ 5 ಸಾವಿರ ಸಿಕ್ಕಿದೆ, ಉಳಿದ ಹಣವನ್ನು ಸ್ನೇಹಿತ ತೆಗೆದುಕೊಂಡು ಹೋಗಿದ್ದಾನೆ. </p><p>‘₹45 ಸಾವಿರ ಮತ್ತು ಬಂಗಾರದ ಆಭರಣಗಳು ಕಳ್ಳತನವಾಗಿದೆ’ ಎಂದು ಮನೆ ಮಾಲೀಕ ಪ್ರೇಮನಾಥ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು:</strong> ಕಳ್ಳತನಕ್ಕೆ ಬಂದ ಕಳ್ಳ ಮದ್ಯದ ಅಮಲಿನಲ್ಲಿ ಮನೆಯೊಳಗೆ ಮಲಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪ್ರಸಂಗ ಇಲ್ಲಿ ನಡೆದಿದೆ.</p><p>ನಗರ ಹೊರವಲಯದ ಹಳೇ ಆರ್ಟಿಒ ಕಚೇರಿ ಬಳಿಯ ಪ್ರೇಮನಾಥ್ ಅವರ ಮನೆಗೆ ಬಣ್ಣ ಬಳಿಯುವ ಕೆಲಸಕ್ಕೆ ದೇವರಾಜು (40) ಆಗಾಗ್ಗೆ ಬರುತ್ತಿದ್ದ.</p><p>ಪ್ರೇಮನಾಥ್ ಕೆಲಸದ ನಿಮಿತ್ತ ಹೈದರಾಬಾದ್ಗೆ ಹೋಗಿದ್ದರು. ಈ ವಿಚಾರ ದೇವರಾಜ್ಗೆ ತಿಳಿದಿತ್ತು. ಭಾನುವಾರ ಮಧ್ಯರಾತ್ರಿ ದೇವರಾಜ್ ಮತ್ತು ಆತನ ಸ್ನೇಹಿತ ಪ್ರೇಮನಾಥ್ ಮನೆಯಲ್ಲಿ ಕಳ್ಳತನಕ್ಕೆ ಬಂದಿದ್ದಾರೆ. ಬೈಕ್ನ ನಂಬರ್ ಪ್ಲೇಟ್ಗೆ ಕಪ್ಪು ಕವರ್ ಸುತ್ತಿ ಸಮೀಪದ ಲೇಔಟ್ನಲ್ಲಿ ನಿಲ್ಲಿಸಿದ್ದಾರೆ.</p><p>ಪ್ರೇಮನಾಥ್ ಮನೆ ಚಾವಣಿ ತಗಡು ಕತ್ತರಿಸಿ ಒಳ ನುಗ್ಗಿದ್ದಾರೆ. ಬೀರುವಿನಲ್ಲಿದ್ದ ₹ 45 ಸಾವಿರ ಮತ್ತು ಚಿನ್ನದ ಆಭರಣ ದೋಚಿದ್ದಾರೆ.</p><p>ದೇವರಾಜ್ ಜೊತೆ ಬಂದಿದ್ದ ಆತನ ಸ್ನೇಹಿತ ಹಣ ಮತ್ತು ಆಭರಣದೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಹೆಚ್ಚು ಮದ್ಯ ಸೇವಿಸಿದ್ದ ದೇವರಾಜು ಮನೆಯಿಂದ ಹೊರಗೆ ಹೋಗಲಾಗದೆ ಸೋಫಾ ಮೇಲೆಯೇ ಮಲಗಿದ್ದಾನೆ.</p><p>ರಾತ್ರಿಯೇ ಇದನ್ನು ಗಮನಿಸಿದ ನೆರೆ ಮನೆಯವರು ಕಳ್ಳತನಕ್ಕೆ ಕತ್ತರಿಸಿದ್ದ ತಗಡಿಗೆ ಸಿಮೆಂಟ್ ಇಟ್ಟಿಗೆಗಳನ್ನು ಅಡ್ಡವಾಗಿ ಇಟ್ಟು ಕಾವಲು ಕಾದಿದ್ದಾರೆ. ಬೆಳಿಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p><p>ದೇವರಾಜು ಜೇಬಿನಲ್ಲಿ ₹ 5 ಸಾವಿರ ಸಿಕ್ಕಿದೆ, ಉಳಿದ ಹಣವನ್ನು ಸ್ನೇಹಿತ ತೆಗೆದುಕೊಂಡು ಹೋಗಿದ್ದಾನೆ. </p><p>‘₹45 ಸಾವಿರ ಮತ್ತು ಬಂಗಾರದ ಆಭರಣಗಳು ಕಳ್ಳತನವಾಗಿದೆ’ ಎಂದು ಮನೆ ಮಾಲೀಕ ಪ್ರೇಮನಾಥ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>