ಚಿಕ್ಕಬಳ್ಳಾಪುರ: ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ವಿಭಜನೆಯ ನಿರ್ಧಾರವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಇದರಿಂದಾಗಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ರಚನೆಗೆ ತಡೆ ಬಿದ್ದಿದೆ.
ಬಿಜೆಪಿ ಸರ್ಕಾರವು ಕೋಚಿಮುಲ್ ವಿಭಜಿಸಿ ಚಿಮುಲ್ ರಚನೆಗೆ ಮುಂದಾಗಿತ್ತು. ಇದರ ವಿರುದ್ಧ ಕೋಚಿಮುಲ್ ನಿರ್ದೇಶಕರಾದ ಭರಣಿ ವೆಂಕಟೇಶ್ ಮತ್ತು ಅಶ್ವತ್ಥ ನಾರಾಯಣ ಬಾಬು ನ್ಯಾಯಾಲಯದ ಮೊರೆ ಹೋಗಿದ್ದರು.
‘ಚಿಕ್ಕಬಳ್ಳಾಪುರದ ಡೇರಿಯಲ್ಲಿ ಹಾಲಿನ ಪ್ಯಾಕೆಟ್ ತಯಾರಿಕೆ ಘಟಕವಿಲ್ಲ. ಹೊಸ ಒಕ್ಕೂಟ ಕಾರ್ಯಾಚರಣೆಗೆ ಜಾಗದ ಕೊರತೆಯೂ ಇದೆ. ಇದರಿಂದ ನಷ್ಟವಾಗುತ್ತದೆ’ ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿ ಒಕ್ಕೂಟ ವಿಭಜನೆಯ ಆದೇಶ ವಾಪಸ್ ಪಡೆದಿದೆ.
ಕೋಚಿಮುಲ್ ವಿಭಜನೆ ವಿವಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.