ಶಕ್ತಿದೇವತೆಗಳಿರುವ ದೇವಸ್ಥಾನಗಳಲ್ಲಿ ನವರಾತ್ರಿ ಯುದ್ದಕ್ಕೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ವಿಧಿವಿಧಾನಗಳಂತೆ ಆಚರಿಸುವುದು ಸಂಪ್ರದಾಯ. ಗುರುವಾರದಿಂದ ನಗರದ ಶ್ರೀನಿವಾಸ ಕಲ್ಯಾಣ ಮಂದಿರ, ಅಜಾದ್ ಚೌಕ, ವಾಸವಿ ದೇವಾಲಯ, ಆಲಂಬಗಿರಿಯ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಕೈವಾರದ ಅಮರನಾರೇಯಣಸ್ವಾಮಿ ದೇವಾಲಯ ಸೇರಿದಂತೆ ಹಲವು ದೇವಾಲಯಗಳಲ್ಲಿ ಗುರುವಾರದಿಂದ ಅ. 15ರವರೆಗೂ ಪ್ರತಿನಿತ್ಯ ವಿಶೇಷ ಕಾರ್ಯಕ್ರಮ ಜರುಗುತ್ತವೆ.