ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ ಕೆಲ ಮುಖಂಡರು ಬಿಜೆಪಿಗೆ

ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಕೆಸರಿ ಪಾಳೆಯಕ್ಕೆ ಸೇರ್ಪಡೆ
Last Updated 3 ಅಕ್ಟೋಬರ್ 2019, 16:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಗುರುವಾರ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವಿರೋಧ ಪಕ್ಷದ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.

ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್‌, ತಿಮ್ಮಪಲ್ಲಿಯ ಶ್ರೀನಿವಾಸ್, ಘಂಟಂವಾರಪಲ್ಲಿಯ ಗಂಗಾಧರಪ್ಪ, ನಾರೇಮದ್ದೆಪಲ್ಲಿಯ ರಾಘು ಸೇರಿದಂತೆ ತಿಮ್ಮಪಲ್ಲಿ, ಘಂಟವಾರಪಲ್ಲಿ, ನಾರೇಮದ್ದೆಪಲ್ಲಿ, ರಾಚ್ಚೇರುವು, ತೊಳಪಲ್ಲಿ, ಮದ್ದೆಪಲ್ಲಿ, ಗೋರ್ತುಪಲ್ಲಿ, ಮುಸಿನಗಾನಪಲ್ಲಿ, ನಂಬರೆಡ್ಡಿಪಲ್ಲಿ, ಮಾಮಿಡಿಕಾಯಪಲ್ಲಿ, ಮಂಕಲಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 30ಕ್ಕೂ ಅಧಿಕ ಮುಖಂಡರನ್ನು ಸಚಿವ ರವಿ ಅವರು ಪಕ್ಷಕ್ಕೆ ಬರಮಾಡಿಕೊಂಡರು.

ಬೆಂಗಳೂರು ಗ್ರಾಮಾಂತರ ವಿಭಾಗ ಪ್ರಭಾರಿ ಗೀತಾ ವಿವೇಕಾನಂದ, ಸಹ ಪ್ರಭಾರಿ ಶಿವಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ, ಮುಖಂಡ ಚಲವಾದಿ ನಾರಾಯಣ ಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT