<p><strong>ಗೌರಿಬಿದನೂರು:</strong> ಇಲ್ಲಿನ ನಗರಸಭೆ ಕಚೇರಿಯಲ್ಲಿ ಸೋಮವಾರ ಖಾತಾ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. </p>.<p>ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ 250ಕ್ಕೂ ಫಲಾನುಭವಿಗಳಿಗೆ ಇ–ಖಾತಾ ವಿತರಣೆ ಮಾಡಿದರು. </p>.<p>ಬಳಿಕ ಮಾತನಾಡಿದ ಅವರು, ಈವರೆಗೂ ನಾಲ್ಕೂವರೆ ಸಾವಿರ ಇ- ಖಾತೆಗಳನ್ನು ನಗರದ ಆಸ್ತಿದಾರರಿಗೆ ಸಂಪೂರ್ಣ ಪರದರ್ಶಕವಾಗಿ ವಿತರಿಸಲಾಗಿದೆ. ಖಾತೆ ವಿಭಾಗದಲ್ಲಿ ಲೋಪದೋಷಗಳನ್ನು ನಿಯಂತ್ರಿಸಲು ಪ್ರತೀವಾರ ತಾವೇ ಇ–ಖಾತಾ ಹಮ್ಮಿಕೊಂಡಿದ್ದೇನೆ. ಇದರಿಂದಾಗಿ ನಗರದ ಎಲ್ಲ ಫಲಾನುಭವಿಗಳಿಗೆ ಯಾವುದೇ ತೊಂದರೆ ಇಲ್ಲದೆ ಇ–ಖಾತೆ ಲಭ್ಯವಾಗುತ್ತಿವೆ ಎಂದು ತಿಳಿಸಿದರು. </p>.<p>ಇ–ಖಾತೆ ಪಡೆಯುವ ವಿಚಾರದಲ್ಲಿ ಸಾರ್ವಜನಿಕರು ಎದುರಿಸುವ ಯಾವುದೇ ಸಮಸ್ಯೆಗಳಿದ್ದರೂ, ಖುದ್ದಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು. </p>.<p>ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣ್ ಮಾತನಾಡಿ, ಜನಪರ ಆಡಳಿತಕ್ಕೆ ತಾವು ಹೆಚ್ಚು ಒತ್ತು ನೀಡುತ್ತಿದ್ದು, ನಗರಸಭೆಗೆ ಸಂಬಂಧಿಸಿದಂತೆ ಖಾತಾ ಅದಾಲತ್ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ. ನಗರದ ಪ್ರತಿ ವಾರ್ಡ್ಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದು ಹೇಳಿದರು.</p>.<p>ಇದೇ ವೇಳೆ ಪೌರಾಯುಕ್ತ ಕೆ.ಎಂ. ರಮೇಶ್, ನಗರಸಭಾ ಸದಸ್ಯ ಅಮರನಾಥ್, ಮಂಜುಳಾ, ಪದ್ಮಾವತಮ್ಮ, ರಾಜ್ ಕುಮಾರ್, ಗೋಪಾಲ್, ಗಿರೀಶ್ ಹಾಗೂ ಡಿ.ಜೆ. ಚಂದ್ರಮೋಹನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು:</strong> ಇಲ್ಲಿನ ನಗರಸಭೆ ಕಚೇರಿಯಲ್ಲಿ ಸೋಮವಾರ ಖಾತಾ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. </p>.<p>ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ 250ಕ್ಕೂ ಫಲಾನುಭವಿಗಳಿಗೆ ಇ–ಖಾತಾ ವಿತರಣೆ ಮಾಡಿದರು. </p>.<p>ಬಳಿಕ ಮಾತನಾಡಿದ ಅವರು, ಈವರೆಗೂ ನಾಲ್ಕೂವರೆ ಸಾವಿರ ಇ- ಖಾತೆಗಳನ್ನು ನಗರದ ಆಸ್ತಿದಾರರಿಗೆ ಸಂಪೂರ್ಣ ಪರದರ್ಶಕವಾಗಿ ವಿತರಿಸಲಾಗಿದೆ. ಖಾತೆ ವಿಭಾಗದಲ್ಲಿ ಲೋಪದೋಷಗಳನ್ನು ನಿಯಂತ್ರಿಸಲು ಪ್ರತೀವಾರ ತಾವೇ ಇ–ಖಾತಾ ಹಮ್ಮಿಕೊಂಡಿದ್ದೇನೆ. ಇದರಿಂದಾಗಿ ನಗರದ ಎಲ್ಲ ಫಲಾನುಭವಿಗಳಿಗೆ ಯಾವುದೇ ತೊಂದರೆ ಇಲ್ಲದೆ ಇ–ಖಾತೆ ಲಭ್ಯವಾಗುತ್ತಿವೆ ಎಂದು ತಿಳಿಸಿದರು. </p>.<p>ಇ–ಖಾತೆ ಪಡೆಯುವ ವಿಚಾರದಲ್ಲಿ ಸಾರ್ವಜನಿಕರು ಎದುರಿಸುವ ಯಾವುದೇ ಸಮಸ್ಯೆಗಳಿದ್ದರೂ, ಖುದ್ದಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು. </p>.<p>ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣ್ ಮಾತನಾಡಿ, ಜನಪರ ಆಡಳಿತಕ್ಕೆ ತಾವು ಹೆಚ್ಚು ಒತ್ತು ನೀಡುತ್ತಿದ್ದು, ನಗರಸಭೆಗೆ ಸಂಬಂಧಿಸಿದಂತೆ ಖಾತಾ ಅದಾಲತ್ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ. ನಗರದ ಪ್ರತಿ ವಾರ್ಡ್ಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದು ಹೇಳಿದರು.</p>.<p>ಇದೇ ವೇಳೆ ಪೌರಾಯುಕ್ತ ಕೆ.ಎಂ. ರಮೇಶ್, ನಗರಸಭಾ ಸದಸ್ಯ ಅಮರನಾಥ್, ಮಂಜುಳಾ, ಪದ್ಮಾವತಮ್ಮ, ರಾಜ್ ಕುಮಾರ್, ಗೋಪಾಲ್, ಗಿರೀಶ್ ಹಾಗೂ ಡಿ.ಜೆ. ಚಂದ್ರಮೋಹನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>