ವ್ಯಕ್ತಿಯೊಬ್ಬರು ವಿದೇಶಕ್ಕೆ ತೆರಳಲು ಪಾಸ್ಪೋರ್ಟ್ ಮಾಡಿಸಬೇಕಾಗಿತ್ತು. ಇವುಗಳ ದಾಖಲೆ ಪರಿಶೀಲನೆ ವೇಳೆ ಈ ರತ್ನಯ್ಯ ಈ ಮಾತು ಹೇಳಿದ್ದಾರೆ. ಠಾಣೆಯ ಜೀಪ್ ದುರಸ್ತಿಗೆ ಜನರಿಂದ ಹಣ ಕೇಳಿದ್ದು, ಮುಟ್ಟುಗೋಲು ಹಾಕಿಕೊಂಡ ಬೈಕ್ಗಳನ್ನು ಮಾಲೀಕರಿಗೆ ಹಿಂದಿರುಗಿಸುವ ಸಂಧರ್ಭದಲ್ಲಿ ಹಣ ಕೇಳಿದ್ದ ಆಡಿಯೊಗಳು ಸಹ ವೈರಲ್ ಆಗಿದ್ದವು. ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ಆ.30ರಂದು ರತ್ನಯ್ಯ ವಿರುದ್ಧ ಸಾರ್ವಜನಿಕರು ಠಾಣೆಯ ಮುಂದೆ ಪ್ರತಿಭಟಿಸಿದ್ದರು.