ಚೇಳೂರು ಸಮೀಪದ ಬೈರಪ್ಪನಹಳ್ಳಿ ಗ್ರಾಮದ ಕೆರೆ ಬತ್ತಿ ಹೋಗಿರುವುದು
ಜಾನುವಾರು ಕುಡಿಯುವ ನೀರಿನ ತೊಟ್ಟಿಗಳಲ್ಲಿ ನೀರಿಲ್ಲದೆ ಕಸ ಕಡ್ಡಿ ತುಂಬಿರುವುದು
ಚೇಳೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ಜಾನುವಾರು ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಆದರೆ ಹಲವು ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನೀರಿಲ್ಲದೆ ಒಣಗಿ ಕಸ ಕಡ್ಡಿ ತುಂಬುವ ತೊಟ್ಟಿಗಳಾಗಿವೆ. ಸಂಬಂಧಿಸಿದವರು ಕಣ್ಣು ಮುಚ್ಚಿ ಕುಳಿತುಕೊಳ್ಳದೆ ನೀರು ತುಂಬಿಸಿ ಜಾನುವಾರುಗಳ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು.
-ಪಿ.ಎನ್.ಆಂಜನೇಯರೆಡ್ಡಿ, ಬೈರಪ್ಪನಹಳ್ಳಿ
ಬೇಸಿಗೆಯಲ್ಲಿ ತಾಪಮಾನದ ಏರಿಕೆಗೆ ಅಕಾಲಿಕ ಮಳೆ ಸೇರಿದಂತೆ ನೂರಾರು ಕಾರಣಗಳಿವೆ. ಪ್ರಕೃತಿಯಲ್ಲಿ ಈ ಬದಲಾವಣೆಗಳಿಗೆ ಮಾನವನೇ ಸೂತ್ರಧಾರ. ಪರಿಸರ ಸಂರಕ್ಷಣೆ ಜಾಗೃತಿ ಮೂಡದ ಹೊರತು ಹವಾಮಾನ ವೈಪರೀತ್ಯ ನಿಯಂತ್ರಿಸಲು ಸಾಧ್ಯವಿಲ್ಲ.
-ಎಸ್.ವಿ.ಈಶ್ವರರೆಡ್ಡಿ, ಚೇಳೂರು
ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿದು ನಾಶ ಮಾಡಲಾಗುತ್ತಿದೆ. ಹೀಗಾಗಿ ಮಳೆ ಅಭಾವ ಎದುರಾಗಿದೆ. ಸರ್ಕಾರ ಮನೆಗೊಂದು ಮರ ಊರಿಗೊಂದು ವನ ಯೋಜನೆ ರೂಪಿಸಬೇಕು