ಸಾರ್ವಜನಿಕರ ಮನವಿ: ಚಿಕ್ಕಮಗಳೂರು, ಮೂಡಿಗೆರೆ, ಕಡೂರು ಮತ್ತಿತರ ಘಟಕಗಳಿಂದ ಮಂಗಳೂರು, ಧರ್ಮಸ್ಥಳಕ್ಕೆ ಮತ್ತಿತರ ಮಾರ್ಗಗಳಲ್ಲಿ ಅವಧಿ ಮುಗಿದ ಹಳೆಯ ಬಸ್ಗಳು ಸಂಚರಿಸುತ್ತಿವೆ. ಅನೇಕ ಬಸ್ಗಳಲ್ಲಿ ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ರಸ್ತೆ ಮಧ್ಯೆ ಪದೇ ಪದೇ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತವೆ. ಇಂತಹ ಬಸ್ಗಳನ್ನು ಬದಲಿಸಿ, ಹೊಸ ಬಸ್ಗಳನ್ನು ಬಿಟ್ಟರೆ ಜನರು ಸುರಕ್ಷಿತವಾಗಿ ಪ್ರಯಾಣ ಮಾಡಲು ಅನುಕೂಲವಾಗುತ್ತದೆ. ಚಿಕ್ಕಮಗಳೂರು ಘಟಕದ ವ್ಯವಸ್ಥಾಪಕರು ಹಳೆಯ ಬಸ್ಗಳನ್ನು ಬದಲಿಸುವಂತೆ ಸರ್ಕಾರದ ಗಮನ ಸೆಳೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.