<p><strong>ಕಡೂರು (ಚಿಕ್ಕಮಗಳೂರು):</strong> ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಎಸ್.ಬಿದರೆ ಗ್ರಾಮದಲ್ಲಿರುವ, ದಶಕಗಳಿಂದ ಬರಿದಾಗಿದ್ದ ಕೆರೆಗೆ ಗ್ರಾಮಸ್ಥರ ಸಾಂಘಿಕ ಶ್ರಮದಿಂದಾಗಿ ಈಗ ನೀರು ಹರಿದುಬರುತ್ತಿದೆ.</p>.<p>ಹತ್ತಿರದ ಬೆಳವಾಡಿ ಕೆರೆಯು ತುಂಬಿ ಕೋಡಿಯಾಗಿ ಹರಿಯುತ್ತಿದ್ದ ನೀರು, ಮಾಚೇನಹಳ್ಳಿ-ಎಸ್.ಬಿದರೆ ಬಳಿ ಹರಿದು, ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಸೇರುತ್ತಿತ್ತು. ಆ ನೀರು ಈಗ ಎಸ್.ಬಿದರೆ ಕೆರೆ ಸೇರುತ್ತಿದೆ.</p>.<p>ಸುಮಾರು 65 ಎಕರೆ ವಿಸ್ತೀರ್ಣದ ಎಸ್.ಬಿದರೆ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದೆ. ಕೆರೆಗೆ ಮಳೆ ನೀರೇ ಮೂಲವಾಗಿತ್ತು. ಕೆರೆ ತುಂಬುವಷ್ಟು ಮಳೆ ಇರಲಿಲ್ಲ. ಸಮಸ್ಯೆಗೆ ಪರಿಹಾರವಾಗಿ, ಇನ್ನೊಂದು ಕೆರೆ ಕೋಡಿಯಾಗಿ ಹರಿದುಹೋಗುತ್ತಿದ್ದ ನೀರನ್ನೇ ಕೆರೆ ತುಂಬಿಸಲು ಗ್ರಾಮಸ್ಥರು ಒತ್ತು ನೀಡಿದರು.</p>.<p>ಎತ್ತಿನಹೊಳೆ ಯೋಜನೆ ಮೂಲಕ ಹಳೇಬೀಡು ಕೆರೆಗೆ 2 ವರ್ಷದ ಹಿಂದೆ ನೀರು ಬಂದಿತ್ತು. ಹಳೇಬೀಡಿನಿಂದ ಬೆಳವಾಡಿ ಕೆರೆಗೆ ಹರಿದನೀರು, ಬಳಿಕ ವಾಣಿವಿಲಾಸ ಸಾಗರ ಸೇರುತ್ತಿತ್ತು. ವಾಣಿವಿಲಾಸ ಸಾಗರ ತುಂಬಿದ್ದರಿಂದ ಎಸ್.ಬಿದರೆ ಗ್ರಾಮಸ್ಥರು, ನೀರನ್ನು ಕೆರೆಗೆ ಅಭಿಮುಖವಾಗಿ ಹರಿಸಿ ಸಮಸ್ಯೆ ನೀಗಿಸಲು ಮುಂದಾದರು.</p>.<p>ಮಾಚೇನಹಳ್ಳಿಯಿಂದ ಎಸ್.ಬಿದರೆ ಕೆರೆಗೆ 2 ಕಿ.ಮೀ ಅಂತರವಿದ್ದು, ಪೈಪ್, ಟಿ.ಸಿ. ಅಳವಡಿಸಿ, ಪಂಪ್ಸೆಟ್ ನೆರವಿನಿಂದ ನೀರು ಹರಿಸಲು ನಿರ್ಧರಿಸಿದರು. ವಿದ್ಯುದೀಕರಣವನ್ನು ಗ್ರಾಮದಲ್ಲಿ ರೀವೈಂಡಿಂಗ್ ಕೆಲಸ ಮಾಡುವ ಯುವಕರು, ಪೈಪ್ಲೈನ್ ಅಳವಡಿಸಲು ಪ್ಲಂಬರ್ಗಳು ಸಿದ್ಧರಾದರು. ಕೂಲಿ ಕಾರ್ಮಿಕರು, ಸರ್ಕಾರಿ ನೌಕರರು, ಸುತ್ತಮುತ್ತಲ ಗ್ರಾಮಸ್ಥರೂ ಹಣ ಸಹಾಯ ಮಾಡಿದರು.</p>.<p>ಕಳಸಾಪುರ ಎಂಯುಎಸ್ಎಸ್ನಿಂದ ಬಂದ ವಿದ್ಯುತ್ ಲೈನ್ ಮಾಚೇನಹಳ್ಳಿ ಬಳಿ ಇತ್ತು. ಅಲ್ಲಿಯೇ ಟಿ.ಸಿ ಅಳವಡಿಸಲು ಮುಂದಾದರು. ಅದಕ್ಕಾಗಿ ₹2.50 ಲಕ್ಷ ಹಾಗೂ ಪಂಪ್ಸೆಟ್ಗೆ ₹2.10 ಲಕ್ಷ ವೆಚ್ಚವಾಯಿತು. ನೀರೆತ್ತಲು 25 ಅಶ್ವಶಕ್ತಿಯ ಪಂಪ್ಸೆಟ್ ಸಿದ್ಧವಾದವು.</p>.<p>‘ನಮ್ಮ ಕೆರೆಗೆ ನೀರು ತುಂಬಿಸುವ ಯೋಜನೆಗೆ ಎಲ್ಲರ ನೆರವೂ ಇದೆ. ಟಿ.ಸಿ ಅಳವಡಿಸಲು ಶಾಸಕ ಎಚ್.ಡಿ.ತಮ್ಮಯ್ಯ ಅವರ ಸಹಕಾರವೂ ಇದೆ. ಈ ಯೋಜನೆಗೆ ಇದುವರೆಗೆ ಸುಮಾರು ₹25 ಲಕ್ಷ ವೆಚ್ಚವಾಗಿದೆ’ ಎಂದು ಗ್ರಾಮದ ಹಿರಿಯ ಶಂಕರ ಲಿಂಗೇಗೌಡ ತಿಳಿಸಿದರು.</p>.<p>ಇದೇ ರೀತಿ ಸಮೀಪದ ಸಿಂದಿಗೆರೆ, ನಾಗರಾಳು ಗ್ರಾಮಸ್ಥರು ಕೆರೆ ತುಂಬಿಸಲು ಮುಂದಾಗಿದ್ದಾರೆ.</p>.<div><blockquote>ಎಸ್.ಬಿದರೆ ಗ್ರಾಮಸ್ಥರು ಕೆರೆಗೆ ನೀರು ತುಂಬಿಸಲು ಮೆಸ್ಕಾಂನಿಂದ ಸಹಕಾರ ಕೊಡಿಸಿದ್ದೇನೆ. ಶಾಶ್ವತ ನೀರಾವರಿಗೆ ಭದ್ರಾ ಉಪ ಕಣಿವೆ ಯೋಜನೆ ಮತ್ತು ರಣಘಟ್ಟ ಯೋಜನೆಗಳು ಜಾರಿ ಆಗಲಿವೆ</blockquote><span class="attribution">ಎಚ್.ಡಿ.ತಮ್ಮಯ್ಯ ಶಾಸಕ ಚಿಕ್ಕಮಗಳೂರು</span></div>.<div><blockquote>ಸದ್ಯಕ್ಕೆ ಕೆರೆಯನ್ನು ಶೇ 40ರಷ್ಟು ತುಂಬಿಸಲು ನಿರ್ಧರಿಸಿದ್ದೇವೆ. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ಗಳ ಸಲಹೆ ಪಡೆದು ಪೂರ್ಣ ತುಂಬಿಸಲಾಗುವುದು</blockquote><span class="attribution">ಶಂಕರ ಲಿಂಗೇಗೌಡ ಗ್ರಾಮದ ಹಿರಿಯ ಎಸ್.ಬಿದರೆ</span></div>.<p>Quote - </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು (ಚಿಕ್ಕಮಗಳೂರು):</strong> ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಎಸ್.ಬಿದರೆ ಗ್ರಾಮದಲ್ಲಿರುವ, ದಶಕಗಳಿಂದ ಬರಿದಾಗಿದ್ದ ಕೆರೆಗೆ ಗ್ರಾಮಸ್ಥರ ಸಾಂಘಿಕ ಶ್ರಮದಿಂದಾಗಿ ಈಗ ನೀರು ಹರಿದುಬರುತ್ತಿದೆ.</p>.<p>ಹತ್ತಿರದ ಬೆಳವಾಡಿ ಕೆರೆಯು ತುಂಬಿ ಕೋಡಿಯಾಗಿ ಹರಿಯುತ್ತಿದ್ದ ನೀರು, ಮಾಚೇನಹಳ್ಳಿ-ಎಸ್.ಬಿದರೆ ಬಳಿ ಹರಿದು, ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಸೇರುತ್ತಿತ್ತು. ಆ ನೀರು ಈಗ ಎಸ್.ಬಿದರೆ ಕೆರೆ ಸೇರುತ್ತಿದೆ.</p>.<p>ಸುಮಾರು 65 ಎಕರೆ ವಿಸ್ತೀರ್ಣದ ಎಸ್.ಬಿದರೆ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದೆ. ಕೆರೆಗೆ ಮಳೆ ನೀರೇ ಮೂಲವಾಗಿತ್ತು. ಕೆರೆ ತುಂಬುವಷ್ಟು ಮಳೆ ಇರಲಿಲ್ಲ. ಸಮಸ್ಯೆಗೆ ಪರಿಹಾರವಾಗಿ, ಇನ್ನೊಂದು ಕೆರೆ ಕೋಡಿಯಾಗಿ ಹರಿದುಹೋಗುತ್ತಿದ್ದ ನೀರನ್ನೇ ಕೆರೆ ತುಂಬಿಸಲು ಗ್ರಾಮಸ್ಥರು ಒತ್ತು ನೀಡಿದರು.</p>.<p>ಎತ್ತಿನಹೊಳೆ ಯೋಜನೆ ಮೂಲಕ ಹಳೇಬೀಡು ಕೆರೆಗೆ 2 ವರ್ಷದ ಹಿಂದೆ ನೀರು ಬಂದಿತ್ತು. ಹಳೇಬೀಡಿನಿಂದ ಬೆಳವಾಡಿ ಕೆರೆಗೆ ಹರಿದನೀರು, ಬಳಿಕ ವಾಣಿವಿಲಾಸ ಸಾಗರ ಸೇರುತ್ತಿತ್ತು. ವಾಣಿವಿಲಾಸ ಸಾಗರ ತುಂಬಿದ್ದರಿಂದ ಎಸ್.ಬಿದರೆ ಗ್ರಾಮಸ್ಥರು, ನೀರನ್ನು ಕೆರೆಗೆ ಅಭಿಮುಖವಾಗಿ ಹರಿಸಿ ಸಮಸ್ಯೆ ನೀಗಿಸಲು ಮುಂದಾದರು.</p>.<p>ಮಾಚೇನಹಳ್ಳಿಯಿಂದ ಎಸ್.ಬಿದರೆ ಕೆರೆಗೆ 2 ಕಿ.ಮೀ ಅಂತರವಿದ್ದು, ಪೈಪ್, ಟಿ.ಸಿ. ಅಳವಡಿಸಿ, ಪಂಪ್ಸೆಟ್ ನೆರವಿನಿಂದ ನೀರು ಹರಿಸಲು ನಿರ್ಧರಿಸಿದರು. ವಿದ್ಯುದೀಕರಣವನ್ನು ಗ್ರಾಮದಲ್ಲಿ ರೀವೈಂಡಿಂಗ್ ಕೆಲಸ ಮಾಡುವ ಯುವಕರು, ಪೈಪ್ಲೈನ್ ಅಳವಡಿಸಲು ಪ್ಲಂಬರ್ಗಳು ಸಿದ್ಧರಾದರು. ಕೂಲಿ ಕಾರ್ಮಿಕರು, ಸರ್ಕಾರಿ ನೌಕರರು, ಸುತ್ತಮುತ್ತಲ ಗ್ರಾಮಸ್ಥರೂ ಹಣ ಸಹಾಯ ಮಾಡಿದರು.</p>.<p>ಕಳಸಾಪುರ ಎಂಯುಎಸ್ಎಸ್ನಿಂದ ಬಂದ ವಿದ್ಯುತ್ ಲೈನ್ ಮಾಚೇನಹಳ್ಳಿ ಬಳಿ ಇತ್ತು. ಅಲ್ಲಿಯೇ ಟಿ.ಸಿ ಅಳವಡಿಸಲು ಮುಂದಾದರು. ಅದಕ್ಕಾಗಿ ₹2.50 ಲಕ್ಷ ಹಾಗೂ ಪಂಪ್ಸೆಟ್ಗೆ ₹2.10 ಲಕ್ಷ ವೆಚ್ಚವಾಯಿತು. ನೀರೆತ್ತಲು 25 ಅಶ್ವಶಕ್ತಿಯ ಪಂಪ್ಸೆಟ್ ಸಿದ್ಧವಾದವು.</p>.<p>‘ನಮ್ಮ ಕೆರೆಗೆ ನೀರು ತುಂಬಿಸುವ ಯೋಜನೆಗೆ ಎಲ್ಲರ ನೆರವೂ ಇದೆ. ಟಿ.ಸಿ ಅಳವಡಿಸಲು ಶಾಸಕ ಎಚ್.ಡಿ.ತಮ್ಮಯ್ಯ ಅವರ ಸಹಕಾರವೂ ಇದೆ. ಈ ಯೋಜನೆಗೆ ಇದುವರೆಗೆ ಸುಮಾರು ₹25 ಲಕ್ಷ ವೆಚ್ಚವಾಗಿದೆ’ ಎಂದು ಗ್ರಾಮದ ಹಿರಿಯ ಶಂಕರ ಲಿಂಗೇಗೌಡ ತಿಳಿಸಿದರು.</p>.<p>ಇದೇ ರೀತಿ ಸಮೀಪದ ಸಿಂದಿಗೆರೆ, ನಾಗರಾಳು ಗ್ರಾಮಸ್ಥರು ಕೆರೆ ತುಂಬಿಸಲು ಮುಂದಾಗಿದ್ದಾರೆ.</p>.<div><blockquote>ಎಸ್.ಬಿದರೆ ಗ್ರಾಮಸ್ಥರು ಕೆರೆಗೆ ನೀರು ತುಂಬಿಸಲು ಮೆಸ್ಕಾಂನಿಂದ ಸಹಕಾರ ಕೊಡಿಸಿದ್ದೇನೆ. ಶಾಶ್ವತ ನೀರಾವರಿಗೆ ಭದ್ರಾ ಉಪ ಕಣಿವೆ ಯೋಜನೆ ಮತ್ತು ರಣಘಟ್ಟ ಯೋಜನೆಗಳು ಜಾರಿ ಆಗಲಿವೆ</blockquote><span class="attribution">ಎಚ್.ಡಿ.ತಮ್ಮಯ್ಯ ಶಾಸಕ ಚಿಕ್ಕಮಗಳೂರು</span></div>.<div><blockquote>ಸದ್ಯಕ್ಕೆ ಕೆರೆಯನ್ನು ಶೇ 40ರಷ್ಟು ತುಂಬಿಸಲು ನಿರ್ಧರಿಸಿದ್ದೇವೆ. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ಗಳ ಸಲಹೆ ಪಡೆದು ಪೂರ್ಣ ತುಂಬಿಸಲಾಗುವುದು</blockquote><span class="attribution">ಶಂಕರ ಲಿಂಗೇಗೌಡ ಗ್ರಾಮದ ಹಿರಿಯ ಎಸ್.ಬಿದರೆ</span></div>.<p>Quote - </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>