<p><strong>ಚಿಕ್ಕಮಗಳೂರು:</strong> ಜಿಲ್ಲೆಯ ಕೆಲವೆಡೆ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ತಲುಪಿದರೆ, ಹಲವೆಡೆ ವಾಲಿವೆ. ತಂತಿಗಳು ಜೋತು ಬಿದ್ದಿವೆ. ಕೆಲ ತೋಟಗಳಲ್ಲಿ ಗಿಡಮರಗಳ ಕೊಂಬೆ, ಗರಿಗಳು ತಾಗುತ್ತವೆ, ಅಪಾಯಕ್ಕೆ ಕಾದಿವೆ.</p>.<p>ಕೆಲವೆಡೆ ಕೆರೆ, ಕಟ್ಟೆಗಳ ಅಂಗಳದಲ್ಲೇ ವಿದ್ಯುತ್ ತಂತಿಗಳು ಹಾದುಹೋಗಿವೆ. ಮಲೆನಾಡು ಭಾಗದಲ್ಲಿ ಸಮಸ್ಯೆಗಳು ಹೆಚ್ಚು ಇವೆ. ವೋಲ್ಟೆಜ್ ಸಮಸ್ಯೆ ಕಾಡುತ್ತಿದೆ.</p>.<p class="Briefhead"><strong>ವೋಲ್ಟೆಜ್, ವಿದ್ಯುತ್ ಪರಿವರ್ತಕ ಸಮಸ್ಯೆ</strong></p>.<p>ನರಸಿಂಹರಾಜಪುರ: ತಾಲ್ಲೂಕಿನ ಹಳ್ಳಿಬೈಲು, ಸೀತೂರು ಆಸುಪಾಸಿನ ಗ್ರಾಮಗಳಿಗೆ ಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಿಂದ ಸಿದ್ದರಮಠದ ಮೂಲಕ ಅರಣ್ಯ ಭಾಗದಲ್ಲಿ ವಿದ್ಯುತ್ ಮಾರ್ಗ ಹಾದುಹೋಗಿದೆ. ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಇರುತ್ತದೆ.</p>.<p>ಕಟ್ಟಿನಮನೆ ಗ್ರಾಮಕ್ಕೆ ಕೊಡಿಹಿತ್ಲು ಎಸ್ಟೇಟ್ ಮೂಲಕ ವಿದ್ಯುತ್ ಮಾರ್ಗ ಹಾದು ಹೋಗಿದೆ. ಕಾನೂರು, ಕೆರೆಮನೆ ಗ್ರಾಮದ ವ್ಯಾಪ್ತಿಯಲ್ಲಿ ವೋಲ್ಟೆಜ್ ಸಮಸ್ಯೆಯ ದೂರುಗಳಿವೆ.</p>.<p>‘ಕುದುರೆಗುಂಡಿಯಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ಆರಂಭಿಸಿದರೆ ಸೀತೂರು, ಕಾನೂರು ಗ್ರಾಮದವರಿಗೆ ಅನುಕೂಲವಾಗುತ್ತದೆ. ಪರಿವರ್ತಕ ಹಾಳಾದರೆ ತ್ವರಿತವಾಗಿ ದುರಸ್ತಿಪಡಿಸಲ್ಲ’ ಎನ್ನುತ್ತಾರೆ ಹಳ್ಳಿಬೈಲಿನ ಪಿ.ಕೆ.ಬಸವರಾಜ್.</p>.<p class="Briefhead"><strong>ಹಳೆ ತಂತಿ ಬದಲಾವಣೆ ಕಾರ್ಯ ಆಮೆಗತಿ</strong></p>.<p>ಕೊಪ್ಪ: ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ತೋಟದ ಮಧ್ಯೆ ವಿದ್ಯುತ್ ತಂತಿ ಹಾದು ಹೋಗಿವೆ. ಹಳೆಯ ತಂತಿ ಬದಲಾವಣೆ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ.</p>.<p>ತುಳುವಿನಕೊಪ್ಪದ ನೆಕ್ಕರಿಕೆ, ಮಾಚಿಕೊಪ್ಪದಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆಗಳಿದ್ದು ವಿದ್ಯುತ್ ಪರಿವರ್ತಕದ ಬೇಡಿಕೆ ಇದೆ.</p>.<p>ತಾಲ್ಲೂಕಿನಲ್ಲಿ 15ಕ್ಕೂ ಹೆಚ್ಚು ಕಡೆಗಳಿಗೆ ವಿದ್ಯುತ್ ಪರಿವರ್ತಕದ ಬೇಡಿಕೆ ಇದೆ. ಹರಿಹರಪುರ, ಕುದುರೆಗುಂಡಿ ಭಾಗದಲ್ಲಿ ‘ಪವರ್ ಸ್ಟೇಷನ್’ ಸ್ಥಾಪಿಸಬೇಕು ಎಂಬುದು ಸಾರ್ವಜನಿಕರ ಮೊರೆ.</p>.<p>ಗುಣವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿ ಮೇಲೆ ಬಿದ್ದ ಕೊಂಬೆಯನ್ನು ತೆರವು ಮಾಡಿಲ್ಲ. ಸ್ಥಿರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.</p>.<p>ಚಂಡೆಗುಡ್ಡೆ ಬಳಿಯ ರಸ್ತೆ ತಿರುವಿನಲ್ಲಿ ವಿದ್ಯುತ್ ಪರಿವರ್ತಕವಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ನಾರ್ವೆ ಹ್ಯಾಂಡ್ ಪೋಸ್ಟ್(ಎನ್ಎಚ್ಪಿ)ನಿಂದ ಚಂಡೆಗುಡ್ಡೆ ಮುಖ್ಯ ಲೈನ್ಗೆ ಸಂಪರ್ಕ ಕಲ್ಪಿಸಿಲ್ಲ. ಎ.ಜಿ.ಕಟ್ಟೆಯಿಂದ ಎನ್ಎಚ್ಪಿವರೆಗೆ ಸಂಪರ್ಕ ಲೈನ್ ಅನ್ನು ಹೆದ್ದಾರಿ ಪಕ್ಕ ಅಳವಡಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.</p>.<p class="Briefhead"><strong>15 ಮನೆಗೆ ವಿದ್ಯುತ್ ಸಂಪರ್ಕ ಇಲ್ಲ</strong></p>.<p>ಶೃಂಗೇರಿ: ತಾಲ್ಲೂಕಿನ ಬೇಗಾರ್, ಕೆರೆಕಟ್ಟೆ, ಕೂತುಗೋಡು, ಬುಕ್ಕಡಿಬೈಲ್, ಹೊಳೆಗದ್ದೆ, ಕುಂಬ್ರಗೊಡು, ಕೆರೆಮನೆ, ನೆಮ್ಮಾರ್, ಹೊಳೇಕೊಪ್ಪ, ಮೆಣಸೆ, ಹಾದಿ ಕಿರೂರು , ನಲ್ಲೂರು, ಕಲಿಗೆ, ಗುಂಡ್ರೆಯಲ್ಲಿ ವಿದ್ಯುತ್ ಪರಿವರ್ತಕಗಳು ಇಲ್ಲ. ವೋಲ್ಟೇಜ್ ಸಮಸ್ಯೆ ಇದೆ.</p>.<p>ಬೇಗಾರ್ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 15 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಪಂಚಾಯಿತಿ ಎನ್ನುತ್ತಾರೆ ಅಧ್ಯಕ್ಷ ಲಕ್ಷ್ಮೀಶ.</p>.<p>ಕೆಳಕೊಪ್ಪ, ತನಿಕೊಡು, ಹಾಲಂದೂರು ಕಿಕ್ರೆ, ಬೆಟ್ಟಗೆರೆ ಭಾಗದಲ್ಲಿ ಲೈನ್ಗಳು ತೋಟದ ನಡುವೆ ಹಾದುಹೋಗಿವೆ. ಕೆಲವೆಡೆ ಕಂಬಗಳು ಬಾಗಿವೆ.</p>.<p class="Briefhead"><strong>ಶಿಥಿಲ ಕಂಬ ಬದಲಿಸಲು ಮೊರೆ</strong></p>.<p>ಅಜ್ಜಂಪುರ: ತಾಲ್ಲೂಕಿನ ಹೆಬ್ಬೂರು-ನಾರಣಾಪುರ, ಗಡೀಹಳ್ಳಿ - ಅಣ್ಣಾಪುರ-ನಂದೀಪುರ, ಬುಕ್ಕಾಂಬುಧಿ- ಶಿವನಿ, ಚೀರನಹಳ್ಳಿ ರಸ್ತೆಯ ಬದಿಯ ಹಲವು ವಿದ್ಯುತ್ ಕಂಬಗಳು ವಾಲಿವೆ.</p>.<p>ಶಿವನಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗ, ಸೊಲ್ಲಾಪುರ ಗ್ರಾಮದ ಕಾಲೊನಿ, ನಂದೀಪುರ ಗ್ರಾಮದೊಳಗೆ ಅಳವಡಿಸಿರುವ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ತಲುಪಿವೆ. ನಂದೀಪುರ, ಬಾಳಯ್ಯನ ಹೊಸೂರು ಗ್ರಾಮದ ಕೆರೆಯೊಳಗಿನ ವಿದ್ಯುತ್ ಕಂಬಗಳು ಬಾಗಿವೆ.</p>.<p><span class="Designate">(<strong>ತಂಡ</strong>: ಬಿ.ಜೆ. ಧನ್ಯಪ್ರಸಾದ್, ಜೆ.ಒ.ಉಮೇಶ್ಕುಮಾರ್, ಹಾ.ಮ.ರಾಜಶೇಖರಯ್ಯ, ಕೆ.ಎನ್.ರಾಘವೇಂದ್ರ, ಕೆ.ವಿ.ನಾಗರಾಜ್,<br />ಸತೀಶ್ ಜೈನ್, ರವಿಕುಮಾರ್ ಶೆಟ್ಟಿಹಡ್ಲು, ರವಿಕೆಳಂಗಡಿ)</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಜಿಲ್ಲೆಯ ಕೆಲವೆಡೆ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ತಲುಪಿದರೆ, ಹಲವೆಡೆ ವಾಲಿವೆ. ತಂತಿಗಳು ಜೋತು ಬಿದ್ದಿವೆ. ಕೆಲ ತೋಟಗಳಲ್ಲಿ ಗಿಡಮರಗಳ ಕೊಂಬೆ, ಗರಿಗಳು ತಾಗುತ್ತವೆ, ಅಪಾಯಕ್ಕೆ ಕಾದಿವೆ.</p>.<p>ಕೆಲವೆಡೆ ಕೆರೆ, ಕಟ್ಟೆಗಳ ಅಂಗಳದಲ್ಲೇ ವಿದ್ಯುತ್ ತಂತಿಗಳು ಹಾದುಹೋಗಿವೆ. ಮಲೆನಾಡು ಭಾಗದಲ್ಲಿ ಸಮಸ್ಯೆಗಳು ಹೆಚ್ಚು ಇವೆ. ವೋಲ್ಟೆಜ್ ಸಮಸ್ಯೆ ಕಾಡುತ್ತಿದೆ.</p>.<p class="Briefhead"><strong>ವೋಲ್ಟೆಜ್, ವಿದ್ಯುತ್ ಪರಿವರ್ತಕ ಸಮಸ್ಯೆ</strong></p>.<p>ನರಸಿಂಹರಾಜಪುರ: ತಾಲ್ಲೂಕಿನ ಹಳ್ಳಿಬೈಲು, ಸೀತೂರು ಆಸುಪಾಸಿನ ಗ್ರಾಮಗಳಿಗೆ ಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಿಂದ ಸಿದ್ದರಮಠದ ಮೂಲಕ ಅರಣ್ಯ ಭಾಗದಲ್ಲಿ ವಿದ್ಯುತ್ ಮಾರ್ಗ ಹಾದುಹೋಗಿದೆ. ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಇರುತ್ತದೆ.</p>.<p>ಕಟ್ಟಿನಮನೆ ಗ್ರಾಮಕ್ಕೆ ಕೊಡಿಹಿತ್ಲು ಎಸ್ಟೇಟ್ ಮೂಲಕ ವಿದ್ಯುತ್ ಮಾರ್ಗ ಹಾದು ಹೋಗಿದೆ. ಕಾನೂರು, ಕೆರೆಮನೆ ಗ್ರಾಮದ ವ್ಯಾಪ್ತಿಯಲ್ಲಿ ವೋಲ್ಟೆಜ್ ಸಮಸ್ಯೆಯ ದೂರುಗಳಿವೆ.</p>.<p>‘ಕುದುರೆಗುಂಡಿಯಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ಆರಂಭಿಸಿದರೆ ಸೀತೂರು, ಕಾನೂರು ಗ್ರಾಮದವರಿಗೆ ಅನುಕೂಲವಾಗುತ್ತದೆ. ಪರಿವರ್ತಕ ಹಾಳಾದರೆ ತ್ವರಿತವಾಗಿ ದುರಸ್ತಿಪಡಿಸಲ್ಲ’ ಎನ್ನುತ್ತಾರೆ ಹಳ್ಳಿಬೈಲಿನ ಪಿ.ಕೆ.ಬಸವರಾಜ್.</p>.<p class="Briefhead"><strong>ಹಳೆ ತಂತಿ ಬದಲಾವಣೆ ಕಾರ್ಯ ಆಮೆಗತಿ</strong></p>.<p>ಕೊಪ್ಪ: ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ತೋಟದ ಮಧ್ಯೆ ವಿದ್ಯುತ್ ತಂತಿ ಹಾದು ಹೋಗಿವೆ. ಹಳೆಯ ತಂತಿ ಬದಲಾವಣೆ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ.</p>.<p>ತುಳುವಿನಕೊಪ್ಪದ ನೆಕ್ಕರಿಕೆ, ಮಾಚಿಕೊಪ್ಪದಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆಗಳಿದ್ದು ವಿದ್ಯುತ್ ಪರಿವರ್ತಕದ ಬೇಡಿಕೆ ಇದೆ.</p>.<p>ತಾಲ್ಲೂಕಿನಲ್ಲಿ 15ಕ್ಕೂ ಹೆಚ್ಚು ಕಡೆಗಳಿಗೆ ವಿದ್ಯುತ್ ಪರಿವರ್ತಕದ ಬೇಡಿಕೆ ಇದೆ. ಹರಿಹರಪುರ, ಕುದುರೆಗುಂಡಿ ಭಾಗದಲ್ಲಿ ‘ಪವರ್ ಸ್ಟೇಷನ್’ ಸ್ಥಾಪಿಸಬೇಕು ಎಂಬುದು ಸಾರ್ವಜನಿಕರ ಮೊರೆ.</p>.<p>ಗುಣವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿ ಮೇಲೆ ಬಿದ್ದ ಕೊಂಬೆಯನ್ನು ತೆರವು ಮಾಡಿಲ್ಲ. ಸ್ಥಿರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.</p>.<p>ಚಂಡೆಗುಡ್ಡೆ ಬಳಿಯ ರಸ್ತೆ ತಿರುವಿನಲ್ಲಿ ವಿದ್ಯುತ್ ಪರಿವರ್ತಕವಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ನಾರ್ವೆ ಹ್ಯಾಂಡ್ ಪೋಸ್ಟ್(ಎನ್ಎಚ್ಪಿ)ನಿಂದ ಚಂಡೆಗುಡ್ಡೆ ಮುಖ್ಯ ಲೈನ್ಗೆ ಸಂಪರ್ಕ ಕಲ್ಪಿಸಿಲ್ಲ. ಎ.ಜಿ.ಕಟ್ಟೆಯಿಂದ ಎನ್ಎಚ್ಪಿವರೆಗೆ ಸಂಪರ್ಕ ಲೈನ್ ಅನ್ನು ಹೆದ್ದಾರಿ ಪಕ್ಕ ಅಳವಡಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.</p>.<p class="Briefhead"><strong>15 ಮನೆಗೆ ವಿದ್ಯುತ್ ಸಂಪರ್ಕ ಇಲ್ಲ</strong></p>.<p>ಶೃಂಗೇರಿ: ತಾಲ್ಲೂಕಿನ ಬೇಗಾರ್, ಕೆರೆಕಟ್ಟೆ, ಕೂತುಗೋಡು, ಬುಕ್ಕಡಿಬೈಲ್, ಹೊಳೆಗದ್ದೆ, ಕುಂಬ್ರಗೊಡು, ಕೆರೆಮನೆ, ನೆಮ್ಮಾರ್, ಹೊಳೇಕೊಪ್ಪ, ಮೆಣಸೆ, ಹಾದಿ ಕಿರೂರು , ನಲ್ಲೂರು, ಕಲಿಗೆ, ಗುಂಡ್ರೆಯಲ್ಲಿ ವಿದ್ಯುತ್ ಪರಿವರ್ತಕಗಳು ಇಲ್ಲ. ವೋಲ್ಟೇಜ್ ಸಮಸ್ಯೆ ಇದೆ.</p>.<p>ಬೇಗಾರ್ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 15 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಪಂಚಾಯಿತಿ ಎನ್ನುತ್ತಾರೆ ಅಧ್ಯಕ್ಷ ಲಕ್ಷ್ಮೀಶ.</p>.<p>ಕೆಳಕೊಪ್ಪ, ತನಿಕೊಡು, ಹಾಲಂದೂರು ಕಿಕ್ರೆ, ಬೆಟ್ಟಗೆರೆ ಭಾಗದಲ್ಲಿ ಲೈನ್ಗಳು ತೋಟದ ನಡುವೆ ಹಾದುಹೋಗಿವೆ. ಕೆಲವೆಡೆ ಕಂಬಗಳು ಬಾಗಿವೆ.</p>.<p class="Briefhead"><strong>ಶಿಥಿಲ ಕಂಬ ಬದಲಿಸಲು ಮೊರೆ</strong></p>.<p>ಅಜ್ಜಂಪುರ: ತಾಲ್ಲೂಕಿನ ಹೆಬ್ಬೂರು-ನಾರಣಾಪುರ, ಗಡೀಹಳ್ಳಿ - ಅಣ್ಣಾಪುರ-ನಂದೀಪುರ, ಬುಕ್ಕಾಂಬುಧಿ- ಶಿವನಿ, ಚೀರನಹಳ್ಳಿ ರಸ್ತೆಯ ಬದಿಯ ಹಲವು ವಿದ್ಯುತ್ ಕಂಬಗಳು ವಾಲಿವೆ.</p>.<p>ಶಿವನಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗ, ಸೊಲ್ಲಾಪುರ ಗ್ರಾಮದ ಕಾಲೊನಿ, ನಂದೀಪುರ ಗ್ರಾಮದೊಳಗೆ ಅಳವಡಿಸಿರುವ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಗೆ ತಲುಪಿವೆ. ನಂದೀಪುರ, ಬಾಳಯ್ಯನ ಹೊಸೂರು ಗ್ರಾಮದ ಕೆರೆಯೊಳಗಿನ ವಿದ್ಯುತ್ ಕಂಬಗಳು ಬಾಗಿವೆ.</p>.<p><span class="Designate">(<strong>ತಂಡ</strong>: ಬಿ.ಜೆ. ಧನ್ಯಪ್ರಸಾದ್, ಜೆ.ಒ.ಉಮೇಶ್ಕುಮಾರ್, ಹಾ.ಮ.ರಾಜಶೇಖರಯ್ಯ, ಕೆ.ಎನ್.ರಾಘವೇಂದ್ರ, ಕೆ.ವಿ.ನಾಗರಾಜ್,<br />ಸತೀಶ್ ಜೈನ್, ರವಿಕುಮಾರ್ ಶೆಟ್ಟಿಹಡ್ಲು, ರವಿಕೆಳಂಗಡಿ)</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>