ಜಂಟಿ ಸರ್ವೆ ಬಳಿಕ ಪರಿಹಾರಕ್ಕೆ ಮನವಿ
ಮಳೆ ಈ ಬಾರಿ ಹೆಚ್ಚಿನ ಸಂಖ್ಯೆಯ ದಿನಗಳಲ್ಲಿ ಅಧಿಕ ಪ್ರಮಾಣದಲ್ಲಿ ಬಂದಿದ್ದು, ನೂರು ದಿನಗಳ ಕಾಲ ನಿರಂತರವಾಗಿ ಸುರಿದಿದೆ. ಎಲ್ಲಾ ಭಾಗಗಳಲ್ಲೂ ಶೀತ ವಾತಾವರಣ ಅಧಿಕವಾಗಿದ್ದು, ತೇವಾಂಶದ ಅನುಪಾತದ ಪ್ರಮಾಣ ಹೆಚ್ಚಾಗಿದೆ. ಕಾಫಿ ಮಂಡಳಿಯಿಂದ ಪೂರ್ವಭಾವಿಯಾಗಿ ನಷ್ಟ ಪ್ರಮಾಣದ ಸರ್ವೆಯನ್ನು ಮಾಡಲಾಗಿದ್ದು, ಸಪ್ಟೆಂಬರ್ ತಿಂಗಳು ಆಗಿರುವುದರಿಂದ ಪ್ರಸ್ತುತ ಅಂತಿಮ ಸರ್ವೆಯನ್ನು ಕಂದಾಯ ಮತ್ತು ಕಾಫಿ ಮಂಡಳಿ ಜಂಟಿಯಾಗಿ ವರದಿ ಸಿದ್ಧಪಡಿಸಿ ನಷ್ಟ ಪರಿಹಾರಕ್ಕಾಗಿ ರಾಷ್ಟ್ರೀಯ ವಿಪತ್ತು ಯೋಜನೆಯ ಅನುದಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕೇಂದ್ರ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ ಹೇಳಿದರು.