ಚಂದ್ರೇಗೌಡ ಅವರ ಒಂದೂವರೆ ಎಕರೆ ಭತ್ತದ ಗದ್ದೆಯ ಮೇಲೆ ಪ್ರವಾಹದ ನೀರು ಹರಿದು, ಅದರಲ್ಲಿ ಸಂಪೂರ್ಣ ಹೂಳು ತುಂಬಿತ್ತು. ಅಲ್ಲದೆ, ಕಾಫಿತೋಟಕ್ಕೂ ಮಳೆಯಿಂದ ಹಾನಿಯಾಗಿತ್ತು. ಅನಾರೋಗ್ಯದಿಂದಲೂ ಬಳಲುತ್ತಿದ್ದ ಚಂದ್ರೇಗೌಡ ಹಲವೆಡೆ ಸಾಲವನ್ನೂ ಮಾಡಿಕೊಂಡಿದ್ದರು. ಕೃಷಿ ಭೂಮಿಗೆ ಆಗಿದ್ದ ಹಾನಿಯನ್ನು ಕಂಡು, ಸೂಕ್ತ ಪರಿಹಾರವೂ ಸಿಗದೆ ವಿಪರೀತವಾಗಿ ನೊಂದುಕೊಂಡಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.