ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು | ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ರಾತ್ರಿಯಿಂದಲೇ ಸಾಲುಗಟ್ಟಿ ನಿಂತ ರೈತರು

Published 5 ಮಾರ್ಚ್ 2024, 4:49 IST
Last Updated 5 ಮಾರ್ಚ್ 2024, 4:49 IST
ಅಕ್ಷರ ಗಾತ್ರ

ಬೀರೂರು (ಚಿಕ್ಕಮಗಳೂರು): ಇಲ್ಲಿಯ ಎಪಿಎಂಸಿ ಆವರಣದಲ್ಲಿ ಆರಂಭಿಸಿರುವ ಕೊಬ್ಬರಿ ಖರೀದಿ ಕೇಂದ್ರದಲ್ಲಿ ರಾತ್ರಿಯಿಂದಲೇ ರೈತರು ಸರದಿಯಲ್ಲಿ, ನೋಂದಣಿಗಾಗಿ ಕಾಯುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ನೋಂದಣಿ ಕೇಂದ್ರ ತೆರೆಯಲಾಗಿದೆ. ಕಡೂರು ಎಪಿಎಂಸಿ ಆವರಣದಲ್ಲಿ ಎರಡು, ಬೀರೂರಿನಲ್ಲಿ ಒಂದು ಮತ್ತು ಪಂಚನಹಳ್ಳಿಯಲ್ಲಿ ಒಂದು ನೋಂದಣಿ ಕೇಂದ್ರ ಆರಂಭವಾಗಿವೆ.

ಒಂದು ಕೇಂದ್ರದಲ್ಲಿ ಒಂದು ಕಂಪ್ಯೂಟರ್‌ ಮತ್ತು ಒಂದು ಬೆರಳಚ್ಚು ಯಂತ್ರ ಅಳವಡಿಸಲಾಗಿದೆ. ಒಬ್ಬರೇ ಸಿಬ್ಬಂದಿ ಎಲ್ಲಾ ರೈತರ ನೋಂದಣಿ ಮಾಡಬೇಕಿರುವುದು ಸಮಸ್ಯೆಗೆ ಕಾರಣ ಎಂದು ರೈತರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT