<p><strong>ಚಿಕ್ಕಮಗಳೂರು: </strong>ಕಾಫಿನಾಡಿನಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇಲ್ಲದಿರುವುದು, ಶೈತ್ಯಾಗಾರದ ಕೊರತೆ, ಮಧ್ಯವರ್ತಿಗಳ ಹಾವಳಿಯಿಂದಾಗಿ ಮೀನುಗಾರರು ಬವಣೆ ಅನುಭವಿಸುವಂತಾಗಿದೆ. ಮೀನುಗಾರಿಕೆಗೆ ಉತ್ತೇಜನದ ‘ಟಾನಿಕ್’ ಬೇಕಿದೆ.</p>.<p>ಜಿಲ್ಲೆಯಲ್ಲಿ ಸುಮಾರು ಒಂಬತ್ತು ಸಾವಿರ ಮಂದಿ ಜೀವನೋಪಾಯಕ್ಕೆ ಮೀನುಗಾರಿಕೆ ಅವಲಂಬಿಸಿದ್ದಾರೆ. ಜಲಾಶಯ, ಕೆರೆಕಟ್ಟೆ, ಹೊಳೆ, ಚೆಕ್ ಡ್ಯಾಂ, ಕೃಷಿ ಹೊಂಡ ಮೊದಲಾದ ಜಲಮೂಲ ಗಳಲ್ಲಿ ಮೀನು ಕೃಷಿಯಲ್ಲಿ ತೊಡಗಿದ್ದಾರೆ.</p>.<p>ಮೀನು ಸಾಕಾಣಿಕೆಗೆ ಕೆರೆಗಳ ಹರಾಜು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ದ್ವೇಷ<br />ರಾಜಕೀಯ ಮಾಡುತ್ತಾರೆ. ಹೆಚ್ಚು ಬೇಡಿಕೆ ಇರುವ ‘ಕಟ್ಲಾ’ ತಳಿ ಮರಿಗಳನ್ನು ಸಾಕಷ್ಟು ಒದಗಿಸುತ್ತಿಲ್ಲ. ದಲ್ಲಾಳಿಗಳು ಮೀನುಗಾರರಿಂದ ಕಡಿಮೆ ದರಕ್ಕೆ ಮೀನುಗಳನ್ನು ಖರೀದಿಸಿ ಹೊರ ರಾಜ್ಯಗಳಿಗೆ ಸಾಗಿಸಿ ಲಾಭ ಮಾಡಿಕೊಳ್ಳುತ್ತಾರೆ. ಇಲ್ಲಿ ವ್ಯವಸ್ಥಿತ ಮಾರುಕಟ್ಟೆ ಇಲ್ಲ. ಲಾಕ್ಡೌನ್, ಕೋವಿಡ್<br />ಬಿಕ್ಕಟ್ಟಿನಲ್ಲೂ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಮೀನು ಕೃಷಿಕರು ಸಂಕಷ್ಟ ತೋಡಿಕೊಳ್ಳುತ್ತಾರೆ.</p>.<p>‘ಗೌರಿ’, ‘ಕಟ್ಲಾ’, ‘ರೋಹು’, ‘ಮೃಗಾಲ’, ‘ಗೆಂಡೆ’, ‘ಹುಲ್ಲು ಗೆಂಡೆ’, ‘ಬೆಳ್ಳಿ ಗೆಂಡೆ’ ಮೊದಲಾದ ತಳಿ ಮೀನುಗಳನ್ನು ಸಾಕುತ್ತಾರೆ. ಕಾಫಿನಾಡಿನ ಜಲಾಶಯ (ಭದ್ರಾ ಹಿನ್ನೀರು, ಜಂಬದಹಳ್ಳ), ಹೊಳೆ ಮೀನುಗಳಿಗೆ ಬೇಡಿಕೆ ಹೆಚ್ಚು ಇದೆ.</p>.<p>ಚಿಕ್ಕಮಗಳೂರು, ತರೀಕೆರೆ, ಕಡೂರು ತಾಲ್ಲೂಕುಗಳಲ್ಲಿ 7 ಮೀನುಗಾರಿಕೆ ಸಹಕಾರ ಸಂಘಗಳು ಇವೆ. ಈ ಸಂಘಗಳಲ್ಲಿ 4,265 ಸದಸ್ಯರು ಇದ್ದಾರೆ. ಎನ್.ಆರ್.ಪುರ, ಮೂಡಿಗೆರೆ, ಶೃಂಗೇರಿ, ಕೊಪ್ಪಗದಲ್ಲಿ ಮೀನುಗಾರಿಕೆ ಚಟುವಟಿಕೆಗಳು ಇವೆ. ಸಂಘಗಳು ಇಲ್ಲ. 7 ತಾಲ್ಲೂಕು ಮಟ್ಟದ ಮೀನುಮರಿ ಪಾಲನಾ ಕೇಂದ್ರಗಳು ಇವೆ. ಈ ಕೇಂದ್ರಗಳಲ್ಲಿ 27 ಲಕ್ಷ ಮೀನು ಮರಿಗಳನ್ನು ಪಾಲನೆ<br />ಮಾಡಿ ಮೀನು ಕೃಷಿಕರಿಗೆ ವಿತರಿಸಲಾಗಿದೆ. ಕೆರೆ, ಜಲಾಶಯ, ಹೊಂಡಗಳಲ್ಲಿ ಬಿಟ್ಟು ಪಾಲನೆ ಮಾಡಲಾಗುತ್ತಿದೆ. ಈ ವರ್ಷ ಜಿಲ್ಲೆಯಲ್ಲಿ ಉತ್ತಮ ವಾಗಿ ಮಳೆಯಾಗಿದೆ. ಬಹುತೇಕ ಜಲಮೂಲಗಳಲ್ಲಿ ನೀರು ಇದೆ. ಮೀನು ಕೃಷಿ ಚಟುವಟಿಕೆ ಚುರುಕುಗೊಂಡಿವೆ.</p>.<p>ಕೆರೆಕಟ್ಟೆ, ಹೊಂಡಗಳಲ್ಲಿ ಹೂಳು ತೆಗೆಸಿ ಮೀನು ಸಾಕಾಣಿಕೆಗೆ ಪೂರಕ<br />ವಾಗಿಸಬೇಕು. ಮೀನುಗಾರಿಕೆ ಬಗ್ಗೆ ಮೀನುಗಾರರಿಗೆ ತರಬೇತಿ ನೀಡ ಬೇಕು. ಮೀನು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಉತ್ತೇಜನ ನೀಡಬೇಕು ಎಂಬುದು ಮೀನುಗಾರರ ಕೋರಿಕೆ.</p>.<p><strong>‘ಮೀನು ಮಾರುಕಟ್ಟೆ ಪ್ರಗತಿಯಲ್ಲಿ’</strong></p>.<p>ಜಿಲ್ಲೆಯ ಎನ್.ಆರ್.ಪುರದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಹಂತದಲ್ಲಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುಚನ್ನ ಬಸವಣ್ಣ ತಿಳಿಸಿದರು.</p>.<p>‘ಮೀನುಗಾರರು ‘ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ’ಯಡಿ ನೆರವು ಪಡೆದುಕೊಳ್ಳಲು ಅವಕಾಶ ಇದೆ. ಅಲಂಕಾರಿಕ ಮೀನು ಸಾಕಾಣಿಕೆ ಘಟಕ, ಮೀನುಗಳ ಹ್ಯಾಚರಿ ಕೇಂದ್ರಗಳ ಸ್ಥಾಪನೆ, ಮೀನು ಕೃಷಿ ಕೊಳಗಳ ನಿರ್ಮಾಣ ಮೊದಲಾದವಕ್ಕೆ ನೆರವು ನೀಡಲಾಗುತ್ತದೆ’ ಎಂದು ತಿಳಿಸಿದರು.</p>.<p>‘ಮೀನುಗಾರಿಕೆ ಇಲಾಖೆಯಿಂದ ಜಿಲ್ಲೆಯ ಹಲವು ಮೀನುಗಾರರಿಗೆ ಬಲೆ, ತೆಪ್ಪ, ಹರಿಗೋಲು, ದ್ವಿಚಕ್ರ ವಾಹನಕ್ಕೆ ಸಹಾಯಧನ (₹ 10,000), ಮೀನುಗಾರಿಕೆ ಸಲಕರಣೆ ಕಿಟ್ ಮೊದಲಾದವನ್ನು ನೀಡಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಕಾಫಿನಾಡಿನಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇಲ್ಲದಿರುವುದು, ಶೈತ್ಯಾಗಾರದ ಕೊರತೆ, ಮಧ್ಯವರ್ತಿಗಳ ಹಾವಳಿಯಿಂದಾಗಿ ಮೀನುಗಾರರು ಬವಣೆ ಅನುಭವಿಸುವಂತಾಗಿದೆ. ಮೀನುಗಾರಿಕೆಗೆ ಉತ್ತೇಜನದ ‘ಟಾನಿಕ್’ ಬೇಕಿದೆ.</p>.<p>ಜಿಲ್ಲೆಯಲ್ಲಿ ಸುಮಾರು ಒಂಬತ್ತು ಸಾವಿರ ಮಂದಿ ಜೀವನೋಪಾಯಕ್ಕೆ ಮೀನುಗಾರಿಕೆ ಅವಲಂಬಿಸಿದ್ದಾರೆ. ಜಲಾಶಯ, ಕೆರೆಕಟ್ಟೆ, ಹೊಳೆ, ಚೆಕ್ ಡ್ಯಾಂ, ಕೃಷಿ ಹೊಂಡ ಮೊದಲಾದ ಜಲಮೂಲ ಗಳಲ್ಲಿ ಮೀನು ಕೃಷಿಯಲ್ಲಿ ತೊಡಗಿದ್ದಾರೆ.</p>.<p>ಮೀನು ಸಾಕಾಣಿಕೆಗೆ ಕೆರೆಗಳ ಹರಾಜು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ದ್ವೇಷ<br />ರಾಜಕೀಯ ಮಾಡುತ್ತಾರೆ. ಹೆಚ್ಚು ಬೇಡಿಕೆ ಇರುವ ‘ಕಟ್ಲಾ’ ತಳಿ ಮರಿಗಳನ್ನು ಸಾಕಷ್ಟು ಒದಗಿಸುತ್ತಿಲ್ಲ. ದಲ್ಲಾಳಿಗಳು ಮೀನುಗಾರರಿಂದ ಕಡಿಮೆ ದರಕ್ಕೆ ಮೀನುಗಳನ್ನು ಖರೀದಿಸಿ ಹೊರ ರಾಜ್ಯಗಳಿಗೆ ಸಾಗಿಸಿ ಲಾಭ ಮಾಡಿಕೊಳ್ಳುತ್ತಾರೆ. ಇಲ್ಲಿ ವ್ಯವಸ್ಥಿತ ಮಾರುಕಟ್ಟೆ ಇಲ್ಲ. ಲಾಕ್ಡೌನ್, ಕೋವಿಡ್<br />ಬಿಕ್ಕಟ್ಟಿನಲ್ಲೂ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಮೀನು ಕೃಷಿಕರು ಸಂಕಷ್ಟ ತೋಡಿಕೊಳ್ಳುತ್ತಾರೆ.</p>.<p>‘ಗೌರಿ’, ‘ಕಟ್ಲಾ’, ‘ರೋಹು’, ‘ಮೃಗಾಲ’, ‘ಗೆಂಡೆ’, ‘ಹುಲ್ಲು ಗೆಂಡೆ’, ‘ಬೆಳ್ಳಿ ಗೆಂಡೆ’ ಮೊದಲಾದ ತಳಿ ಮೀನುಗಳನ್ನು ಸಾಕುತ್ತಾರೆ. ಕಾಫಿನಾಡಿನ ಜಲಾಶಯ (ಭದ್ರಾ ಹಿನ್ನೀರು, ಜಂಬದಹಳ್ಳ), ಹೊಳೆ ಮೀನುಗಳಿಗೆ ಬೇಡಿಕೆ ಹೆಚ್ಚು ಇದೆ.</p>.<p>ಚಿಕ್ಕಮಗಳೂರು, ತರೀಕೆರೆ, ಕಡೂರು ತಾಲ್ಲೂಕುಗಳಲ್ಲಿ 7 ಮೀನುಗಾರಿಕೆ ಸಹಕಾರ ಸಂಘಗಳು ಇವೆ. ಈ ಸಂಘಗಳಲ್ಲಿ 4,265 ಸದಸ್ಯರು ಇದ್ದಾರೆ. ಎನ್.ಆರ್.ಪುರ, ಮೂಡಿಗೆರೆ, ಶೃಂಗೇರಿ, ಕೊಪ್ಪಗದಲ್ಲಿ ಮೀನುಗಾರಿಕೆ ಚಟುವಟಿಕೆಗಳು ಇವೆ. ಸಂಘಗಳು ಇಲ್ಲ. 7 ತಾಲ್ಲೂಕು ಮಟ್ಟದ ಮೀನುಮರಿ ಪಾಲನಾ ಕೇಂದ್ರಗಳು ಇವೆ. ಈ ಕೇಂದ್ರಗಳಲ್ಲಿ 27 ಲಕ್ಷ ಮೀನು ಮರಿಗಳನ್ನು ಪಾಲನೆ<br />ಮಾಡಿ ಮೀನು ಕೃಷಿಕರಿಗೆ ವಿತರಿಸಲಾಗಿದೆ. ಕೆರೆ, ಜಲಾಶಯ, ಹೊಂಡಗಳಲ್ಲಿ ಬಿಟ್ಟು ಪಾಲನೆ ಮಾಡಲಾಗುತ್ತಿದೆ. ಈ ವರ್ಷ ಜಿಲ್ಲೆಯಲ್ಲಿ ಉತ್ತಮ ವಾಗಿ ಮಳೆಯಾಗಿದೆ. ಬಹುತೇಕ ಜಲಮೂಲಗಳಲ್ಲಿ ನೀರು ಇದೆ. ಮೀನು ಕೃಷಿ ಚಟುವಟಿಕೆ ಚುರುಕುಗೊಂಡಿವೆ.</p>.<p>ಕೆರೆಕಟ್ಟೆ, ಹೊಂಡಗಳಲ್ಲಿ ಹೂಳು ತೆಗೆಸಿ ಮೀನು ಸಾಕಾಣಿಕೆಗೆ ಪೂರಕ<br />ವಾಗಿಸಬೇಕು. ಮೀನುಗಾರಿಕೆ ಬಗ್ಗೆ ಮೀನುಗಾರರಿಗೆ ತರಬೇತಿ ನೀಡ ಬೇಕು. ಮೀನು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಉತ್ತೇಜನ ನೀಡಬೇಕು ಎಂಬುದು ಮೀನುಗಾರರ ಕೋರಿಕೆ.</p>.<p><strong>‘ಮೀನು ಮಾರುಕಟ್ಟೆ ಪ್ರಗತಿಯಲ್ಲಿ’</strong></p>.<p>ಜಿಲ್ಲೆಯ ಎನ್.ಆರ್.ಪುರದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಹಂತದಲ್ಲಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುಚನ್ನ ಬಸವಣ್ಣ ತಿಳಿಸಿದರು.</p>.<p>‘ಮೀನುಗಾರರು ‘ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ’ಯಡಿ ನೆರವು ಪಡೆದುಕೊಳ್ಳಲು ಅವಕಾಶ ಇದೆ. ಅಲಂಕಾರಿಕ ಮೀನು ಸಾಕಾಣಿಕೆ ಘಟಕ, ಮೀನುಗಳ ಹ್ಯಾಚರಿ ಕೇಂದ್ರಗಳ ಸ್ಥಾಪನೆ, ಮೀನು ಕೃಷಿ ಕೊಳಗಳ ನಿರ್ಮಾಣ ಮೊದಲಾದವಕ್ಕೆ ನೆರವು ನೀಡಲಾಗುತ್ತದೆ’ ಎಂದು ತಿಳಿಸಿದರು.</p>.<p>‘ಮೀನುಗಾರಿಕೆ ಇಲಾಖೆಯಿಂದ ಜಿಲ್ಲೆಯ ಹಲವು ಮೀನುಗಾರರಿಗೆ ಬಲೆ, ತೆಪ್ಪ, ಹರಿಗೋಲು, ದ್ವಿಚಕ್ರ ವಾಹನಕ್ಕೆ ಸಹಾಯಧನ (₹ 10,000), ಮೀನುಗಾರಿಕೆ ಸಲಕರಣೆ ಕಿಟ್ ಮೊದಲಾದವನ್ನು ನೀಡಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>