ಚನ್ನಡ್ಲು ಗ್ರಾಮದಿಂದ 15 ಕಿ.ಮೀ ದೂರದ ಕುಂಬಳಡಿಕೆ ಪ್ರದೇಶದಲ್ಲಿ ನಿವೇಶನ ನೀಡುತ್ತಿರುವ ಬಗ್ಗೆ ಮೊದಲಿನಿಂದಲೂ ಸಂತ್ರಸ್ತರಲ್ಲಿ ವಿರೋಧ ಇತ್ತು. ಇದೀಗ ಆ ವಿರೋಧ ಬಲವಾಗಿದ್ದು, ನೆರೆ ನಿರಾಶ್ರಿತರ ಸಮಿತಿ ಎಂಬ ನೋಂದಾಯಿತ ಸಂಘಟನೆ ರೂಪಿಸಲಾಗಿದೆ. ಈ ಸಮಿತಿಯು ಚನ್ನಡಲು ಗ್ರಾಮದ ಎಲ್ಲ ಸಂತ್ರಸ್ತರನ್ನು ಒಗ್ಗೂಡಿಸಿದ್ದು, ಪರ್ಯಾಯ ಜಮೀನಿಗಾಗಿ ಹೋರಾಟ ಆರಂಭಿಸಿದೆ.