ದಕ್ಷಿಣ ಪ್ರಾಂತದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೃಷ್ಣ ಪ್ರಸಾದ್ ಮಾತನಾಡಿ, ‘ಗುರುಕುಲದಲ್ಲಿ ಮಕ್ಕಳು ಅಂತರಂಗದ ಶಿಸ್ತನ್ನು ಕಲಿಯುತ್ತಾರೆ. ವ್ಯಕ್ತಿಯು ಸಮಾಜಕ್ಕೆ ಉಪಯೋಗಿಯಾಗಿ ರೂಪುಗೊಳ್ಳಬೇಕು. ನಾನು ಎಂಬುದನ್ನು ಹೋಗಲಾಡಿಸಿ, ನಾವು ಎಂಬುದನ್ನು ಬೆಳಸಿಕೊಳ್ಳಬೇಕು. ಪುನೀತ್ ರಾಜ್ಕುಮಾರ್ ಅವರು ಕಲಾವಿದರಾಗಿ ರಾಜ್ಯದಲ್ಲಿ ಚಿರಪರಿಚಿತರಾಗಿದ್ದರೂ ಕೂಡ, ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಜನರು ಈಗ ಸ್ಮರಿಸುತ್ತಿದ್ದಾರೆ’ ಎಂದು ಹೇಳಿದರು.