ತಾಲ್ಲೂಕಿನ ಜೋಡಿಲಿಂಗದ ಹಳ್ಳಿ, ಸಖರಾಯಪಟ್ಟಣ, ಬಾಣೂರು, ಕಡೂರು ಪಟ್ಟಣದ ಹೊರವಲಯದ ನಗದಿಯಾತ್ ಕಾವಲು, ಪಂಚನಹಳ್ಳಿ ಬಳಿಯ ದೊಡ್ಡನಕಟ್ಟೆ, ಎಚ್.ಎಂ.ಕಾವಲು, ತಂಗಲಿ ಕಾಡು ಪ್ರದೇಶ, ಹೇಮಗಿರಿಯ ಬೆಟ್ಟ, ಬೀರೂರು ಅಮೃತ ಮಹಲ್ ಕಾವಲು ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಸುತ್ತತಲಿನ ಗ್ರಾಮಗಳಲ್ಲಿ ಕೆಲವು ದಿನಗಳಿಂದ ಚಿರತೆ ಓಡಾಡುತ್ತಿರುವುದನ್ನು ಕಂಡು ಜನರು ಭಯಭೀತರಾಗಿದ್ದಾರೆ.