<p><strong>ಚಿಕ್ಕಮಗಳೂರು: </strong>ಶ್ರದ್ಧೆ, ಭಕ್ತಿ ಇದ್ದರೆ ಭಗವಂತನ ಒಲುಮೆಗೆ ಪಾತ್ರರಾಗಬಹುದು ಎಂದು ಶೃಂಗೇರಿ ಶಾರದಾಪೀಠದ ಕಿರಿಯ ಯತಿವರ್ಯ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.</p>.<p>ಜ್ಯೋತಿನಗರದಲ್ಲಿ ಮಹಾಲಕ್ಷ್ಮಿ ದೇಗುಲದ ಉದ್ಘಾಟನೆ, ಕುಂಭಾಭಿಷೇಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಧಿಕಾರ, ಜಾತಿ, ಅಂತಸ್ತಿನಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಇಲ್ಲ. ಭಕ್ತಿ, ಶ್ರದ್ಧೆ ಮುಖ್ಯ. ಭಕ್ತಿ, ಶ್ರದ್ಧೆಗೆ ತಕ್ಕಂತೆ ಅನುಗ್ರಹ ಕರುಣೆಯಾಗುತ್ತದೆ. ಭಗವಂತ ಭಕ್ತರ ಪರಾಧೀನ ಎಂದರು.</p>.<p>ಭಗವಂತ ನಿರ್ಗುಣ ಮತ್ತು ನಿರಾಕಾರ. ರೂಪ, ಆಕಾರಗಳಿಲ್ಲದಿದ್ದರೆ ಆರಾಧಿಸಲಾಗಲ್ಲ. ಹೀಗಾಗಿ, ಭಗವಂತಗೆ ಅನೇಕ ಶರೀರ, ನಾಮಗಳು. ಎಲ್ಲ ದೇವರೂ ಒಂದೇ. ದೇಗುಲಗಳನ್ನು ನಿರ್ಮಾಣ ಮಾಡಿ ಶಾಸ್ತ್ರೋಕ್ತವಾಗಿ ಮೂರ್ತಿ ಪ್ರತಿಷ್ಠಾಪಿಸುವ ಸಂಪ್ರದಾಯ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.</p>.<p>ವಿಗ್ರಹ ಯಾರನ್ನೂ ದ್ವೇಷಿಸಲ್ಲ. ಪೂಜೆ, ನೈವೇದ್ಯ ಮಾಡು ಎಂದು ಕೇಳಲ್ಲ. ಯಾರನ್ನೂ ನಿಂದನೆ ಮಾಡಲ್ಲ. ಯಾರಿಗೂ ಯಾವ ಆಜ್ಞೆಯನ್ನು ಮಾಡಲ್ಲ. ಹೀಗಾಗಿ ದೇಗುಲದಲ್ಲಿನ ಶಿಲಾಮೂರ್ತಿಗೆ ದೈವತ್ವ ಸಂದಿದೆ ಎಂದು ವಿವರಿಸಿದರು.</p>.<p>ಅಕಾರಣವಾಗಿ ಇನ್ನೊಬ್ಬರನ್ನು ದ್ವೇಷಿಸುವುದನ್ನು ಬಿಡಬೇಕು. ತೃಪ್ತಿ ಗುಣ ಇರಬೇಕು. ಇನ್ನೊಬ್ಬರಲ್ಲಿನ ಒಳ್ಳೆಯ ಅಂಶಗಳನ್ನು ಪರಿಗಣಿಸಬೇಕು. ಸಂಬಂಧವಿಲ್ಲದ ವಿಷಯಗಳಲ್ಲಿ ತಲೆಹಾಕಬಾರದು. ಇಂಥ ಗುಣಗಳಿರುವವರಿಗೆ ದೇವರಂಥ ಮನುಷ್ಯರು ಎನ್ನುತ್ತಾರೆ. ಸಜ್ಜನರಾಗಿ ನಡೆದುಕೊಳ್ಳಬೇಕು ಎಂದು ಉಪದೇಶಿಸಿದರು.</p>.<p>ಈ ದೇಗುಲ ನಿರ್ಮಾಣಕ್ಕಾಗಿ ಟ್ರಸ್ಟಿ ವಿ.ರಾಮರಾವ್ ಅವರು ಅಪಾರ ಶ್ರಮಿಸಿದ್ದಾರೆ. ದೇಗುಲವನ್ನು ಶಾರದಾ ಪೀಠವು ನಿರ್ವಹಣೆ ಮಾಡಲಿದೆ ಎಂದು ಹೇಳಿದರು.</p>.<p>ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಮಾತನಾಡಿ, ‘ಈ ದೇಗುಲ ನಿರ್ಮಾಣ ರಾಮರಾವ್ ಅವರ ಮಹತ್ವಾಕಾಂಕ್ಷೆಯಾಗಿತ್ತು. ಅದು ಈಡೇರಿದೆ’ ಎಂದರು.</p>.<p>ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಸ್ವಾಮೀಜಿ ಅವರ ಕೃಪಾಶೀರ್ವಾದಿಂದ ದೇಗುಲ ಲೋಕಾರ್ಪಣೆಯಾಗಿದೆ. ದೇಗುಲವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲ ಮೇಲಿದೆ’ ಎಂದರು.</p>.<p>ದೇಗುಲದ ದಾಖಲೆ, ಕೀಲಿಯನ್ನು ಶೃಂಗೇರಿ ಶಾರದಾ ಪೀಠದ ಯತಿವರ್ಯರಿಗೆ ಹಸ್ತಾಂತರಿಸಲಾಯಿತು. ಟ್ರಸ್ಟಿ ವಿ.ರಾಮರಾವ್ ಇತರರನ್ನು ಸನ್ಮಾನಿಸಲಾಯಿತು.</p>.<p>ಕಾಫಿ ಬೆಳೆಗಾರರಾದ ಗೌರಮ್ಮ ಬಸವೇಗೌಡ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಶ್ರದ್ಧೆ, ಭಕ್ತಿ ಇದ್ದರೆ ಭಗವಂತನ ಒಲುಮೆಗೆ ಪಾತ್ರರಾಗಬಹುದು ಎಂದು ಶೃಂಗೇರಿ ಶಾರದಾಪೀಠದ ಕಿರಿಯ ಯತಿವರ್ಯ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.</p>.<p>ಜ್ಯೋತಿನಗರದಲ್ಲಿ ಮಹಾಲಕ್ಷ್ಮಿ ದೇಗುಲದ ಉದ್ಘಾಟನೆ, ಕುಂಭಾಭಿಷೇಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಧಿಕಾರ, ಜಾತಿ, ಅಂತಸ್ತಿನಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಇಲ್ಲ. ಭಕ್ತಿ, ಶ್ರದ್ಧೆ ಮುಖ್ಯ. ಭಕ್ತಿ, ಶ್ರದ್ಧೆಗೆ ತಕ್ಕಂತೆ ಅನುಗ್ರಹ ಕರುಣೆಯಾಗುತ್ತದೆ. ಭಗವಂತ ಭಕ್ತರ ಪರಾಧೀನ ಎಂದರು.</p>.<p>ಭಗವಂತ ನಿರ್ಗುಣ ಮತ್ತು ನಿರಾಕಾರ. ರೂಪ, ಆಕಾರಗಳಿಲ್ಲದಿದ್ದರೆ ಆರಾಧಿಸಲಾಗಲ್ಲ. ಹೀಗಾಗಿ, ಭಗವಂತಗೆ ಅನೇಕ ಶರೀರ, ನಾಮಗಳು. ಎಲ್ಲ ದೇವರೂ ಒಂದೇ. ದೇಗುಲಗಳನ್ನು ನಿರ್ಮಾಣ ಮಾಡಿ ಶಾಸ್ತ್ರೋಕ್ತವಾಗಿ ಮೂರ್ತಿ ಪ್ರತಿಷ್ಠಾಪಿಸುವ ಸಂಪ್ರದಾಯ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.</p>.<p>ವಿಗ್ರಹ ಯಾರನ್ನೂ ದ್ವೇಷಿಸಲ್ಲ. ಪೂಜೆ, ನೈವೇದ್ಯ ಮಾಡು ಎಂದು ಕೇಳಲ್ಲ. ಯಾರನ್ನೂ ನಿಂದನೆ ಮಾಡಲ್ಲ. ಯಾರಿಗೂ ಯಾವ ಆಜ್ಞೆಯನ್ನು ಮಾಡಲ್ಲ. ಹೀಗಾಗಿ ದೇಗುಲದಲ್ಲಿನ ಶಿಲಾಮೂರ್ತಿಗೆ ದೈವತ್ವ ಸಂದಿದೆ ಎಂದು ವಿವರಿಸಿದರು.</p>.<p>ಅಕಾರಣವಾಗಿ ಇನ್ನೊಬ್ಬರನ್ನು ದ್ವೇಷಿಸುವುದನ್ನು ಬಿಡಬೇಕು. ತೃಪ್ತಿ ಗುಣ ಇರಬೇಕು. ಇನ್ನೊಬ್ಬರಲ್ಲಿನ ಒಳ್ಳೆಯ ಅಂಶಗಳನ್ನು ಪರಿಗಣಿಸಬೇಕು. ಸಂಬಂಧವಿಲ್ಲದ ವಿಷಯಗಳಲ್ಲಿ ತಲೆಹಾಕಬಾರದು. ಇಂಥ ಗುಣಗಳಿರುವವರಿಗೆ ದೇವರಂಥ ಮನುಷ್ಯರು ಎನ್ನುತ್ತಾರೆ. ಸಜ್ಜನರಾಗಿ ನಡೆದುಕೊಳ್ಳಬೇಕು ಎಂದು ಉಪದೇಶಿಸಿದರು.</p>.<p>ಈ ದೇಗುಲ ನಿರ್ಮಾಣಕ್ಕಾಗಿ ಟ್ರಸ್ಟಿ ವಿ.ರಾಮರಾವ್ ಅವರು ಅಪಾರ ಶ್ರಮಿಸಿದ್ದಾರೆ. ದೇಗುಲವನ್ನು ಶಾರದಾ ಪೀಠವು ನಿರ್ವಹಣೆ ಮಾಡಲಿದೆ ಎಂದು ಹೇಳಿದರು.</p>.<p>ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಮಾತನಾಡಿ, ‘ಈ ದೇಗುಲ ನಿರ್ಮಾಣ ರಾಮರಾವ್ ಅವರ ಮಹತ್ವಾಕಾಂಕ್ಷೆಯಾಗಿತ್ತು. ಅದು ಈಡೇರಿದೆ’ ಎಂದರು.</p>.<p>ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಸ್ವಾಮೀಜಿ ಅವರ ಕೃಪಾಶೀರ್ವಾದಿಂದ ದೇಗುಲ ಲೋಕಾರ್ಪಣೆಯಾಗಿದೆ. ದೇಗುಲವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲ ಮೇಲಿದೆ’ ಎಂದರು.</p>.<p>ದೇಗುಲದ ದಾಖಲೆ, ಕೀಲಿಯನ್ನು ಶೃಂಗೇರಿ ಶಾರದಾ ಪೀಠದ ಯತಿವರ್ಯರಿಗೆ ಹಸ್ತಾಂತರಿಸಲಾಯಿತು. ಟ್ರಸ್ಟಿ ವಿ.ರಾಮರಾವ್ ಇತರರನ್ನು ಸನ್ಮಾನಿಸಲಾಯಿತು.</p>.<p>ಕಾಫಿ ಬೆಳೆಗಾರರಾದ ಗೌರಮ್ಮ ಬಸವೇಗೌಡ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>