ಸೋಮವಾರ ತಮ್ಮ ಫೇಸ್ಬುಕ್ನಲ್ಲಿ ‘ಕಳೆದೆರಡು ದಿನಗಳಿಂದ ಶೀತ ಹಾಗೂ ಜ್ವರ ಹೆಚ್ಚಾಗಿದೆ. ಈ ವಾರ ಸಂಪೂರ್ಣವಾಗಿ ಯಾವುದೇ ಸಭೆ, ಸಮಾರಂಭ ಹಾಗೂ ಮನೆ, ಕಚೇರಿಯಲ್ಲಿ ಸಂದರ್ಶನ ಮಾಡುವುದಿಲ್ಲ. ವೈದ್ಯರ ನಿರ್ದೇಶನದಂತೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಜ್ವರ ತೀವ್ರಗೊಂಡರೆ ಮುಂದೆ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳುತ್ತೇನೆ. ಹಾಗಾಗಿ, ಕ್ಷೇತ್ರದ ಜನತೆ ಅನ್ಯತಾ ಭಾವಿಸದೆ ಮುಂದಿನ ಒಂದು ವಾರ ಮಟ್ಟಿಗೆ ಯಾರು ಸಹ ಯಾವುದೇ ಕೆಲಸಗಳಿಗೆ ನೇರವಾಗಿ ಕಾಣಲು ಬರಬಾರದು ಎಂದು ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ಕೋರಿದ್ದಾರೆ.