<p><strong>ಅಜ್ಜಂಪುರ (ಚಿಕ್ಕಮಗಳೂರು)</strong>: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿದಿದ್ದು, ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆಗಾಗಿ ಮಾಡಿದ ಖರ್ಚು ಕೈಸೇರದೆ ರೈತರು ತೊಂದರೆಗೀಡಾಗಿದ್ದಾರೆ.</p>.<p>ತಾಲ್ಲೂಕಿನ ಪ್ರಧಾನ ಬೆಳೆಯಾಗಿರುವ ಈರುಳ್ಳಿ ಪ್ರಮುಖ ವಾಣಿಜ್ಯ ಬೆಳೆಯೂ ಆಗಿದೆ. ಈ ಆಧಾರದಲ್ಲಿಯೇ ರೈತರ ವ್ಯವಹಾರ, ಅಭಿವೃದ್ಧಿ ನಿಂತಿದೆ. </p>.<p>ಹೊಲ ಹಸನು, ಬಿತ್ತನೆ ಬೀಜ, ಗೊಬ್ಬರ, ಬೇಸಾಯ, ಕಳೆ ತೆಗೆಸುವುದು, ಕ್ರಿಮಿ-ಕೀಟ-ಕಳೆನಾಶಕ ಸಿಂಪಡಿಸುವಿಕೆ, ಈರುಳ್ಳಿ ಕೀಳುವುದು, ಹಸನುಗೊಳಿಸುವುದು, ಗಾತ್ರದ ಆಧಾರದಲ್ಲಿ ವಿಂಗಡಣೆ, ಚೀಲಕ್ಕೆ ತುಂಬುವುದು, ಮಾರುಕಟ್ಟೆಗೆ ಕೊಂಡೊಯ್ಯುವುದು ಸೇರಿ ಪ್ರತಿ ಕೆಜಿಗೆ ₹ 10ರಿಂದ 15 ತಗುಲಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ದರ ₹ 3ರಿಂದ 12 ಇದೆ. ಈ ಬಾರಿ ನಷ್ಟವೇ ಅಧಿಕವಾಗಿದೆ ಎಂದು ರೈತ ಮಹೇಶ್ವರಯ್ಯ ಅಸಹಾಯಕತೆ ವ್ಯಕ್ತಪಡಿಸಿದರು.</p>.<p>ಸಾಲ ಮಾಡಿ ಬೆಳೆ ಮಾಡಿದೆ. ಬೆಳೆ ಮಾರಾಟ ಮಾಡಿ, ಸಾಲ ತೀರಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ, ದರ ಕುಸಿತವು ನಿರೀಕ್ಷೆಯನ್ನೇ ಹುಸಿಗೊಳಿಸಿತು. ಈಗ ದಿಕ್ಕೇ ತೋಚುತ್ತಿಲ್ಲ ಎಂದು ಈರುಳ್ಳಿ ಬೆಳೆಗಾರ ನಾರಣಾಪುರದ ವೀರಭದ್ರಪ್ಪ ಅಳಲು ತೋಡಿಕೊಂಡರು.</p>.<p>ಭೂಮಿಯಿಂದ ಈರುಳ್ಳಿ ಗಡ್ಡೆ ಹೊರ ತೆಗೆದು ತಿಂಗಳಾಯಿತು. ದರ ಕುಸಿದಿರುವುದರಿಂದ ಈರುಳ್ಳಿ ಹಸನುಗೊಳಿಸಿಲ್ಲ. ಇದ್ದಲ್ಲಿಯೇ ಅರ್ಧಕ್ಕಿಂತ ಹೆಚ್ಚು ಗಡ್ಡೆ ಕೊಳೆತಿವೆ ಎಂದು ಶಿವನಿ ರೈಲು ಸ್ಟೇಷನ್ನ ಬಸವರಾಜಪ್ಪ ಹೇಳಿದರು.</p>.<p>ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದಲ್ಲಿ ಈರುಳ್ಳಿ ದರ ನಿಗದಿಯಾಗುತ್ತದೆ. ಅದು ಬಣ್ಣ, ಗಾತ್ರ, ಗಟ್ಟಿ, ಸಿಪ್ಪೆಯ ಹೊಳಪು, ಲಕ್ಷಣದ ಮೇಲೆ ದರ ಬದಲಾಗುತ್ತದೆ. ಸದ್ಯ ₹ 3ರಿಂದ 12 ಬೆಲೆ ಇದೆ. ಕಳೆದ ಬಾರಿಗೆ ಹೋಲಿಸಿದರೆ ಕಡಿಮೆ ಆಗಿದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿ ನಟರಾಜ್.</p>.<p>‘ತಲಾ ₹ 30 ಸಾವಿರದಂತೆ 23 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಈರುಳ್ಳಿ ಕೃಷಿ ಮಾಡಿದ್ದೇನೆ. 3,500 ಚೀಲ ಈರುಳ್ಳಿ ಬೆಳೆದಿದ್ದೇನೆ. ದರ ಕುಸಿತವಾಗಿರುವುದರಿಂದ ದಾಸ್ತಾನು ಇರಿಸಿದ್ದೇನೆ. ಇದುವರೆಗೆ 20 ಲಕ್ಷ ಖರ್ಚು ಮಾಡಿದ್ದೇನೆ’ ಎನ್ನುತ್ತಾರೆ ಹೆಬ್ಬೂರಿನ ಕೃಷಿಕ ಮಧು.</p>.<p>ಆರ್ಥಿಕ ಸಂಕಷ್ಟಕ್ಕೆ ಸಿಲಿಕಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಈರುಳ್ಳಿಗೆ ಕನಿಷ್ಠ ಮಾರುಕಟ್ಟೆ ದರ ನಿಗದಿಗೊಳಿಸಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಜ್ಜಂಪುರ (ಚಿಕ್ಕಮಗಳೂರು)</strong>: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿದಿದ್ದು, ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆಗಾಗಿ ಮಾಡಿದ ಖರ್ಚು ಕೈಸೇರದೆ ರೈತರು ತೊಂದರೆಗೀಡಾಗಿದ್ದಾರೆ.</p>.<p>ತಾಲ್ಲೂಕಿನ ಪ್ರಧಾನ ಬೆಳೆಯಾಗಿರುವ ಈರುಳ್ಳಿ ಪ್ರಮುಖ ವಾಣಿಜ್ಯ ಬೆಳೆಯೂ ಆಗಿದೆ. ಈ ಆಧಾರದಲ್ಲಿಯೇ ರೈತರ ವ್ಯವಹಾರ, ಅಭಿವೃದ್ಧಿ ನಿಂತಿದೆ. </p>.<p>ಹೊಲ ಹಸನು, ಬಿತ್ತನೆ ಬೀಜ, ಗೊಬ್ಬರ, ಬೇಸಾಯ, ಕಳೆ ತೆಗೆಸುವುದು, ಕ್ರಿಮಿ-ಕೀಟ-ಕಳೆನಾಶಕ ಸಿಂಪಡಿಸುವಿಕೆ, ಈರುಳ್ಳಿ ಕೀಳುವುದು, ಹಸನುಗೊಳಿಸುವುದು, ಗಾತ್ರದ ಆಧಾರದಲ್ಲಿ ವಿಂಗಡಣೆ, ಚೀಲಕ್ಕೆ ತುಂಬುವುದು, ಮಾರುಕಟ್ಟೆಗೆ ಕೊಂಡೊಯ್ಯುವುದು ಸೇರಿ ಪ್ರತಿ ಕೆಜಿಗೆ ₹ 10ರಿಂದ 15 ತಗುಲಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ದರ ₹ 3ರಿಂದ 12 ಇದೆ. ಈ ಬಾರಿ ನಷ್ಟವೇ ಅಧಿಕವಾಗಿದೆ ಎಂದು ರೈತ ಮಹೇಶ್ವರಯ್ಯ ಅಸಹಾಯಕತೆ ವ್ಯಕ್ತಪಡಿಸಿದರು.</p>.<p>ಸಾಲ ಮಾಡಿ ಬೆಳೆ ಮಾಡಿದೆ. ಬೆಳೆ ಮಾರಾಟ ಮಾಡಿ, ಸಾಲ ತೀರಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ, ದರ ಕುಸಿತವು ನಿರೀಕ್ಷೆಯನ್ನೇ ಹುಸಿಗೊಳಿಸಿತು. ಈಗ ದಿಕ್ಕೇ ತೋಚುತ್ತಿಲ್ಲ ಎಂದು ಈರುಳ್ಳಿ ಬೆಳೆಗಾರ ನಾರಣಾಪುರದ ವೀರಭದ್ರಪ್ಪ ಅಳಲು ತೋಡಿಕೊಂಡರು.</p>.<p>ಭೂಮಿಯಿಂದ ಈರುಳ್ಳಿ ಗಡ್ಡೆ ಹೊರ ತೆಗೆದು ತಿಂಗಳಾಯಿತು. ದರ ಕುಸಿದಿರುವುದರಿಂದ ಈರುಳ್ಳಿ ಹಸನುಗೊಳಿಸಿಲ್ಲ. ಇದ್ದಲ್ಲಿಯೇ ಅರ್ಧಕ್ಕಿಂತ ಹೆಚ್ಚು ಗಡ್ಡೆ ಕೊಳೆತಿವೆ ಎಂದು ಶಿವನಿ ರೈಲು ಸ್ಟೇಷನ್ನ ಬಸವರಾಜಪ್ಪ ಹೇಳಿದರು.</p>.<p>ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದಲ್ಲಿ ಈರುಳ್ಳಿ ದರ ನಿಗದಿಯಾಗುತ್ತದೆ. ಅದು ಬಣ್ಣ, ಗಾತ್ರ, ಗಟ್ಟಿ, ಸಿಪ್ಪೆಯ ಹೊಳಪು, ಲಕ್ಷಣದ ಮೇಲೆ ದರ ಬದಲಾಗುತ್ತದೆ. ಸದ್ಯ ₹ 3ರಿಂದ 12 ಬೆಲೆ ಇದೆ. ಕಳೆದ ಬಾರಿಗೆ ಹೋಲಿಸಿದರೆ ಕಡಿಮೆ ಆಗಿದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿ ನಟರಾಜ್.</p>.<p>‘ತಲಾ ₹ 30 ಸಾವಿರದಂತೆ 23 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಈರುಳ್ಳಿ ಕೃಷಿ ಮಾಡಿದ್ದೇನೆ. 3,500 ಚೀಲ ಈರುಳ್ಳಿ ಬೆಳೆದಿದ್ದೇನೆ. ದರ ಕುಸಿತವಾಗಿರುವುದರಿಂದ ದಾಸ್ತಾನು ಇರಿಸಿದ್ದೇನೆ. ಇದುವರೆಗೆ 20 ಲಕ್ಷ ಖರ್ಚು ಮಾಡಿದ್ದೇನೆ’ ಎನ್ನುತ್ತಾರೆ ಹೆಬ್ಬೂರಿನ ಕೃಷಿಕ ಮಧು.</p>.<p>ಆರ್ಥಿಕ ಸಂಕಷ್ಟಕ್ಕೆ ಸಿಲಿಕಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಈರುಳ್ಳಿಗೆ ಕನಿಷ್ಠ ಮಾರುಕಟ್ಟೆ ದರ ನಿಗದಿಗೊಳಿಸಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>