ಹೇರೂರು ಸಮೀಪದ ಹುಲ್ಸೆ ಬಳಿ ರಸ್ತೆಯಲ್ಲಿ ಅಸ್ಸಾಂನ ಕಾರ್ಮಿಕರು ಬುಧವಾರ ಸಂಜೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ್ದಾರೆ. ಅಲ್ಲಿದ್ದ ಸ್ಥಳೀಯ ಕಾರ್ಮಿಕರು ಅವರನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಆಗ ಅಸ್ಸಾಂ ಕಾರ್ಮಿಕರು ತಾವು ಕೆಲಸ ಮಾಡುವ ತೋಟಕ್ಕೆ ಹೋಗಿದ್ದಾರೆ. ಸ್ಥಳೀಯ ಕಾರ್ಮಿಕರು ಈ ಕುರಿತು ಖಾಸಗಿ ಎಸ್ಟೇಟ್ ವ್ಯವಸ್ಥಾಪಕರ ಗಮನ ಸೆಳೆದಿದ್ದರು.ಈ ಹಿನ್ನಲೆಯಲ್ಲಿ ವ್ಯವಸ್ಥಾಪಕ ನಾರಾಯಣಮೂರ್ತಿ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.