<p><strong>ಚಿಕ್ಕಮಗಳೂರು:</strong> ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರು ಜಯ ಗಳಿಸಿದ್ದು, ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.<br /><br />ನಗರದ ಬೇಲೂರು ರಸ್ತೆಯ ಎಸ್ಟಿಜೆ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರಕ್ರಿಯೆ ಶುರುವಾಯಿತು. ಮತಪತ್ರಗಳ ಮಿಶ್ರಣ ಪ್ರಕ್ರಿಯೆ ನಂತರ ಎಣಿಕೆ ಪ್ರಕ್ರಿಯೆ ಶುರುವಾಯಿತು. ಒಟ್ಟು ಏಳು ಟೇಬಲ್ಗಳಲ್ಲಿ ಎಣಿಕೆ ನಡೆಯಿತು.<br /><br />ಚಲಾವಣೆಯಾಗಿದ್ದ 2410 ಮತಗಳ ಪೈಕಿ 39 ಮತಗಳು ಅಸಿಂಧುವಾಗಿದ್ದವು. ಬಾಕಿ 2371 ಮತಗಳು ಸಿಂಧುವಾಗಿದ್ದವು.<br />2371 ಮತಗಳ ಪೈಕಿ ಬಿಜೆಪಿಯ ಪ್ರಾಣೇಶ್ ಅವರು 1188 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಕಾಂಗ್ರೆಸ್ನ ಎ.ವಿ. ಗಾಯತ್ರಿ ಶಾಂತೇಗೌಡ ಅವರು 1182 ಮತಗಳನ್ನ ಪಡೆದು ಸೋಲುಂಡರು.<br /><br />ಮತ ಎಣಿಕೆ ಆರಂಭದಿಂದಲೂ ಇಬ್ಬರು ನಡುವೆ ಸಮಬಲದ ಪೈಪೋಟಿ ಇತ್ತು. ಅಂತಿಮ ಹಂತದಲ್ಲಿ ಪ್ರಾಣೇಶ್ ಅವರು ಆರು ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರು.<br /><br /><strong>‘ಒಂದು’, ‘ಶೂನ್ಯ’ ಮತ: </strong>ಆಮ್ ಆದ್ಮಿ ಪಕ್ಷದ ಡಾ.ಕೆ.ಸುಂದರಗೌಡ ಅವರು ಒಂದು ಮತ ಪಡೆದರು. ಇನ್ನು ಪಕ್ಷೇತರ ಅಭ್ಯರ್ಥಿಗಳು ಶೂನ್ಯ ಮತ ಪಡೆದರು. ಮತಗಳ ಎಣಿಕೆ ಮುಗಿಯುತ್ತಿದಂತೆ ಪಡೆದಿರುವ ಮತಗಳ ಅಂಕಿಅಂಶವನ್ನು ಅಭ್ಯರ್ಥಿಗಳಿಗೆ ತಿಳಿಸಲಾಯಿತು.<br /><br />ಮರು ಎಣಿಕೆಗೆ ಕಾಂಗ್ರೆಸ್ ಅಭ್ಯರ್ಥ ಮನವಿ: ಅಲ್ಪ ಮತಗಳ ಅಂತರದಲ್ಲಿ ಹಿನ್ನಡೆಯಾಗಿದ್ದ ಗಾಯತ್ರಿ ಅವರು ಮರ ಎಣಿಕೆಗೆ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.<br /><br />ಜಿಲ್ಲಾಧಿಕಾರಿ ರಮೇಶ್ ಅವರು ಅಭ್ಯರ್ಥಿಯ ಮನವಿಯನ್ನು ಚುನಾವಣಾ ಆಯೋಗಕ್ಕೆ ರವಾನಿಸಿದರು. ಆಯೋಗದ ಸೂಚನೆಗಾಗಿ ಸುಮಾರು ಎರಡೂವರೆ ಗಂಟೆ ಕಾಯಲಾಯಿತು. ಆಯೋಗದ ಸೂಚನೆ ನೀಡಿದ ನಂತರ ಜಿಲ್ಲಾಧಿಕಾರಿ ರಮೇಶ್ ಫಲಿತಾಂಶ ಪ್ರಕಟಿಸಿದರು. ಬಿಜೆಪಿಯ ಪ್ರಾಣೇಶ್ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಿದರು.<br /><br /><strong>ಸಂಭ್ರಮಾಚರಣೆ</strong>: ಬೇಲೂರು ರಸ್ತೆಯ ಎಸ್ಟಿಜೆ ಕಾಲೇಜು ಮುಂದಿನ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ವಿಜಯೋತ್ಸವ ಆಚರಿಸಿದರು. ಪ್ರಾಣೇಶ್ ಅವರಿಗೆ ಹೂ ಮಾಲೆ ಹಾಕಿ ಅಭಿನಂದಿಸಿದರು. ಸಿಳ್ಳೆ, ಚಪ್ಪಾಳೆ, ಜೈಕಾರ ಮುಗಿಲು ಮುಟ್ಟಿದ್ದವು.</p>.<p><strong>ಕಣ್ಣೀರಿಟ್ಟ ಗಾಯತ್ರಿ...</strong><br />ಸೋಲಿನಲ್ಲೂ ಗೆಲುವನ್ನು ಕಂಡಿದ್ದೇನೆ. ಇದು ನನ್ನ ಸೋಲಲ್ಲ, ಗೆಲುವು ಎಂದು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಕಣ್ಣೀರಿಟ್ಟರು.</p>.<p>ಸೋಲಿಗೆ ಯಾರು ಧೃತಿಗೆಡುವ ಅಗತ್ಯ ಇಲ್ಲ. ಯಾವುದೇ ಅಚಾತುರ್ಯಕ್ಕೆ ಕೈಹಾಕಬೇಡಿ. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ದುಃಖಿತರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರು ಜಯ ಗಳಿಸಿದ್ದು, ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.<br /><br />ನಗರದ ಬೇಲೂರು ರಸ್ತೆಯ ಎಸ್ಟಿಜೆ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರಕ್ರಿಯೆ ಶುರುವಾಯಿತು. ಮತಪತ್ರಗಳ ಮಿಶ್ರಣ ಪ್ರಕ್ರಿಯೆ ನಂತರ ಎಣಿಕೆ ಪ್ರಕ್ರಿಯೆ ಶುರುವಾಯಿತು. ಒಟ್ಟು ಏಳು ಟೇಬಲ್ಗಳಲ್ಲಿ ಎಣಿಕೆ ನಡೆಯಿತು.<br /><br />ಚಲಾವಣೆಯಾಗಿದ್ದ 2410 ಮತಗಳ ಪೈಕಿ 39 ಮತಗಳು ಅಸಿಂಧುವಾಗಿದ್ದವು. ಬಾಕಿ 2371 ಮತಗಳು ಸಿಂಧುವಾಗಿದ್ದವು.<br />2371 ಮತಗಳ ಪೈಕಿ ಬಿಜೆಪಿಯ ಪ್ರಾಣೇಶ್ ಅವರು 1188 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಕಾಂಗ್ರೆಸ್ನ ಎ.ವಿ. ಗಾಯತ್ರಿ ಶಾಂತೇಗೌಡ ಅವರು 1182 ಮತಗಳನ್ನ ಪಡೆದು ಸೋಲುಂಡರು.<br /><br />ಮತ ಎಣಿಕೆ ಆರಂಭದಿಂದಲೂ ಇಬ್ಬರು ನಡುವೆ ಸಮಬಲದ ಪೈಪೋಟಿ ಇತ್ತು. ಅಂತಿಮ ಹಂತದಲ್ಲಿ ಪ್ರಾಣೇಶ್ ಅವರು ಆರು ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರು.<br /><br /><strong>‘ಒಂದು’, ‘ಶೂನ್ಯ’ ಮತ: </strong>ಆಮ್ ಆದ್ಮಿ ಪಕ್ಷದ ಡಾ.ಕೆ.ಸುಂದರಗೌಡ ಅವರು ಒಂದು ಮತ ಪಡೆದರು. ಇನ್ನು ಪಕ್ಷೇತರ ಅಭ್ಯರ್ಥಿಗಳು ಶೂನ್ಯ ಮತ ಪಡೆದರು. ಮತಗಳ ಎಣಿಕೆ ಮುಗಿಯುತ್ತಿದಂತೆ ಪಡೆದಿರುವ ಮತಗಳ ಅಂಕಿಅಂಶವನ್ನು ಅಭ್ಯರ್ಥಿಗಳಿಗೆ ತಿಳಿಸಲಾಯಿತು.<br /><br />ಮರು ಎಣಿಕೆಗೆ ಕಾಂಗ್ರೆಸ್ ಅಭ್ಯರ್ಥ ಮನವಿ: ಅಲ್ಪ ಮತಗಳ ಅಂತರದಲ್ಲಿ ಹಿನ್ನಡೆಯಾಗಿದ್ದ ಗಾಯತ್ರಿ ಅವರು ಮರ ಎಣಿಕೆಗೆ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.<br /><br />ಜಿಲ್ಲಾಧಿಕಾರಿ ರಮೇಶ್ ಅವರು ಅಭ್ಯರ್ಥಿಯ ಮನವಿಯನ್ನು ಚುನಾವಣಾ ಆಯೋಗಕ್ಕೆ ರವಾನಿಸಿದರು. ಆಯೋಗದ ಸೂಚನೆಗಾಗಿ ಸುಮಾರು ಎರಡೂವರೆ ಗಂಟೆ ಕಾಯಲಾಯಿತು. ಆಯೋಗದ ಸೂಚನೆ ನೀಡಿದ ನಂತರ ಜಿಲ್ಲಾಧಿಕಾರಿ ರಮೇಶ್ ಫಲಿತಾಂಶ ಪ್ರಕಟಿಸಿದರು. ಬಿಜೆಪಿಯ ಪ್ರಾಣೇಶ್ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಿದರು.<br /><br /><strong>ಸಂಭ್ರಮಾಚರಣೆ</strong>: ಬೇಲೂರು ರಸ್ತೆಯ ಎಸ್ಟಿಜೆ ಕಾಲೇಜು ಮುಂದಿನ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ವಿಜಯೋತ್ಸವ ಆಚರಿಸಿದರು. ಪ್ರಾಣೇಶ್ ಅವರಿಗೆ ಹೂ ಮಾಲೆ ಹಾಕಿ ಅಭಿನಂದಿಸಿದರು. ಸಿಳ್ಳೆ, ಚಪ್ಪಾಳೆ, ಜೈಕಾರ ಮುಗಿಲು ಮುಟ್ಟಿದ್ದವು.</p>.<p><strong>ಕಣ್ಣೀರಿಟ್ಟ ಗಾಯತ್ರಿ...</strong><br />ಸೋಲಿನಲ್ಲೂ ಗೆಲುವನ್ನು ಕಂಡಿದ್ದೇನೆ. ಇದು ನನ್ನ ಸೋಲಲ್ಲ, ಗೆಲುವು ಎಂದು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಕಣ್ಣೀರಿಟ್ಟರು.</p>.<p>ಸೋಲಿಗೆ ಯಾರು ಧೃತಿಗೆಡುವ ಅಗತ್ಯ ಇಲ್ಲ. ಯಾವುದೇ ಅಚಾತುರ್ಯಕ್ಕೆ ಕೈಹಾಕಬೇಡಿ. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ದುಃಖಿತರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>