<p><strong>ಕೊಪ್ಪ:</strong> ‘ನ.11 ರಂದು ಹರಿಹರಪುರ ಮಠದ ಆವರಣದಲ್ಲಿ ಸಮಾನ ಸಂಸ್ಕಾರ ಸಮಾವೇಶ ‘ಸಂಸ್ಕಾರ ಹಬ್ಬ’ ಆಯೋಜಿಸಲಾಗಿದೆ’ ಎಂದು ಸನಾತನ ಹಿಂದೂ ಸಮಾಜ ಪರಿಷತ್ನ ಮಲೆನಾಡು ಪ್ರಾಂತ್ಯ ಸಂಚಾಲಕ ವಾಸಪ್ಪ ಕುಂಚೂರು ತಿಳಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹಿಂದೂ ಧರ್ಮದವರನ್ನು ಒಗ್ಗೂಡಿಸುವ ಉದ್ದೇಶದಿಂದ ಹರಿಹರಪುರ ಸ್ವಾಮೀಜಿ ಮಾರ್ಗದರ್ಶನದೊಂದಿಗೆ ಹಬ್ಬ ಆಯೋಜಿಸಲಾಗಿದೆ’ ಎಂದರು.</p>.<p>ಪರಿಷತ್ನ ವ್ಯವಸ್ಥಾಪಕ ನಿರ್ದೇಶಕ ಡಾ.ದೀಪಕ್ ಮಾತನಾಡಿ, ‘ಸಂಸ್ಕಾರ ಹಬ್ಬವನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. 5 ಸಾವಿರ ವಿದ್ಯಾರ್ಥಿಗಳು, 15 ಸಾವಿರ ಮಾತೆಯರು ಭಗವದ್ಗೀತೆಯ ಭಕ್ತಿ ಯೋಗದ ಶ್ಲೋಕಗಳನ್ನು ಪಾರಾಯಣ ಮಾಡಲಿದ್ದಾರೆ. 25 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಲಿದ್ದಾರೆ’ ತಿಳಿಸಿದರು.</p>.<p>ಪರಿಷತ್ ನ ಜಿಲ್ಲಾ ಸಹ ಸಂಚಾಲಕ ಚೇತನ್ ಕುಮಾರ್ ಮಾತನಾಡಿ, ‘ಸಂಕಲ್ಪ ಮುಷ್ಟಿ ಅಕ್ಕಿ ಕಾಣಿಕೆಯನ್ನು 22 ಸಾವಿರ ಮನೆಗಳಿಂದ ಸಂಗ್ರಹಿಸಲಾಗಿದ್ದು, ಧರ್ಮಸ್ಥಳಕ್ಕೆ ಅನ್ನ ಪ್ರಸಾದ ಬಳಕೆಗೆ ಕಳುಹಿಸಿಕೊಡಲಾಗುತ್ತಿದೆ’ ಎಂದರು.</p>.<p>ಪರಿಷತ್ ಕಾರ್ಯಕರ್ತ ನಾರ್ವೆ ಹರೀಶ್ ಮಾತನಾಡಿ, ‘ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ಭಗವದ್ಗೀತಾ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು’ ಎಂದರು.</p>.<p>ಪರಿಷತ್ ನ ತಾಲ್ಲೂಕು ಸಂಚಾಲಕಿ ಡಿ.ಪಿ.ಅನುಸೂಯ ಕೃಷ್ಣಮೂತಿ ಮಾತನಾಡಿ, ‘ಪಂಚಪ್ರಾಣ ವಿಧಿಗಳಾದ ಸಂಧ್ಯಾ ವಂದನೆ, ಸ್ವಾಧ್ಯಾಯ, ಸದಾಚಾರ ಜೀವನ, ಸಮೈಕ್ಯತೆ, ಸಹಯೋಗವನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಮುಖಂಡ ಅನಿಲ್ ಕುಮಾರ್ ನಾರ್ವೆ, ಪರಿಷತ್ ನ ಕೊಪ್ಪ ಪಟ್ಟಣ ಸಂಚಾಲಕಿ ಗಾಯತ್ರಿ ಶೆಟ್ಟಿ, ಸಂಯೋಜಕಿ ಮಲ್ಲಿಕಾ, ಶಾಂತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪ:</strong> ‘ನ.11 ರಂದು ಹರಿಹರಪುರ ಮಠದ ಆವರಣದಲ್ಲಿ ಸಮಾನ ಸಂಸ್ಕಾರ ಸಮಾವೇಶ ‘ಸಂಸ್ಕಾರ ಹಬ್ಬ’ ಆಯೋಜಿಸಲಾಗಿದೆ’ ಎಂದು ಸನಾತನ ಹಿಂದೂ ಸಮಾಜ ಪರಿಷತ್ನ ಮಲೆನಾಡು ಪ್ರಾಂತ್ಯ ಸಂಚಾಲಕ ವಾಸಪ್ಪ ಕುಂಚೂರು ತಿಳಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹಿಂದೂ ಧರ್ಮದವರನ್ನು ಒಗ್ಗೂಡಿಸುವ ಉದ್ದೇಶದಿಂದ ಹರಿಹರಪುರ ಸ್ವಾಮೀಜಿ ಮಾರ್ಗದರ್ಶನದೊಂದಿಗೆ ಹಬ್ಬ ಆಯೋಜಿಸಲಾಗಿದೆ’ ಎಂದರು.</p>.<p>ಪರಿಷತ್ನ ವ್ಯವಸ್ಥಾಪಕ ನಿರ್ದೇಶಕ ಡಾ.ದೀಪಕ್ ಮಾತನಾಡಿ, ‘ಸಂಸ್ಕಾರ ಹಬ್ಬವನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. 5 ಸಾವಿರ ವಿದ್ಯಾರ್ಥಿಗಳು, 15 ಸಾವಿರ ಮಾತೆಯರು ಭಗವದ್ಗೀತೆಯ ಭಕ್ತಿ ಯೋಗದ ಶ್ಲೋಕಗಳನ್ನು ಪಾರಾಯಣ ಮಾಡಲಿದ್ದಾರೆ. 25 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಲಿದ್ದಾರೆ’ ತಿಳಿಸಿದರು.</p>.<p>ಪರಿಷತ್ ನ ಜಿಲ್ಲಾ ಸಹ ಸಂಚಾಲಕ ಚೇತನ್ ಕುಮಾರ್ ಮಾತನಾಡಿ, ‘ಸಂಕಲ್ಪ ಮುಷ್ಟಿ ಅಕ್ಕಿ ಕಾಣಿಕೆಯನ್ನು 22 ಸಾವಿರ ಮನೆಗಳಿಂದ ಸಂಗ್ರಹಿಸಲಾಗಿದ್ದು, ಧರ್ಮಸ್ಥಳಕ್ಕೆ ಅನ್ನ ಪ್ರಸಾದ ಬಳಕೆಗೆ ಕಳುಹಿಸಿಕೊಡಲಾಗುತ್ತಿದೆ’ ಎಂದರು.</p>.<p>ಪರಿಷತ್ ಕಾರ್ಯಕರ್ತ ನಾರ್ವೆ ಹರೀಶ್ ಮಾತನಾಡಿ, ‘ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ಭಗವದ್ಗೀತಾ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು’ ಎಂದರು.</p>.<p>ಪರಿಷತ್ ನ ತಾಲ್ಲೂಕು ಸಂಚಾಲಕಿ ಡಿ.ಪಿ.ಅನುಸೂಯ ಕೃಷ್ಣಮೂತಿ ಮಾತನಾಡಿ, ‘ಪಂಚಪ್ರಾಣ ವಿಧಿಗಳಾದ ಸಂಧ್ಯಾ ವಂದನೆ, ಸ್ವಾಧ್ಯಾಯ, ಸದಾಚಾರ ಜೀವನ, ಸಮೈಕ್ಯತೆ, ಸಹಯೋಗವನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಮುಖಂಡ ಅನಿಲ್ ಕುಮಾರ್ ನಾರ್ವೆ, ಪರಿಷತ್ ನ ಕೊಪ್ಪ ಪಟ್ಟಣ ಸಂಚಾಲಕಿ ಗಾಯತ್ರಿ ಶೆಟ್ಟಿ, ಸಂಯೋಜಕಿ ಮಲ್ಲಿಕಾ, ಶಾಂತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>