<p><strong>ಚಿಕ್ಕಮಗಳೂರು</strong>: ನಗರ ಮತ್ತು ತಾಲ್ಲೂಕಿನ ವಿವಿಧೆಡೆಗಳಲ್ಲಿ ಮಕ್ಕಳು, ಸಾರ್ವಜನಿರು ಉತ್ಸಾಹದಿಂದ ಗುರುವಾರ ಕಂಕಣ ಸೂರ್ಯಗ್ರಹಣವನ್ನು ಉತ್ಸಾಹಿಂದ ವೀಕ್ಷಿಸಿದರು, ನಭದ ವಿಸ್ಮಯ ಕಂಡು ಬೆರಗಾದರು.<br />ಜಿಲ್ಲಾ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಜನರು ಕುತೂಹಲದಿಂದ ಕೌತುಕವನ್ನು ವೀಕ್ಷಿಸಿ ಆಶ್ಚರ್ಯ ಸಂತಸ ವ್ಯಕ್ತಪಡಿಸಿದರು.</p>.<p><br />ಬೆಳಿಗ್ಗೆ 7.40 ರಿಂದ 11.40ರವರೆಗೆ ಮಕ್ಕಳು, ಸಾರ್ವಜನಿಕರು ವೀಕ್ಷಿಸಿದರು. ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳೂ ಇದ್ದರು. ಗ್ರಹಣ ವೀಕ್ಷಣೆಗೆ ಸೋಲಾರ್ ಫಿಲ್ಟರ್ ಕನ್ನಡಕಗಳನ್ನು ವ್ಯವಸ್ಥೆ ಮಾಡಲಾಗಿತ್ತು.<br />ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಎಚ್.ಎಂ. ನೀಲಕಂಠಪ್ಪ, ಗೌರವಾಧ್ಯಕ್ಷ ಎ.ಎನ್.ಮಹೇಶ್, ತ್ಯಾಗರಾಜ್, ಟಿ.ಜಿ.ಕೆ.ಅರಸ್, ಕೆ.ಜಿ.ನೀಲಕಂಠಪ್ಪ, ಬಿ.ಎಂ.ಲೋಕೇಶ್ ಮೊದಲಾದವರು ಗ್ರಹಣ ಕುರಿತು ಮಾಹಿತಿ ನೀಡಿದರು. ವಿಶ್ಲೇಷಣೆ ಮಾಡಿದರು.</p>.<p>ಸೂರ್ಯನ ಪ್ರಭೆ ಚಂದ್ರನಿಂದ ಶೇ 93ಭಾಗದಷ್ಟು ಮರೆಯಾಗಿದ್ದು ನಗರದಲ್ಲಿ ಗೋಚರಿಸಿತು. ಪೂರ್ಣ ಕಂಕಣ ಕಾಣಿಸಲಿಲ್ಲ. ನೆರಳು–ಬೆಳಕಿನ ಆಟಕ್ಕೆ ಜನ ವಿಸ್ಮಿತರಾದರು. ಬೆಳಿಗ್ಗೆ ಬಿಸಿಲಿನ ಪ್ರಖರ ಕಡಿಮೆ ಇತ್ತು. ಮಾಮೂಲಿಯಂತೆ ಇರಲಿಲ್ಲ.</p>.<p>‘ಗ್ರಹಣವು ಖಗೋಳದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಇದು ಸ್ವಾಭಾವಿಕವಾಗಿ ನಡೆಯುತ್ತಿರುತ್ತದೆ. ಗ್ರಹಣ ಸಂದರ್ಭದಲ್ಲಿ ಆಹಾರ ಸೇವಿಸುವುದರಿಂದ ಯಾವುದೇ ಸಮಸ್ಯೆಯಾಗಲ್ಲ. ಮೌಢ್ಯಗಳನ್ನು ಆಚರಿಸಬಾರದು’ ಎಂದು ವಿಶ್ಲೇಷಕರು ಸಲಹೆ ನೀಡಿದರು.</p>.<p>ವೀಕ್ಷಣಾ ಸ್ಥಳದಲ್ಲಿ ಮಂಡಕ್ಕಿ, ಬಿಸ್ಕತ್ತು, ಖಾರವನ್ನು ಆಯೋಜಕರು ಸೇವಿಸಿದರು. ಅಲ್ಲದೇ ವೀಕ್ಷೆಣೆಗೆ ಜಮಾಯಿಸಿದ್ದವರಿಗೂ ವಿತರಿಸಿದರು. ಗ್ರಹಣ ಸಂದರ್ಭದಲ್ಲಿ ಆಹಾರ ಸೇವಿಸುವುದರಿಂದ ಯಾವುದೇ ದುಷ್ಪರಿಣಾಮ ಉಂಟಾಗಲ್ಲ ಎಂದು ಸಾರಿದರು.</p>.<p>‘ನಾವು ಚಿಕ್ಕವರಿದ್ದಾಗ ಗ್ರಹಣದ ದಿನಗಳಂದು ಪೋಷಕರನ್ನು ಮನೆಯಿಂದ ಹೊರಗೆ ಕಳಿಸುತ್ತಿರಲಿಲ್ಲ. ಆಗೆಲ್ಲ ಗ್ರಹಣ ನೋಡಿದರೆ ದೋಷ ಉಂಟಾಗುತ್ತದೆ ಎಂದು ಭಯಪಡಿಸುತ್ತಿದ್ದರು’ ಎಂದು ವೈದ್ಯೆ ಗೀತಾ ವೆಂಕಟೇಶ್ ಹೇಳಿದರು.<br />‘ಏಳನೇ ತರಗತಿಯಲ್ಲಿದ್ದಾಗ ಒಮ್ಮೆ ಗ್ರಹಣ ವೀಕ್ಷಿಸಿದ್ದೆ. ಇದು ಪ್ರಕೃತಿಯ ವಿಸ್ಮಯ. ಸೂರ್ಯನನ್ನು ಚಂದ್ರ ಮರೆಮಾಡುವುದೇ ಸೋಜಿಗ’ ಎಂದು ಐಡಿಎಸ್ಜಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ಸಂಚಿತಾ ಹೇಳಿದರು.</p>.<p>‘ಇದೇ ಮೊದಲ ಬಾರಿಗೆ ಗ್ರಹಣ ನೋಡಿದೆ. ಅಬ್ಬಬ್ಬಾ ಆಶ್ಚರ್ಯವಾಯಿತು. ವಿಜ್ಞಾನ ಪುಸ್ತಕದಲ್ಲಿ ಓದಿದ್ದೆ, ಈಗ ನಿಜವಾಗಿ ನೋಡಿ ತಿಳಿದುಕೊಂಡೆ’ ಎಂದು ಬೇಲೂರು ರಸ್ತೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ದೊರೆ ಹೇಳಿದರು.<br /><br />ತಾಲ್ಲೂಕು ಕೇಂದ್ರಗಳಲ್ಲಿಯೂ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ನಗರದ ಅಂಬೇಡ್ಕರ್ ಶಾಲೆ, ಬಿ.ಜಿ.ಎಸ್ ಶಾಲೆ, ಕುರುವಂಗಿ ಪ್ರೌಢಶಾಲೆ, ಮೋರಾರ್ಜಿದೇಸಾಯಿ ಶಾಲೆ, ಆಲ್ದೂರ್ ಶಾಲೆ ವಿದ್ಯಾರ್ಥಿಗಳು ಸೂರ್ಯಗ್ರಹಣ ವೀಕ್ಷಸಿದರು.</p>.<p><strong>ಗ್ರಹಣ ಸಮಯ; ಜನ ದಟ್ಟಣೆ ಕಡಿಮೆ</strong></p>.<p>ನಗರದ ರಸ್ತೆಗಳು, ವಿವಿಧೆಡೆಗಳಲ್ಲಿ ಗುರುವಾರ ಬೆಳಿಗ್ಗೆ ಜನ ಮತ್ತು ವಾಹನ ದಟ್ಟಣೆ ಮಾಮೂಲಿಗಿಂತ ಕಡಿಮೆ ಇತ್ತು.</p>.<p>ಕೆಲ ಸಂಪ್ರದಾಯಸ್ಥರಂತೂ ಗ್ರಹಣ ಮುಗಿಯುವವರೆಗೂ ಮನೆಯಿಂದ ಹೊರಗೂ ಬರಲಿಲ್ಲ. ಕೆಲವರು ಮನೆಯಲ್ಲಿ ಟಿವಿಯಲ್ಲಿ ಗ್ರಹಣ ವೀಕ್ಷಿಸಿದರು. ಗ್ರಹಣ ಮುಗಿದ ನಂತರ ಕೆಲ ವ್ಯಾಪಾರಿಗಳು ಅಂಗಡಿ, ಮಳಿಗೆ ತೆರೆದರು.</p>.<p><strong>ಪೂಜೆ:</strong> ಮತ್ತೆ ಕೆಲವರು ಗ್ರಹಣ ಮುಗಿದ ನಂತರ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ನಗರ ಮತ್ತು ತಾಲ್ಲೂಕಿನ ವಿವಿಧೆಡೆಗಳಲ್ಲಿ ಮಕ್ಕಳು, ಸಾರ್ವಜನಿರು ಉತ್ಸಾಹದಿಂದ ಗುರುವಾರ ಕಂಕಣ ಸೂರ್ಯಗ್ರಹಣವನ್ನು ಉತ್ಸಾಹಿಂದ ವೀಕ್ಷಿಸಿದರು, ನಭದ ವಿಸ್ಮಯ ಕಂಡು ಬೆರಗಾದರು.<br />ಜಿಲ್ಲಾ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಜನರು ಕುತೂಹಲದಿಂದ ಕೌತುಕವನ್ನು ವೀಕ್ಷಿಸಿ ಆಶ್ಚರ್ಯ ಸಂತಸ ವ್ಯಕ್ತಪಡಿಸಿದರು.</p>.<p><br />ಬೆಳಿಗ್ಗೆ 7.40 ರಿಂದ 11.40ರವರೆಗೆ ಮಕ್ಕಳು, ಸಾರ್ವಜನಿಕರು ವೀಕ್ಷಿಸಿದರು. ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳೂ ಇದ್ದರು. ಗ್ರಹಣ ವೀಕ್ಷಣೆಗೆ ಸೋಲಾರ್ ಫಿಲ್ಟರ್ ಕನ್ನಡಕಗಳನ್ನು ವ್ಯವಸ್ಥೆ ಮಾಡಲಾಗಿತ್ತು.<br />ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಎಚ್.ಎಂ. ನೀಲಕಂಠಪ್ಪ, ಗೌರವಾಧ್ಯಕ್ಷ ಎ.ಎನ್.ಮಹೇಶ್, ತ್ಯಾಗರಾಜ್, ಟಿ.ಜಿ.ಕೆ.ಅರಸ್, ಕೆ.ಜಿ.ನೀಲಕಂಠಪ್ಪ, ಬಿ.ಎಂ.ಲೋಕೇಶ್ ಮೊದಲಾದವರು ಗ್ರಹಣ ಕುರಿತು ಮಾಹಿತಿ ನೀಡಿದರು. ವಿಶ್ಲೇಷಣೆ ಮಾಡಿದರು.</p>.<p>ಸೂರ್ಯನ ಪ್ರಭೆ ಚಂದ್ರನಿಂದ ಶೇ 93ಭಾಗದಷ್ಟು ಮರೆಯಾಗಿದ್ದು ನಗರದಲ್ಲಿ ಗೋಚರಿಸಿತು. ಪೂರ್ಣ ಕಂಕಣ ಕಾಣಿಸಲಿಲ್ಲ. ನೆರಳು–ಬೆಳಕಿನ ಆಟಕ್ಕೆ ಜನ ವಿಸ್ಮಿತರಾದರು. ಬೆಳಿಗ್ಗೆ ಬಿಸಿಲಿನ ಪ್ರಖರ ಕಡಿಮೆ ಇತ್ತು. ಮಾಮೂಲಿಯಂತೆ ಇರಲಿಲ್ಲ.</p>.<p>‘ಗ್ರಹಣವು ಖಗೋಳದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಇದು ಸ್ವಾಭಾವಿಕವಾಗಿ ನಡೆಯುತ್ತಿರುತ್ತದೆ. ಗ್ರಹಣ ಸಂದರ್ಭದಲ್ಲಿ ಆಹಾರ ಸೇವಿಸುವುದರಿಂದ ಯಾವುದೇ ಸಮಸ್ಯೆಯಾಗಲ್ಲ. ಮೌಢ್ಯಗಳನ್ನು ಆಚರಿಸಬಾರದು’ ಎಂದು ವಿಶ್ಲೇಷಕರು ಸಲಹೆ ನೀಡಿದರು.</p>.<p>ವೀಕ್ಷಣಾ ಸ್ಥಳದಲ್ಲಿ ಮಂಡಕ್ಕಿ, ಬಿಸ್ಕತ್ತು, ಖಾರವನ್ನು ಆಯೋಜಕರು ಸೇವಿಸಿದರು. ಅಲ್ಲದೇ ವೀಕ್ಷೆಣೆಗೆ ಜಮಾಯಿಸಿದ್ದವರಿಗೂ ವಿತರಿಸಿದರು. ಗ್ರಹಣ ಸಂದರ್ಭದಲ್ಲಿ ಆಹಾರ ಸೇವಿಸುವುದರಿಂದ ಯಾವುದೇ ದುಷ್ಪರಿಣಾಮ ಉಂಟಾಗಲ್ಲ ಎಂದು ಸಾರಿದರು.</p>.<p>‘ನಾವು ಚಿಕ್ಕವರಿದ್ದಾಗ ಗ್ರಹಣದ ದಿನಗಳಂದು ಪೋಷಕರನ್ನು ಮನೆಯಿಂದ ಹೊರಗೆ ಕಳಿಸುತ್ತಿರಲಿಲ್ಲ. ಆಗೆಲ್ಲ ಗ್ರಹಣ ನೋಡಿದರೆ ದೋಷ ಉಂಟಾಗುತ್ತದೆ ಎಂದು ಭಯಪಡಿಸುತ್ತಿದ್ದರು’ ಎಂದು ವೈದ್ಯೆ ಗೀತಾ ವೆಂಕಟೇಶ್ ಹೇಳಿದರು.<br />‘ಏಳನೇ ತರಗತಿಯಲ್ಲಿದ್ದಾಗ ಒಮ್ಮೆ ಗ್ರಹಣ ವೀಕ್ಷಿಸಿದ್ದೆ. ಇದು ಪ್ರಕೃತಿಯ ವಿಸ್ಮಯ. ಸೂರ್ಯನನ್ನು ಚಂದ್ರ ಮರೆಮಾಡುವುದೇ ಸೋಜಿಗ’ ಎಂದು ಐಡಿಎಸ್ಜಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ಸಂಚಿತಾ ಹೇಳಿದರು.</p>.<p>‘ಇದೇ ಮೊದಲ ಬಾರಿಗೆ ಗ್ರಹಣ ನೋಡಿದೆ. ಅಬ್ಬಬ್ಬಾ ಆಶ್ಚರ್ಯವಾಯಿತು. ವಿಜ್ಞಾನ ಪುಸ್ತಕದಲ್ಲಿ ಓದಿದ್ದೆ, ಈಗ ನಿಜವಾಗಿ ನೋಡಿ ತಿಳಿದುಕೊಂಡೆ’ ಎಂದು ಬೇಲೂರು ರಸ್ತೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ದೊರೆ ಹೇಳಿದರು.<br /><br />ತಾಲ್ಲೂಕು ಕೇಂದ್ರಗಳಲ್ಲಿಯೂ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ನಗರದ ಅಂಬೇಡ್ಕರ್ ಶಾಲೆ, ಬಿ.ಜಿ.ಎಸ್ ಶಾಲೆ, ಕುರುವಂಗಿ ಪ್ರೌಢಶಾಲೆ, ಮೋರಾರ್ಜಿದೇಸಾಯಿ ಶಾಲೆ, ಆಲ್ದೂರ್ ಶಾಲೆ ವಿದ್ಯಾರ್ಥಿಗಳು ಸೂರ್ಯಗ್ರಹಣ ವೀಕ್ಷಸಿದರು.</p>.<p><strong>ಗ್ರಹಣ ಸಮಯ; ಜನ ದಟ್ಟಣೆ ಕಡಿಮೆ</strong></p>.<p>ನಗರದ ರಸ್ತೆಗಳು, ವಿವಿಧೆಡೆಗಳಲ್ಲಿ ಗುರುವಾರ ಬೆಳಿಗ್ಗೆ ಜನ ಮತ್ತು ವಾಹನ ದಟ್ಟಣೆ ಮಾಮೂಲಿಗಿಂತ ಕಡಿಮೆ ಇತ್ತು.</p>.<p>ಕೆಲ ಸಂಪ್ರದಾಯಸ್ಥರಂತೂ ಗ್ರಹಣ ಮುಗಿಯುವವರೆಗೂ ಮನೆಯಿಂದ ಹೊರಗೂ ಬರಲಿಲ್ಲ. ಕೆಲವರು ಮನೆಯಲ್ಲಿ ಟಿವಿಯಲ್ಲಿ ಗ್ರಹಣ ವೀಕ್ಷಿಸಿದರು. ಗ್ರಹಣ ಮುಗಿದ ನಂತರ ಕೆಲ ವ್ಯಾಪಾರಿಗಳು ಅಂಗಡಿ, ಮಳಿಗೆ ತೆರೆದರು.</p>.<p><strong>ಪೂಜೆ:</strong> ಮತ್ತೆ ಕೆಲವರು ಗ್ರಹಣ ಮುಗಿದ ನಂತರ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>