<p><strong>ಶೃಂಗೇರಿ</strong>: ‘ಕುರ್ಚಿ ಜೋಡಿಸಿ ಬ್ಯಾನರ್ ಕಟ್ಟುವುದು, ಅತಿಥಿಗಳನ್ನು ಬರಮಾಡಿಕೊಂಡು ಕನ್ನಡಕ್ಕಾಗಿ ಬಾವುಟ ಹಿಡಿದು ಕನ್ನಡ ಕಟ್ಟಿದವರು ಶಿಕ್ಷಕ ಮಂಜುನಾಥ ಗೌಡರು’ ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ಕುಂದೂರು ಅಶೋಕ್ ಹೇಳಿದರು.</p>.<p>ಶೃಂಗೇರಿಯ ಪಟ್ಟಣದ ಮಂಜುನಾಥಗೌಡ ಅವರ ಮನೆಯಂಗಳದಲ್ಲಿ ಕರ್ನಾಟಕ ವಿಕಾಸ ರಂಗ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕನ್ನಡಕ್ಕಾಗಿ ದುಡಿದವರು ಎಂಬ ಕಾರ್ಯಕ್ರಮದಲ್ಲಿ ಶಿಕ್ಷಕ ಮಂಜುನಾಥ ಗೌಡ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.</p>.<p>ತೆರೆಮರೆಯಲ್ಲಿ ದುಡಿದ ಮಂಜುನಾಥ ಗೌಡ ಅವರು ಕನ್ನಡದ ಕಟ್ಟಾಳು. ಕನ್ನಡ ಪಂಡಿತರಾಗಿ ಸಂಬಳಕ್ಕೆ ಸೀಮಿತವಾಗದೆ ಕನ್ನಡ ಪರಿಚಾರಿಕೆ ಮಾಡಿದವರು ಎಂದರು.</p>.<p>ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಗಡೆ ಮಾತನಾಡಿ, ಶೃಂಗೇರಿಯ ಎಲ್ಲ ಕನ್ನಡದ ಕೆಲಸಗಳಲ್ಲಿಯೂ ಮಂಜುನಾಥಗೌಡ ಮುಂಚೂಣಿಯಲ್ಲಿ ಇರುತ್ತಾರೆ. ಅವರೆಂದೂ ಸನ್ಮಾನ, ಪ್ರಶಸ್ತಿಗಾಗಿ ಕನ್ನಡದ ಪರಿಚಾರಿಕೆ ಮಾಡಿದವರಲ್ಲ ಎಂದರು.</p>.<p>ಕಾರ್ಯಕ್ರಮದಲ್ಲಿ ಡಾ.ಮೋಹನ್ ಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್ ಸುಬ್ರಹ್ಮಣ್ಯ,<br />ಎಚ್.ಎ.ಪ್ರಕಾಶ್, ಅಂಗುರ್ಡಿ ದಿನೇಶ್, ಛಾಯಾಪತಿ, ಸಂತೋಷ್ ಕಾಳ್ಯ ಭಾಗವಹಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ</strong>: ‘ಕುರ್ಚಿ ಜೋಡಿಸಿ ಬ್ಯಾನರ್ ಕಟ್ಟುವುದು, ಅತಿಥಿಗಳನ್ನು ಬರಮಾಡಿಕೊಂಡು ಕನ್ನಡಕ್ಕಾಗಿ ಬಾವುಟ ಹಿಡಿದು ಕನ್ನಡ ಕಟ್ಟಿದವರು ಶಿಕ್ಷಕ ಮಂಜುನಾಥ ಗೌಡರು’ ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ಕುಂದೂರು ಅಶೋಕ್ ಹೇಳಿದರು.</p>.<p>ಶೃಂಗೇರಿಯ ಪಟ್ಟಣದ ಮಂಜುನಾಥಗೌಡ ಅವರ ಮನೆಯಂಗಳದಲ್ಲಿ ಕರ್ನಾಟಕ ವಿಕಾಸ ರಂಗ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕನ್ನಡಕ್ಕಾಗಿ ದುಡಿದವರು ಎಂಬ ಕಾರ್ಯಕ್ರಮದಲ್ಲಿ ಶಿಕ್ಷಕ ಮಂಜುನಾಥ ಗೌಡ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.</p>.<p>ತೆರೆಮರೆಯಲ್ಲಿ ದುಡಿದ ಮಂಜುನಾಥ ಗೌಡ ಅವರು ಕನ್ನಡದ ಕಟ್ಟಾಳು. ಕನ್ನಡ ಪಂಡಿತರಾಗಿ ಸಂಬಳಕ್ಕೆ ಸೀಮಿತವಾಗದೆ ಕನ್ನಡ ಪರಿಚಾರಿಕೆ ಮಾಡಿದವರು ಎಂದರು.</p>.<p>ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಗಡೆ ಮಾತನಾಡಿ, ಶೃಂಗೇರಿಯ ಎಲ್ಲ ಕನ್ನಡದ ಕೆಲಸಗಳಲ್ಲಿಯೂ ಮಂಜುನಾಥಗೌಡ ಮುಂಚೂಣಿಯಲ್ಲಿ ಇರುತ್ತಾರೆ. ಅವರೆಂದೂ ಸನ್ಮಾನ, ಪ್ರಶಸ್ತಿಗಾಗಿ ಕನ್ನಡದ ಪರಿಚಾರಿಕೆ ಮಾಡಿದವರಲ್ಲ ಎಂದರು.</p>.<p>ಕಾರ್ಯಕ್ರಮದಲ್ಲಿ ಡಾ.ಮೋಹನ್ ಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್ ಸುಬ್ರಹ್ಮಣ್ಯ,<br />ಎಚ್.ಎ.ಪ್ರಕಾಶ್, ಅಂಗುರ್ಡಿ ದಿನೇಶ್, ಛಾಯಾಪತಿ, ಸಂತೋಷ್ ಕಾಳ್ಯ ಭಾಗವಹಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>