ಗುರಿ ನಿರ್ದಿಷ್ಟವಾಗಿತ್ತು. ಸಾಧನೆ ಮಾಡುವ ಸಾಮರ್ಥ್ಯ ನನ್ನಲ್ಲಿದೆ ಎಂಬ ವಿಶ್ವಾಸವೂ ಇತ್ತು. ಪ್ರತಿ ಬಾರಿ ಸೋತಾಗಲೂ ಆತ್ಮವಿಶ್ವಾಸ ಹೆಚ್ಚುತ್ತಿತ್ತು. ‘ಎದೆಗೆ ಬಿದ್ದ ಅಕ್ಷರ, ಇಳೆಗೆ ಬಿದ್ದ ಬೀಜ; ಇಂದಲ್ಲ ನಾಳೆ ಫಲ ನೀಡುತ್ತದೆ’ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಮುನ್ನಡೆಯುತ್ತಿದ್ದೇನೆ. ಕುವೆಂಪು ಸಾಹಿತ್ಯ, ನೆಲ್ಸನ್ ಮಂಡೇಲಾ, ಅಬ್ದುಲ್ ಕಲಾಂ ಮೊದಲಾದ ಮಹನೀಯರ ಜೀವನ ಚರಿತ್ರೆ ಓದಿದ್ದೆ. ಪೋಷಕರ ಪ್ರೋತ್ಸಾಹ ಸದಾ ಬೆನ್ನಿಗಿತ್ತು. ಐದನೇ ಬಾರಿಗೆ ಯುಶಸ್ಸು ಸಾಧಿಸಿದೆ.