<p><strong>ಚಳ್ಳಕೆರೆ</strong>: ಜುಲೈ 8ರ ಶನಿವಾರ ಬೆಂಗಳೂರಿನಿಂದ ಕಾಶಿ ತೀರ್ಥಯಾತ್ರೆಗೆ ಪಾದಯಾತ್ರೆ ಹೊರಟ 30 ಯಾತ್ರಾರ್ಥಿಗಳ ತಂಡ ಶುಕ್ರವಾರ ಪರಶುರಾಂಪುರ ಮಾರ್ಗದಿಂದ ಚಳ್ಳಕೆರೆಗೆ ಬಂದಿತು.</p>.<p>ಯಾತ್ರೆಯ ನೇತೃತ್ವ ವಹಿಸಿರುವ ಬೆಂಗಳೂರಿನ ಗುರು ಶ್ರೀಸ್ವಾಮಿ ದಾಸರು, ಮಾರ್ಗದ ಉದ್ದಕ್ಕೂ ಭಜನೆ, ವಾಸ್ತವ್ಯ ಹೂಡಿದ ಸ್ಥಳದಲ್ಲಿ ಪ್ರತಿದಿನ ರಾತ್ರಿ ಪ್ರವಚನ, ದೇವರಧ್ಯಾನ, ನಾಮಸಂಕೀರ್ತನೆ ಮುಂತಾದ ಕಾರ್ಯಕ್ರಮ ನಡೆಸಲಾಗುವುದು. ದಾರಿ ಉದ್ದಕ್ಕೂ ಭಕ್ತರು ನೀಡಿದ ಅನ್ನ-ಪ್ರಸಾದ ಸ್ವೀಕರಿಸಲಾಗುವುದು. ಹೊಸಪೇಟೆ, ಹುನಗುಂದ, ಆಲಮಟ್ಟಿ, ಬಿಜಾಪುರ, ಪುಣೆ, ಅಂಕೋಲ, ನಾಸಿಕ್, ಉಜ್ಜಯಿನಿ, ಭೂಪಾಲ್, ಅಲಹಬಾದ್, ಅಯೋಧ್ಯೆ ಮಾರ್ಗದ ಮೂಲಕ (ವಾರಾಣಸಿ) ಕಾಶಿ ತಲುಪಲಾಗುವುದು’ ಎಂದು ಹೇಳಿದರು.</p>.<p>ಚಳ್ಳಕೆರೆ ಹೊರ ವಲಯದ ಚಳ್ಳಕೇರಮ್ಮ ದೇವಸ್ಥಾನದ ಬಳಿ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯದ ನಂತರ ಯಲಹಂಕದ ಕೃಷ್ಣಪ್ಪ, ಎಸ್.ನಾಗರಾಜರೆಡ್ಡಿ, ರಾಮಮೂರ್ತಿ, ತುಳಸಿರಾಂ, ಚಂದ್ರಮೌಳಿಶಾಸ್ತ್ರಿ, ಶಿವರುದ್ರಯ್ಯ, ಹನುಮಂತರೆಡ್ಡಿ, ಗೌರಮ್ಮ, ಮುನಿರತ್ನ, ರಾಜೇಂದ್ರ ಪ್ರಸಾದ್ ಸೇರಿದಂತೆ 30 ಯಾತ್ರಾರ್ಥಿಗಳು ಹೊಸಪೇಟೆ ಮಾರ್ಗದತ್ತ ಪಾದಯಾತ್ರೆ ಬೆಳೆಸಿದರು.</p>.<p>ಡಿ.ಉಪ್ಪಾರಹಟ್ಟಿ ಈರಣ್ಣಸ್ವಾಮಿ, ಸಾಣಿಕೆರೆ ನಿಜಲಿಂಗಪ್ಪಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ</strong>: ಜುಲೈ 8ರ ಶನಿವಾರ ಬೆಂಗಳೂರಿನಿಂದ ಕಾಶಿ ತೀರ್ಥಯಾತ್ರೆಗೆ ಪಾದಯಾತ್ರೆ ಹೊರಟ 30 ಯಾತ್ರಾರ್ಥಿಗಳ ತಂಡ ಶುಕ್ರವಾರ ಪರಶುರಾಂಪುರ ಮಾರ್ಗದಿಂದ ಚಳ್ಳಕೆರೆಗೆ ಬಂದಿತು.</p>.<p>ಯಾತ್ರೆಯ ನೇತೃತ್ವ ವಹಿಸಿರುವ ಬೆಂಗಳೂರಿನ ಗುರು ಶ್ರೀಸ್ವಾಮಿ ದಾಸರು, ಮಾರ್ಗದ ಉದ್ದಕ್ಕೂ ಭಜನೆ, ವಾಸ್ತವ್ಯ ಹೂಡಿದ ಸ್ಥಳದಲ್ಲಿ ಪ್ರತಿದಿನ ರಾತ್ರಿ ಪ್ರವಚನ, ದೇವರಧ್ಯಾನ, ನಾಮಸಂಕೀರ್ತನೆ ಮುಂತಾದ ಕಾರ್ಯಕ್ರಮ ನಡೆಸಲಾಗುವುದು. ದಾರಿ ಉದ್ದಕ್ಕೂ ಭಕ್ತರು ನೀಡಿದ ಅನ್ನ-ಪ್ರಸಾದ ಸ್ವೀಕರಿಸಲಾಗುವುದು. ಹೊಸಪೇಟೆ, ಹುನಗುಂದ, ಆಲಮಟ್ಟಿ, ಬಿಜಾಪುರ, ಪುಣೆ, ಅಂಕೋಲ, ನಾಸಿಕ್, ಉಜ್ಜಯಿನಿ, ಭೂಪಾಲ್, ಅಲಹಬಾದ್, ಅಯೋಧ್ಯೆ ಮಾರ್ಗದ ಮೂಲಕ (ವಾರಾಣಸಿ) ಕಾಶಿ ತಲುಪಲಾಗುವುದು’ ಎಂದು ಹೇಳಿದರು.</p>.<p>ಚಳ್ಳಕೆರೆ ಹೊರ ವಲಯದ ಚಳ್ಳಕೇರಮ್ಮ ದೇವಸ್ಥಾನದ ಬಳಿ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯದ ನಂತರ ಯಲಹಂಕದ ಕೃಷ್ಣಪ್ಪ, ಎಸ್.ನಾಗರಾಜರೆಡ್ಡಿ, ರಾಮಮೂರ್ತಿ, ತುಳಸಿರಾಂ, ಚಂದ್ರಮೌಳಿಶಾಸ್ತ್ರಿ, ಶಿವರುದ್ರಯ್ಯ, ಹನುಮಂತರೆಡ್ಡಿ, ಗೌರಮ್ಮ, ಮುನಿರತ್ನ, ರಾಜೇಂದ್ರ ಪ್ರಸಾದ್ ಸೇರಿದಂತೆ 30 ಯಾತ್ರಾರ್ಥಿಗಳು ಹೊಸಪೇಟೆ ಮಾರ್ಗದತ್ತ ಪಾದಯಾತ್ರೆ ಬೆಳೆಸಿದರು.</p>.<p>ಡಿ.ಉಪ್ಪಾರಹಟ್ಟಿ ಈರಣ್ಣಸ್ವಾಮಿ, ಸಾಣಿಕೆರೆ ನಿಜಲಿಂಗಪ್ಪಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>